ಆ್ಯಪ್ನಗರ

ನಾಯಿಯೊಂದಿಗೆ ಕುಟುಂಬ ನದಿಗೆ ಹಾರಿದ ಪ್ರಕರಣ: ಮೂರನೇ ದಿನವೂ ಯುವಕನ ಸುಳಿವಿಲ್ಲ

ಒಂದು ಸಾವಿನ ಪರಿಣಾಮ ಇಡೀ ಕುಟುಂಬ ದುರಂತ ಅಂತ್ಯ ಕಂಡಿದ್ದು, ಇದಕ್ಕೆ ಮನೆಯ ಮೂಕಪ್ರಾಣಿ ಸಾಕುನಾಯಿ ಸಾಕ್ಷಿಯಾಯಿತು...

Vijaya Karnataka 1 Oct 2019, 7:28 am
ಬಂಟ್ವಾಳ: ಸಾಕುನಾಯಿಯೊಂದಿಗೆ ಮೈಸೂರಿನಲ್ಲಿನೆಲೆಸಿದ್ದ ಕೊಡಗಿನ ಕುಟುಂಬ ಶನಿವಾರ ಬಿ.ಸಿ.ರೋಡಿನ ಸೇತುವೆಯಿಂದ ನದಿಗೆ ಹಾರಿದ ಪ್ರಕರಣಕ್ಕೆ ಸಂಬಂಧಿಸಿ ಎರಡು ಮೃತದೇಹಗಳ ಅಂತ್ಯಕ್ರಿಯೆ ಸೋಮವಾರ ನಡೆಯಿತು. ಆದರೆ ನದಿಗೆ ಹಾರಿದ ಯುವಕನ ಸುಳಿವು ಸೋಮವಾರವೂ ದೊರಕಿಲ್ಲ.
Vijaya Karnataka Web River Die


ಮೈಸೂರು ಪಿ.ಎಸ್‌.ನಗರದಲ್ಲಿ ನೆಲೆಸಿರುವ ಕುಟುಂಬದ ಕವಿತಾ ಮಂದಣ್ಣ(55), ಪುತ್ರ ಕೌಶಿಕ್‌ ಮಂದಣ್ಣ (30) ಹಾಗೂ ಪುತ್ರಿ ಕಲ್ಪಿತಾ ಮಂದಣ್ಣ(20) ಅವರು ತಮ್ಮ ಮಾರುತಿ ಇಕೋ ಕಾರನ್ನು ಬಿ.ಸಿ.ರೋಡಿನ ನೇತ್ರಾವತಿ ಸೇತುವೆ ಬಳಿ ಶನಿವಾರ ನಿಲ್ಲಿಸಿ ತಮ್ಮ ಮುದ್ದಿನ ನಾಯಿ ಸ್ನೂಪಿಯೊಂದಿಗೆ ನದಿಗೆ ಹಾರಿದ್ದರು. ಈ ಸಂದರ್ಭ ಕವಿತಾ ಮಂದಣ್ಣ ಮತ್ತು ನಾಯಿಯನ್ನು ಈಜುಗಾರರು ಮೇಲಕ್ಕೆತ್ತಿದರೂ ಒಂದೆರಡು ಗಂಟೆಯಲ್ಲಿ ಕವಿತಾ ಮೃತಪಟ್ಟಿದ್ದರು. ಭಾನುವಾರ ಮಧ್ಯಾಹ್ನದ ವೇಳೆಗೆ ಕಲ್ಪಿತಾ ಶವ ಕೊಣಾಜೆ ಠಾಣಾ ವ್ಯಾಪ್ತಿಯ ಇನೋಳಿ ಸಮೀಪ ದೊರಕಿತ್ತು.

ಮನೆ ಯಜಮಾನನ ಸಾವು: ನೊಂದ ಕುಟುಂಬದಿಂದ ಸಾಮೂಹಿಕ ಆತ್ಮಹತ್ಯೆ!

ಸೋಮವಾರವೂ ಕೌಶಿಕ್‌ ಹುಡುಕಾಟ ದಿನವಿಡೀ ನಡೆಯಿತು. ಪಾಂಡೇಶ್ವರ ಅಗ್ನಿಶಾಮಕ ದಳದ 6 ಮಂದಿ ಸಿಬಂದಿ ತುಂಬೆ ಡ್ಯಾಂನ ಕೆಳ ಪ್ರದೇಶದಲ್ಲಿಹಾಗೂ ಎನ್‌ಡಿಆರ್‌ಎಫ್‌ನ ಸಿಬಂದಿ ಉಳ್ಳಾಲ ಸೇತುವೆ ಪ್ರದೇಶದಲ್ಲಿಹುಡುಕಾಟ ನಡೆಸಿದ್ದಾರೆ. ಈ ಮಧ್ಯೆ ಮೃತರ ಕುಟುಂಬದವರು ಸೋಮವಾರ ಆಗಮಿಸಿದ್ದು, ತುಂಬೆ ಹಾಗೂ ದೇರಳಕಟ್ಟೆ ಆಸ್ಪತ್ರೆಯ ಶವಾಗಾರದಲ್ಲಿದ್ದ ಮೃತದೇಹಗಳನ್ನು ಸೋಮವಾರ ಪೊಲೀಸರು ಕುಟುಂಬಕ್ಕೆ ಹಸ್ತಾಂತರ ಮಾಡಿದರು. ಕುಟುಂಬದವರು ಮಂಗಳೂರಿನಲ್ಲಿಅಂತ್ಯಕ್ರಿಯೆ ನಡೆಸಿದ್ದಾರೆ. ಪಾಣೆಮಂಗಳೂರಿನಲ್ಲಿ ಪತ್ತೆಯಾದ ಮೃತದೇಹದ ಕುರಿತು ಬಂಟ್ವಾಳ ನಗರ ಪೊಲೀಸ್‌ ಠಾಣೆ ಹಾಗೂ ಇನೋಳಿಯಲ್ಲಿಪತ್ತೆಯಾದ ಮೃತದೇಹದ ಕುರಿತು ಕೋಣಾಜೆ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದೆ. ಬದುಕಿದ ನಾಯಿಯನ್ನೂ ಮೃತಪಟ್ಟವರ ಕುಟುಂಬದವರಿಗೆ ಹಸ್ತಾಂತರಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