ಉಡುಪಿ: ಮಲ್ಪೆ ಬಂದರಿನಿಂದ ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಬೋಟ್ ಸಮೇತ 7 ಮೀನುಗಾರರ ನಾಪತ್ತೆ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಸರಕಾರ ವಿಫಲಗೊಂಡಿವೆ ಎಂದು ಆರೋಪಿಸಿದ ಭಾರಿ ಸಂಖ್ಯೆಯ ಮೀನುಗಾರರು ರಾಷ್ಟ್ರೀಯ ಹೆದ್ದಾರಿ (66) ಯನ್ನು ತಡೆದು ಬೃಹತ್ ಪ್ರತಿಭಟನೆ ನಡೆಸಿದರು.
ಕಿನ್ನಿಮುಲ್ಕಿಯಿಂದ ಅಂಬಾಗಿಲು ಜಂಕ್ಷನ್ವರೆಗೆ ಸುಮಾರು 4 ಕಿ.ಮೀ. ದೂರದ ಹೆದ್ದಾರಿ 3 ಗಂಟೆಗಳ ಕಾಲ ಅಂದರೆ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಯಿತು. ಮಧ್ಯಾಹ್ನ 1.15 ರ ಬಳಿಕವೇ ಸಂಚಾರ ಆರಂಭಗೊಂಡಿತು.
ಸರಕಾರ, ಜನಪ್ರತಿನಿಧಿಗಳು, ಜಿಲ್ಲಾಡಳಿತದ ನಿರೀಕ್ಷೆಗೂ ಮೀರಿ ಪ್ರವಾಹೋಪಾದಿಯಲ್ಲಿ ಮೆರವಣಿಗೆಯಲ್ಲಿ ಸಾಗಿ ಬಂದ ಮೀನುಗಾರರು ಅಂಬಲಪಾಡಿ ಜಂಕ್ಷನ್ನಲ್ಲಿ ರಸ್ತೆ ತಡೆ ನಡೆಸಿ ತಮ್ಮ ಶಕ್ತಿ ಪ್ರದರ್ಶನ ನಡೆಸಿದರು. ರಾಜ್ಯ, ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿ ಎಚ್ಚರಿಕೆಯ ಸಂದೇಶ ರವಾನಿಸಿದರು.
20,000ಕ್ಕೂ ಅಧಿಕ ಮೀನುಗಾರರು : ಮಲ್ಪೆ ಕಡಲ ಕಿನಾರೆಯಲ್ಲಿ ಆರಂಭಗೊಂಡ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗಿ ಬಂದ 20 ಸಾವಿರಕ್ಕೂ ಅಧಿಕ ಮೀನುಗಾರರು ಕರಾವಳಿ ಬೈಪಾಸ್ ಮಾರ್ಗವಾಗಿ ಚಲಿಸಿ ಅಂಬಲಪಾಡಿ ಜಂಕ್ಷನ್ನಲ್ಲಿ ಸಭೆ ಸೇರಿದರು. ಅಲ್ಲಿ ಸೇರಿದ ಸಾವಿರಾರು ಮೀನುಗಾರರು ನಾಪತ್ತೆಯಾದ 7 ಮಂದಿ ಭಾವಚಿತ್ರದ ಫಲಕವನ್ನು ಪ್ರದರ್ಶಿಸಿ ಸರಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು. ರಾಜ್ಯ ಹಾಗೂ ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದರು.
ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಯಿಂದ ಸಾವಿರಾರು ಸಂಖ್ಯೆಯಲ್ಲಿ ಮೀನುಗಾರರು ಭಾಗವಹಿಸಿದ್ದರು. ಮಹಿಳಾ ಮೀನು ಮಾರಾಟಗಾರರು, ಮಹಿಳಾ ಸಂಘಟನೆಗಳು ಪ್ರತಿಭಟನೆಗೆ ಸಾಥ್ ನೀಡಿದ್ದು, 3 ಜಿಲ್ಲೆಗಳಲ್ಲಿ ಮೀನುಗಾರಿಕಾ ಚಟುವಟಿಕೆಗಳು ಸ್ಥಗಿತಗೊಂಡಿದ್ದವು.
ಮೀನುಗಾರರ ಜೀವಕ್ಕೆ ಬೆಲೆ ಇಲ್ಲವೇ? ದೇಶ, ರಾಜ್ಯವನ್ನು ಆಳುವ ಜನಪ್ರತಿನಿಧಿಗಳ ಮೀನುಗಾರರ ಸಂಕಷ್ಟದ ಅರಿ ಇಲ್ಲವೇ? ನಾಪತ್ತೆಯಾಗಿರುವ 7 ಮಂದಿಯನ್ನು ಹುಡುಕಿ ಕೊಡಿ ಎಂದು ಘೋಷಣಾ ಫಲಕಗಳನ್ನು ಪ್ರದರ್ಶಿಸಿದರು.
