ಉಡುಪಿ: ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿ 7 ಮೀನುಗಾರರ ಸಹಿತ ಕಣ್ಮರೆಯಾಗಿದ್ದ ಸುವರ್ಣ ತ್ರಿಭುಜ ಬೋಟ್ ಅವಘಡದಲ್ಲಿ ನೌಕಾಪಡೆಯನ್ನು ರಕ್ಷಿಸಲು ಸತ್ಯಾಂಶ ಮರೆಮಾಚಲಾಗಿದೆ. ಅಧಿಕಾರಿಗಳು ನಿಜ ಹೇಳಲು ಮುಂದೆ ಬಂದು ಕೊನೆ ಕ್ಷಣದಲ್ಲಿ ಒಪ್ಪಿಕೊಂಡಿಲ್ಲ. ಬೋಟ್ ಅವಘಡದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ಅನ್ಯಾಯ ಎಸಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಸಹಕಾರಿ ಮೀನು ಮಾರ್ಕೆಟಿಂಗ್ ಫೆಡರೇಶನ್ನ ಅಧ್ಯಕ್ಷ ಗಣಪತಿ ಮಾಂಗ್ರೆ ಆರೋಪಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುವರ್ಣ ತ್ರಿಭುಜ ಬೋಟ್ ಅವಘಡಕ್ಕೆ ಯಾರು ಕಾರಣ ಏನ್ನುವುದು ಗೊತ್ತಿದೆ. ಅವಘಡ ಮಾಡಿರುವ ತಪ್ಪನ್ನು ಒಪ್ಪಿಕೊಂಡರೆ 7 ಮಂದಿ ಮೀನುಗಾರರ ರಕ್ಷಣೆ ಮಾಡಲು ಸಾಧ್ಯವಾಗದೇ ಇರುವವರು ಈ ದೇಶದ ರಕ್ಷಣೆ ಹೇಗೆ ಮಾಡುತ್ತಾರೆ ಎನ್ನುವ ಪ್ರಶ್ನೆಗೆ ಅಂಜಿ ಹಿಂದೇಟು ಹಾಕುತ್ತಿದ್ದಾರೆ. ಬೋಟ್ ಅವಘಡವಾಗಿದ್ದು, ನೌಕಾಪಡೆಯ ಬೋಟ್ನ್ನು ರಿಪೇರಿ ಮಾಡಿರುವ ಎಲ್ಲಾ ವಿಚಾರವೂ ತಿಳಿಸಿದೆ ಎಂದರು.
ಮೃತರಾದ ಮೀನುಗಾರರ ಕುಟುಂಬಕ್ಕೆ ದೊಡ್ಡ ಮೊತ್ತದ ಪರಿಹಾರಕ್ಕೆ ಶ್ರಮಿಸಿದ್ದೇವೆ. ರಾಜ್ಯದಿಂದ ಪರಿಹಾರ ಸಿಕ್ಕಿದ್ದು, ಕೇಂದ್ರದ ಹಣ ಬಂದಿಲ್ಲ. ಬೋಟ್ ಅವಘಡವಾಗಿರುವ ಸ್ಥಳವನ್ನು ಗುರುತಿಸಿದ್ದಾರೆ. ಆ ಬೋಟ್ ಮೇಲೆತ್ತುವ ಕೆಲಸ ಮಾಡಿಲ್ಲ. ಬೋಟ್ನಲ್ಲಿದ್ದ ಮೀನುಗಾರರ ಮೃತದೇಹವನ್ನು ತೆಗೆದು ಮೋಕ್ಷ ನೀಡಲು ಮೀನುಗಾರರಿಗೆ ಅವಕಾಶ ಕೊಡಿ ಎಂದು ಪರಿ ಪರಿಯಾಗಿ ಕೇಳಿಕೊಂಡರೂ ಬಿಟ್ಟಿಲ್ಲ. ಕಡಲ ಕಿನಾರೆಯಲ್ಲಿ ನಮಗೆ ಆ ದೇಹದ ಆಕ್ರಂದನ ಕೇಳುತ್ತಿದೆ ಎಂದರು.
