ಆ್ಯಪ್ನಗರ

ಉಡುಪಿಯಲ್ಲಿ ದಾಖಲಾಯ್ತು ಮೊದಲ ತ್ರಿವಳಿ ತಲಾಖ್‌ ಪ್ರಕರಣ

ಕುಂದಾಪುರ ತಾಲೂಕಿನ ಕೋಟೇಶ್ವರ ಸಮೀಪದ ಮೂಡು ಗೋಪಾಡಿ ಗ್ರಾಮದ 27 ವರ್ಷದ ಅಲ್ಫಿಯಾ ಅಖ್ತರ್‌ ಪ್ರಕರಣ ದಾಖಲಿಸಿದ ಮಹಿಳೆಯಾಗಿದ್ದಾರೆ. ತಮ್ಮ ಪತಿ ಹಿರಿಯಡ್ಕ ನಿವಾಸಿ 32 ವರ್ಷದ ಹನೀಫ್‌ ಸಯ್ಯದ್‌ ವಿರುದ್ಧ ಅವರು ಈ ದೂರು ದಾಖಲಿಸಿದ್ದಾರೆ.

Vijaya Karnataka Web 9 Sep 2019, 8:41 pm
ಉಡುಪಿ: ಮೊದಲ ತ್ರಿವಳಿ ತಲಾಖ್‌ ಪ್ರಕರಣಕ್ಕೆ ಉಡುಪಿ ಜಿಲ್ಲೆ ಸಾಕ್ಷಿಯಾಗಿದೆ. ಇಲ್ಲಿನ ಕುಂದಾಪುರದಲ್ಲಿ ಮುಸ್ಲಿಂ ಮಹಿಳಾ (ವಿವಾಹ ಹಕ್ಕು ರಕ್ಷಣಾ) ಮಸೂದೆ 2019ರ ಅಡಿಯಲ್ಲಿ ಭಾನುವಾರ ಮೊದಲ ದೂರು ದಾಖಲಾಗಿದೆ.
Vijaya Karnataka Web Triple Talaq


ಕುಂದಾಪುರ ತಾಲೂಕಿನ ಕೋಟೇಶ್ವರ ಸಮೀಪದ ಮೂಡು ಗೋಪಾಡಿ ಗ್ರಾಮದ 27 ವರ್ಷದ ಅಲ್ಫಿಯಾ ಅಖ್ತರ್‌ ಪ್ರಕರಣ ದಾಖಲಿಸಿದ ಮಹಿಳೆಯಾಗಿದ್ದಾರೆ. ತಮ್ಮ ಪತಿ ಹಿರಿಯಡ್ಕ ನಿವಾಸಿ 32 ವರ್ಷದ ಹನೀಫ್‌ ಸಯ್ಯದ್‌ ವಿರುದ್ಧ ಅವರು ಈ ದೂರು ದಾಖಲಿಸಿದ್ದಾರೆ.

ದೂರಿನ ಪ್ರಕಾರ ಆಗಸ್ಟ್‌ 15ರಂದು ಸಯ್ಯದ್‌ ಮೂರು ಬಾರಿ ತಲಾಖ್‌ ಹೇಳಿದ್ದರು. ಮತ್ತು ಇದನ್ನು ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿಕೊಂಡಿದ್ದರು. ತಲಾಖ್‌ ನೀಡಿದ ಎರಡು ದಿನಗಳ ನಂತರ ಸಯ್ಯದ್‌ ಪತ್ನಿಯನ್ನು ತವರು ಮನೆಯಲ್ಲಿ ಬಿಟ್ಟು ಹೋಗಿದ್ದರು. ಇಬ್ಬರೂ ವಿಚ್ಛೇದಿತರಾಗಿದ್ದು ಜುಲೈ 4, 2019ರಂದು ಎರಡನೇ ಬಾರಿ ಮದುವೆಯಾಗಿದ್ದರು.

ತಲಾಖ್‌ ನೀಡಿದ್ದು ಮಾತ್ರವಲ್ಲದೆ ಗಂಡನ ಮನೆಯವರು ಅಲ್ಫಿಯಾಗೆ ಹೆಚ್ಚಿನ ವರದಕ್ಷಿಣೆಗಾಗಿ ದೈಹಿಕ ಮತ್ತು ಮಾನಸಿಕ ಹಿಂಸೆಯನ್ನೂ ನೀಡಿದ್ದರು. ಇದಕ್ಕೂ ಮೊದಲು ಮದುವೆ ಸಂದರ್ಭದಲ್ಲಿ ಮದುವೆ ಖರ್ಚು 2 ಲಕ್ಷ ರೂಪಾಯಿ ಹಾಗೂ ವರದಕ್ಷಿಣೆಯಾಗಿ 2 ಲಕ್ಷ ರೂಪಾಯಿಗಳನ್ನು ಮಹಿಳೆಯ ತಂದೆ ಮತ್ತು ಸಹೋದರರು ಭರಿಸಿದ್ದರು ಎಂಬುದಾಗಿ ದೂರಿನಲ್ಲಿ ಹೇಳಲಾಗಿದೆ.

ತಲಾಖ್‌ ನೀಡಿದ ನಂತರ ಸಯ್ಯದ್‌ ತಮ್ಮ ವಕೀಲರ ಮೂಲಕ ಮದುವೆ ಮುರಿದು ಬಿದ್ದಿದೆ ಎಂಬುದಾಗಿ ನೋಟಿಸ್‌ ಕಳುಹಿಸಿದ್ದರು. ಇದರಲ್ಲಿ ಇತರ ಆರೋಪಗಳನ್ನೂ ಅವರು ಅಲ್ಫಿಯಾ ಮೇಲೆ ಹೊರಿಸಿದ್ದರು.

ಇದೀಗ ಅಲ್ಫಿಯಾ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ವರದಕ್ಷಿಣೆ ನಿಷೇಧ ಕಾಯ್ದೆ ಮತ್ತು ಮುಸ್ಲಿಂ ಮಹಿಳಾ (ವಿವಾಹ ಹಕ್ಕು ರಕ್ಷಣಾ) ಮಸೂದೆ 2019ರ ಸೆಕ್ಷನ್‌ 4ರ ಅನ್ವಯ ದೂರು ದಾಖಲಿಸಿಕೊಂಡಿದ್ದಾರೆ. ಈ ಕಾನೂನಿನ ಅನ್ವಯ ಯಾವುದೇ ರೂಪದಲ್ಲಿ ತಲಾಖ್‌ ನೀಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡವನ್ನು ಹಾಕಬಹುದಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