ಮಸೀದಿ, ಚರ್ಚ್ನಿಂದ ತಂಪು ಪಾನೀಯ : ಮೀನುಗಾರರ ನಾಪತ್ತೆಗಾಗಿ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಮೀನುಗಾರರು ಬಿಸಿಲು ಲೆಕ್ಕಿಸದೇ ಮೆರವಣಿಗೆಯಲ್ಲಿ ಸಾಗಿ ಬಂದರು. ಪ್ರತಿಭಟನಾಕಾರರಿಗೆ ಮಲ್ಪೆ ಮಸೀದಿ ಹಾಗೂ ಕಲ್ಮಾಡಿ ಚರ್ಚ್ ವತಿಯಿಂದ ಕುಡಿಯುವ ನೀರು ಹಾಗೂ ಆದಿ ಉಡುಪಿ ಮಸೀದಿಯಿಂದ ಪಾನೀಯ ವ್ಯವಸ್ಥೆ ಮಾಡಲಾಯಿತು.
ಮಂಗಳೂರು ಬಂದರು ಪೂರ್ಣ ಬಂದ್, 5 ಕೋಟಿ ರೂ. ನಷ್ಟ
ಮಂಗಳೂರು : ಮೀನುಗಾರರ ಪತ್ತೆಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಯ ಕಾವು ದಿನನಿತ್ಯ ಕೋಟ್ಯಾಂತರ ರೂಪಾಯಿ ವಹಿವಾಟು ನಡೆಸುವ ಮಂಗಳೂರು ಬಂದರಿಗೂ ತಟ್ಟಿದೆ.ಸದಾಕಾಲ ಮೀನುಗಾರರಿಂದ ತುಂಬಿ ತುಳುಕುತ್ತಿದ್ದ ಬಂದರಿನಲ್ಲಿ ಬಿಕೋ ಎನ್ನುತ್ತಿತ್ತು. ಹೌದು. ಸಾವಿರಾರು ಬೋಟುಗಳು ಬಂದರಿನಲ್ಲಿ ಲಂಗರು ಹಾಕಿಕೊಂಡು ಇತರ ರಾಜ್ಯದ ಕೆಲಸಗಾರರು ಬೋಟಿನ ಸ್ವಚ್ಛತೆಯಲ್ಲಿ ಮುಳುಗಿಕೊಂಡಿರುವ ದೃಶ್ಯಗಳು ಸೇರಿದಂತೆ ಖಾಲಿ ಬಿದ್ದುಕೊಂಡಿರುವ ಮೀನು ಬಾಕ್ಸ್, ಸಾಲು ಗಟ್ಟಿ ನಿಂತು ಸಾಗಾಟದ ಮೀನು ಲಾರಿಗಳು, ಮುಚ್ಚಿಕೊಂಡಿರುವ ಬಂದರು ಪ್ರದೇಶದ ಅಂಗಡಿಗಳು ಎಲ್ಲವೂ ಬೆಂಬಲ ಸೂಚಿಸುವಂತೆ ಕಾಣುತ್ತಿತ್ತು. ಮೀನುಗಾರಿಕೆ ಒಂದು ದಿನ ಬಂದ್ ಆದ ಪರಿಣಾಮ ಸರಿಸುಮಾರು 5 ಕೋಟಿ ರೂ. ನಷ್ಟ ಸಂಭವಿಸಿರಬಹುದು ಎನ್ನುವ ಲೆಕ್ಕ್ಕಾಚಾರವನ್ನು ಮೀನುಗಾರಿಕೆ ಇಲಾಖೆ ನೀಡುತ್ತಿದೆ. ಕಳೆದ ವರ್ಷ 2017-18ರ ಲೆಕ್ಕ್ಕಾಚಾರದ ಪ್ರಕಾರ ವಾರ್ಷಿಕ 1656 ಕೋಟಿ ರೂ. ವಹಿವಾಟು ನಡೆದಿದೆ. ಇದರಲ್ಲಿ 10 ತಿಂಗಳು ಮಾತ್ರ ಮೀನುಗಾರಿಕೆ ಇರುತ್ತದೆ. ಉಳಿದ ಎರಡು ತಿಂಗಳು ರಜೆ ಇರುವುದರಿಂದ ಇದರ ಆಧಾರದಲ್ಲಿ ಹೇಳುವುದಾದರೆ 5.52 ಕೋಟಿ ಒಂದು ದಿನ ವ್ಯವಹಾರ ಬಂದರಿನಲ್ಲಿ ನಡೆಯುತ್ತದೆ ಎನ್ನುತ್ತಾರೆ ಮಂಗಳೂರು ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕ ಚಿಕ್ಕವೀರ ನಾಯಕ್.