ಸುವರ್ಣ ತ್ರಿಭುಜ ಬೋಟ್ ನಾಪತ್ತೆ ಪ್ರಕರಣ ನಾಪತ್ತೆಯಾದ ಅಣ್ಣನ ಚಿಂತೆಯಲ್ಲಿ ತಮ್ಮ ಆತ್ಮಹತ್ಯೆ
ಮೀನುಗಾರಿಕೆ ವೇಳೆ ಮೃತರಾದ ಮೀನುಗಾರರಿಗೆ ಸರಕಾರ ಕೊಡುವ ಸಂಕಷ್ಟ ಪರಿಹಾರ ನಿಧಿಯ ಹಣ ಸರಕಾರ ಕೈಯಿಂದ ಕೊಡುತ್ತಿಲ್ಲ. ಅದು ಮೀನುಗಾರರ ಹಣ. ನಮ್ಮಿಂದ ತೆರಿಗೆ ಸಹಿತ ನಾನಾ ರೂಪದಲ್ಲಿ ಕ್ರೋಢೀಕರಿಸುವ ಹಣದಿಂದ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಸರಕಾರ ಆಳ ಸಮುದ್ರದಲ್ಲಿ ಮೃತಪಟ್ಟರೆ 6 ಲಕ್ಷ ರೂ. ನದಿಯಲ್ಲಿ ಬಿದ್ದರೆ 3 ಲಕ್ಷ ರೂ. ಎನ್ನುವ ತಾರತಮ್ಯ ಮಾಡಬಾರದು. ಮೀನುಗಾರರ ವಿಚಾರದಲ್ಲಿ ಕರಾವಳಿ ಕಾವಲು ಪಡೆ, ಕೋಸ್ಟ್ ಗಾರ್ಡ್ ನಿರ್ಜೀವವಾಗಿದೆ. ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಒತ್ತಾಯಿಸಿದರು.
ಸುವರ್ಣ ತ್ರಿಭುಜ ಬೋಟ್ : ರಾಜ್ಯ, ಕೇಂದ್ರ ಸರಕಾರಕ್ಕೆ ಮಾನವ ಹಕ್ಕುಗಳ ಆಯೋಗ ನೋಟಿಸ್
ಕಾರವಾರ ಪರ್ಸಿನ್ ಮೀನುಗಾರರ ಸಂಘದ ಮುಖಂಡ ನಿತಿನ್ ರಮಾಕಾಂತ್ ಗಾಂವ್ಕರ್, ತಾಂಡೇಲರ ಸಂಘದ ಅಧ್ಯಕ್ಷ ರವಿರಾಜ್ ಸುವರ್ಣ ಉಪಸ್ಥಿತರಿದ್ದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುವರ್ಣ ತ್ರಿಭುಜ ಬೋಟ್ ಅವಘಡಕ್ಕೆ ಯಾರು ಕಾರಣ ಏನ್ನುವುದು ಗೊತ್ತಿದೆ. ಅವಘಡ ಮಾಡಿರುವ ತಪ್ಪನ್ನು ಒಪ್ಪಿಕೊಂಡರೆ 7 ಮಂದಿ ಮೀನುಗಾರರ ರಕ್ಷಣೆ ಮಾಡಲು ಸಾಧ್ಯವಾಗದೇ ಇರುವವರು ಈ ದೇಶದ ರಕ್ಷಣೆ ಹೇಗೆ ಮಾಡುತ್ತಾರೆ ಎನ್ನುವ ಪ್ರಶ್ನೆಗೆ ಅಂಜಿ ಹಿಂದೇಟು ಹಾಕುತ್ತಿದ್ದಾರೆ. ಬೋಟ್ ಅವಘಡವಾಗಿದ್ದು, ನೌಕಾಪಡೆಯ ಬೋಟ್ನ್ನು ರಿಪೇರಿ ಮಾಡಿರುವ ಎಲ್ಲಾ ವಿಚಾರವೂ ತಿಳಿಸಿದೆ ಎಂದರು.
