ಆ್ಯಪ್ನಗರ

ಮಾಧ್ಯಮಗಳೆದುರು ಮಾಜಿ ಪ್ರಧಾನಿ ದೇವೇಗೌಡರ ಮೌನ ವ್ರತ!

ಗಂಟು ನೋವು ಶಮನ ನಿಟ್ಟಿನಲ್ಲಿ ಐದರಿಂದ ಎಂಟು ದಿನಗಳ ಕಾಲ ಎಚ್. ಡಿ. ದೇವೇಗೌಡರು ಚಿಕಿತ್ಸೆ ಪಡೆಯಲಿದ್ದಾರೆ. ಈ ಹಿನ್ನೆಲೆ ಮೂಳೂರಿನ ಸಾಯಿರಾಧಾ ಹೆಲ್ತ್ ರೆಸಾರ್ಟ್‍ಗೆ ಪತ್ನಿ ಚೆನ್ನಮ್ಮ ಸಹಿತರಾಗಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು ಬಂದರು.

Vijaya Karnataka Web 9 May 2019, 3:51 pm
ಉಡುಪಿ: ಉಡುಪಿ ಸಮೀಪದ ಮೂಳೂರಿನ ಸಾಯಿರಾಧಾ ಹೆಲ್ತ್ ರೆಸಾರ್ಟ್‍ಗೆ ಪತ್ನಿ ಚೆನ್ನಮ್ಮ ಸಹಿತರಾಗಿ ಬಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಗುರುವಾರ ಮಾಧ್ಯಮಗಳೆದುರು ಮೌನ ವ್ರತ ಪಾಲಿಸಿದರು.
Vijaya Karnataka Web hdd 1


ಬೆಂಗಳೂರಿನಿಂದ ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮಾಜಿ ಪ್ರಧಾನಿ ಕಾರಿನ ಮೂಲಕ ಕಾಪು ರೆಸಾರ್ಟ್‍ಗೆ ಬಂದರು. ಏಪ್ರಿಲ್ 28ರಂದು ಪುತ್ರ ಕುಮಾರಸ್ವಾಮಿ ಜತೆ ಬಂದಿದ್ದ ಮಾಜಿ ಪ್ರಧಾನಿ ಮೇ 3ರಂದು ಕೊಪ್ಪದಲ್ಲಿ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮಕ್ಕೆ ತೆರಳಿದ್ದರು.

ಪತ್ನಿ ಜತೆಗೆ ದೇವೇಗೌಡರು

ಬಳಿಕ ನಡೆದಾಡಲು ಕಷ್ಟ ಪಡುತ್ತಿದ್ದ ಎಚ್.ಡಿ.ದೇವೇಗೌಡರ ಮೊಣಗಂಟಿಗೆ ಆಯುರ್ವೇದ/ಜ್ಯೋತಿಷ್ಯ ತಜ್ಞ ಡಾ. ತನ್ಮಯ ಗೋಸ್ವಾಮಿ ನೇತೃತ್ವದ ತಂಡ ಐದು ದಿನಗಳ ಕಾಲ ಮಸಾಜ್ ಮಾಡಿದ್ದು ಶೇ. 50ರಷ್ಟು ಗುಣಮುಖರಾಗಿ ಶೃಂಗೇರಿ ಮೂಲಕ ಬೆಂಗಳೂರಿಗೆ ತೆರಳಿದ್ದರು.

ಗಂಟು ನೋವು ಶಮನ ನಿಟ್ಟಿನಲ್ಲಿ ಐದರಿಂದ ಎಂಟು ದಿನಗಳ ಕಾಲ ಎಚ್.ಡಿ.ದೇವೇಗೌಡರು ಚಿಕಿತ್ಸೆ ಪಡೆಯಲಿದ್ದಾರೆ. ಜೆಡಿಎಸ್ ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹಾ, ಯುವ ಜನತಾದಳ ಅಧ್ಯಕ್ಷ ಅಕ್ಷಿತ ಸುವರ್ಣ, ಮಹಿಳಾ ಘಟಕದ ಅಧ್ಯಕ್ಷೆ ಸುಮತಿ ಹೆಗ್ಡೆ, ಜೆಡಿಎಸ್ ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ, ಧನರಾಜ್, ಯುವ ಜನತಾದಳದ ರತೀಶ್, ಮಹಮ್ಮದ್ ಆಸಿಫ್, ಹಿತೇಶ್ ರೈ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