ಕಿನ್ನಿಮುಲ್ಕಿಯಿಂದ ಅಂಬಾಗಿಲು ಜಂಕ್ಷನ್ವರೆಗೆ ಸುಮಾರು 4 ಕಿ.ಮೀ. ದೂರದ ಹೆದ್ದಾರಿ 3 ಗಂಟೆಗಳ ಕಾಲ ಅಂದರೆ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಯಿತು. ಮಧ್ಯಾಹ್ನ 1.15 ರ ಬಳಿಕವೇ ಸಂಚಾರ ಆರಂಭಗೊಂಡಿತು.
ಸರಕಾರ, ಜನಪ್ರತಿನಿಧಿಗಳು, ಜಿಲ್ಲಾಡಳಿತದ ನಿರೀಕ್ಷೆಗೂ ಮೀರಿ ಪ್ರವಾಹೋಪಾದಿಯಲ್ಲಿ ಮೆರವಣಿಗೆಯಲ್ಲಿ ಸಾಗಿ ಬಂದ ಮೀನುಗಾರರು ಅಂಬಲಪಾಡಿ ಜಂಕ್ಷನ್ನಲ್ಲಿ ರಸ್ತೆ ತಡೆ ನಡೆಸಿ ತಮ್ಮ ಶಕ್ತಿ ಪ್ರದರ್ಶನ ನಡೆಸಿದರು. ರಾಜ್ಯ, ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿ ಎಚ್ಚರಿಕೆಯ ಸಂದೇಶ ರವಾನಿಸಿದರು.
20,000ಕ್ಕೂ ಅಧಿಕ ಮೀನುಗಾರರು : ಮಲ್ಪೆ ಕಡಲ ಕಿನಾರೆಯಲ್ಲಿ ಆರಂಭಗೊಂಡ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗಿ ಬಂದ 20 ಸಾವಿರಕ್ಕೂ ಅಧಿಕ ಮೀನುಗಾರರು ಕರಾವಳಿ ಬೈಪಾಸ್ ಮಾರ್ಗವಾಗಿ ಚಲಿಸಿ ಅಂಬಲಪಾಡಿ ಜಂಕ್ಷನ್ನಲ್ಲಿ ಸಭೆ ಸೇರಿದರು. ಅಲ್ಲಿ ಸೇರಿದ ಸಾವಿರಾರು ಮೀನುಗಾರರು ನಾಪತ್ತೆಯಾದ 7 ಮಂದಿ ಭಾವಚಿತ್ರದ ಫಲಕವನ್ನು ಪ್ರದರ್ಶಿಸಿ ಸರಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು. ರಾಜ್ಯ ಹಾಗೂ ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದರು.
ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಯಿಂದ ಸಾವಿರಾರು ಸಂಖ್ಯೆಯಲ್ಲಿ ಮೀನುಗಾರರು ಭಾಗವಹಿಸಿದ್ದರು. ಮಹಿಳಾ ಮೀನು ಮಾರಾಟಗಾರರು, ಮಹಿಳಾ ಸಂಘಟನೆಗಳು ಪ್ರತಿಭಟನೆಗೆ ಸಾಥ್ ನೀಡಿದ್ದು, 3 ಜಿಲ್ಲೆಗಳಲ್ಲಿ ಮೀನುಗಾರಿಕಾ ಚಟುವಟಿಕೆಗಳು ಸ್ಥಗಿತಗೊಂಡಿದ್ದವು.
ಮೀನುಗಾರರ ಜೀವಕ್ಕೆ ಬೆಲೆ ಇಲ್ಲವೇ? ದೇಶ, ರಾಜ್ಯವನ್ನು ಆಳುವ ಜನಪ್ರತಿನಿಧಿಗಳ ಮೀನುಗಾರರ ಸಂಕಷ್ಟದ ಅರಿ ಇಲ್ಲವೇ? ನಾಪತ್ತೆಯಾಗಿರುವ 7 ಮಂದಿಯನ್ನು ಹುಡುಕಿ ಕೊಡಿ ಎಂದು ಘೋಷಣಾ ಫಲಕಗಳನ್ನು ಪ್ರದರ್ಶಿಸಿದರು.