ಮೃತರಾದ ಮೀನುಗಾರರ ಕುಟುಂಬಕ್ಕೆ ದೊಡ್ಡ ಮೊತ್ತದ ಪರಿಹಾರಕ್ಕೆ ಶ್ರಮಿಸಿದ್ದೇವೆ. ರಾಜ್ಯದಿಂದ ಪರಿಹಾರ ಸಿಕ್ಕಿದ್ದು, ಕೇಂದ್ರದ ಹಣ ಬಂದಿಲ್ಲ. ಬೋಟ್ ಅವಘಡವಾಗಿರುವ ಸ್ಥಳವನ್ನು ಗುರುತಿಸಿದ್ದಾರೆ. ಆ ಬೋಟ್ ಮೇಲೆತ್ತುವ ಕೆಲಸ ಮಾಡಿಲ್ಲ. ಬೋಟ್ನಲ್ಲಿದ್ದ ಮೀನುಗಾರರ ಮೃತದೇಹವನ್ನು ತೆಗೆದು ಮೋಕ್ಷ ನೀಡಲು ಮೀನುಗಾರರಿಗೆ ಅವಕಾಶ ಕೊಡಿ ಎಂದು ಪರಿ ಪರಿಯಾಗಿ ಕೇಳಿಕೊಂಡರೂ ಬಿಟ್ಟಿಲ್ಲ. ಕಡಲ ಕಿನಾರೆಯಲ್ಲಿ ನಮಗೆ ಆ ದೇಹದ ಆಕ್ರಂದನ ಕೇಳುತ್ತಿದೆ ಎಂದರು.
ಸುವರ್ಣ ತ್ರಿಭುಜ ಬೋಟ್ ನಾಪತ್ತೆ ಪ್ರಕರಣ ನಾಪತ್ತೆಯಾದ ಅಣ್ಣನ ಚಿಂತೆಯಲ್ಲಿ ತಮ್ಮ ಆತ್ಮಹತ್ಯೆ
ಮೀನುಗಾರಿಕೆ ವೇಳೆ ಮೃತರಾದ ಮೀನುಗಾರರಿಗೆ ಸರಕಾರ ಕೊಡುವ ಸಂಕಷ್ಟ ಪರಿಹಾರ ನಿಧಿಯ ಹಣ ಸರಕಾರ ಕೈಯಿಂದ ಕೊಡುತ್ತಿಲ್ಲ. ಅದು ಮೀನುಗಾರರ ಹಣ. ನಮ್ಮಿಂದ ತೆರಿಗೆ ಸಹಿತ ನಾನಾ ರೂಪದಲ್ಲಿ ಕ್ರೋಢೀಕರಿಸುವ ಹಣದಿಂದ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಸರಕಾರ ಆಳ ಸಮುದ್ರದಲ್ಲಿ ಮೃತಪಟ್ಟರೆ 6 ಲಕ್ಷ ರೂ. ನದಿಯಲ್ಲಿ ಬಿದ್ದರೆ 3 ಲಕ್ಷ ರೂ. ಎನ್ನುವ ತಾರತಮ್ಯ ಮಾಡಬಾರದು. ಮೀನುಗಾರರ ವಿಚಾರದಲ್ಲಿ ಕರಾವಳಿ ಕಾವಲು ಪಡೆ, ಕೋಸ್ಟ್ ಗಾರ್ಡ್ ನಿರ್ಜೀವವಾಗಿದೆ. ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಒತ್ತಾಯಿಸಿದರು.
ಸುವರ್ಣ ತ್ರಿಭುಜ ಬೋಟ್ : ರಾಜ್ಯ, ಕೇಂದ್ರ ಸರಕಾರಕ್ಕೆ ಮಾನವ ಹಕ್ಕುಗಳ ಆಯೋಗ ನೋಟಿಸ್
ಕಾರವಾರ ಪರ್ಸಿನ್ ಮೀನುಗಾರರ ಸಂಘದ ಮುಖಂಡ ನಿತಿನ್ ರಮಾಕಾಂತ್ ಗಾಂವ್ಕರ್, ತಾಂಡೇಲರ ಸಂಘದ ಅಧ್ಯಕ್ಷ ರವಿರಾಜ್ ಸುವರ್ಣ ಉಪಸ್ಥಿತರಿದ್ದರು.