ಮಸೀದಿ, ಚರ್ಚ್ನಿಂದ ತಂಪು ಪಾನೀಯ : ಮೀನುಗಾರರ ನಾಪತ್ತೆಗಾಗಿ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಮೀನುಗಾರರು ಬಿಸಿಲು ಲೆಕ್ಕಿಸದೇ ಮೆರವಣಿಗೆಯಲ್ಲಿ ಸಾಗಿ ಬಂದರು. ಪ್ರತಿಭಟನಾಕಾರರಿಗೆ ಮಲ್ಪೆ ಮಸೀದಿ ಹಾಗೂ ಕಲ್ಮಾಡಿ ಚರ್ಚ್ ವತಿಯಿಂದ ಕುಡಿಯುವ ನೀರು ಹಾಗೂ ಆದಿ ಉಡುಪಿ ಮಸೀದಿಯಿಂದ ಪಾನೀಯ ವ್ಯವಸ್ಥೆ ಮಾಡಲಾಯಿತು.
ಮಂಗಳೂರು ಬಂದರು ಪೂರ್ಣ ಬಂದ್, 5 ಕೋಟಿ ರೂ. ನಷ್ಟ
ಮಂಗಳೂರು : ಮೀನುಗಾರರ ಪತ್ತೆಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಯ ಕಾವು ದಿನನಿತ್ಯ ಕೋಟ್ಯಾಂತರ ರೂಪಾಯಿ ವಹಿವಾಟು ನಡೆಸುವ ಮಂಗಳೂರು ಬಂದರಿಗೂ ತಟ್ಟಿದೆ.ಸದಾಕಾಲ ಮೀನುಗಾರರಿಂದ ತುಂಬಿ ತುಳುಕುತ್ತಿದ್ದ ಬಂದರಿನಲ್ಲಿ ಬಿಕೋ ಎನ್ನುತ್ತಿತ್ತು. ಹೌದು. ಸಾವಿರಾರು ಬೋಟುಗಳು ಬಂದರಿನಲ್ಲಿ ಲಂಗರು ಹಾಕಿಕೊಂಡು ಇತರ ರಾಜ್ಯದ ಕೆಲಸಗಾರರು ಬೋಟಿನ ಸ್ವಚ್ಛತೆಯಲ್ಲಿ ಮುಳುಗಿಕೊಂಡಿರುವ ದೃಶ್ಯಗಳು ಸೇರಿದಂತೆ ಖಾಲಿ ಬಿದ್ದುಕೊಂಡಿರುವ ಮೀನು ಬಾಕ್ಸ್, ಸಾಲು ಗಟ್ಟಿ ನಿಂತು ಸಾಗಾಟದ ಮೀನು ಲಾರಿಗಳು, ಮುಚ್ಚಿಕೊಂಡಿರುವ ಬಂದರು ಪ್ರದೇಶದ ಅಂಗಡಿಗಳು ಎಲ್ಲವೂ ಬೆಂಬಲ ಸೂಚಿಸುವಂತೆ ಕಾಣುತ್ತಿತ್ತು. ಮೀನುಗಾರಿಕೆ ಒಂದು ದಿನ ಬಂದ್ ಆದ ಪರಿಣಾಮ ಸರಿಸುಮಾರು 5 ಕೋಟಿ ರೂ. ನಷ್ಟ ಸಂಭವಿಸಿರಬಹುದು ಎನ್ನುವ ಲೆಕ್ಕ್ಕಾಚಾರವನ್ನು ಮೀನುಗಾರಿಕೆ ಇಲಾಖೆ ನೀಡುತ್ತಿದೆ. ಕಳೆದ ವರ್ಷ 2017-18ರ ಲೆಕ್ಕ್ಕಾಚಾರದ ಪ್ರಕಾರ ವಾರ್ಷಿಕ 1656 ಕೋಟಿ ರೂ. ವಹಿವಾಟು ನಡೆದಿದೆ. ಇದರಲ್ಲಿ 10 ತಿಂಗಳು ಮಾತ್ರ ಮೀನುಗಾರಿಕೆ ಇರುತ್ತದೆ. ಉಳಿದ ಎರಡು ತಿಂಗಳು ರಜೆ ಇರುವುದರಿಂದ ಇದರ ಆಧಾರದಲ್ಲಿ ಹೇಳುವುದಾದರೆ 5.52 ಕೋಟಿ ಒಂದು ದಿನ ವ್ಯವಹಾರ ಬಂದರಿನಲ್ಲಿ ನಡೆಯುತ್ತದೆ ಎನ್ನುತ್ತಾರೆ ಮಂಗಳೂರು ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕ ಚಿಕ್ಕವೀರ ನಾಯಕ್.