ಆ್ಯಪ್ನಗರ

ಉಡುಪಿ ಪ್ರವಾಹ; ವಿಶ್ವವಿಖ್ಯಾತ ಕಾಪು ಲೈಟ್‌ಹೌಸ್‌ ಸಂಪರ್ಕಿಸುವ ಕಾಲು ದಾರಿ ಕಡಿತ..!

ಲೈಟ್‌ಹೌಸ್‌ ಬಳಿ ಹೊಳೆಯಿಂದ ಬರುವ ನೆರೆಯ ನೀರು ದಿಕ್ಕು ಬದಲಿಸಿ ಸಮುದ್ರ ಸೇರುತ್ತಿದ್ದು, ಹೀಗಾಗಿ ಲೈಟ್‌ಹೌಸ್‌ ಸಂಪರ್ಕಿಸುವ ಕಾಲುದಾರಿ ಮಾರ್ಗದ ಸಂಪರ್ಕ ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಹೊಳೆಯ ಹಿಂಭಾಗದ ದಾರಿಯ ಬದಲಾಗಿ ಲೈಟ್‌ಹೌಸ್‌ನ ಮುಂಭಾಗದಲ್ಲಿ ನೀರು ಸಮುದ್ರ ಸೇರುವುದರಿಂದ ಲೈಟ್‌ಹೌಸ್‌ಗೆ ತೆರಳುವ ಮಾರ್ಗ ಕಡಿತಗೊಂಡಿದೆ.

Vijaya Karnataka Web 21 Sep 2020, 12:29 pm
ಉಡುಪಿ: ಕಡಲನಗರಿ ಉಡುಪಿಯಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ಪ್ರವಾಹ ಉಂಟಾಗಿದೆ. ಕಳೆದ ಅನೇಕ ದಶಕಗಳ ಬಳಿಕ ಇಷ್ಟೊಂದು ದೊಡ್ಡ ಮಟ್ಟದ ಪ್ರವಾಹ ಉಡುಪಿಯಲ್ಲಿ ಉಂಟಾಗಿದೆ.
Vijaya Karnataka Web UDUPI Light House


ಮನೆಮಠಗಳು ಮುಳುಗಿವೆ, ಜನಜಾನುವಾರುಗಳು ನೆಲೆ ಕಳೆದುಕೊಂಡಿವೆ. ಜನರು ಊರುಬಿಟ್ಟು ಸ್ಥಳಾಂತರವಾಗಿದ್ದಾರೆ. ಜನರ ರಕ್ಷಣಾ ಕಾರ್ಯ ಭಾನುವಾರವಂತೂ ಭರದಿಂದ ಸಾಗಿತ್ತು. ಇತ್ತ ಸೋಮವಾರ ಮಳೆರಾಯ ತನ್ನ ಆರ್ಭಟವನ್ನು ಕೊಂಚ ಸಡಿಲಿಸಿದ್ದು, ಜನರು ತುಸು ನೆಮ್ಮದಿಯಿಂದ ಉಸಿರಾಡುವಂತಾಗಿದೆ. ಈ ಮಧ್ಯೆ ಉಡುಪಿಯ ಗುರುತು ಎಂದೇ ಪ್ರಖ್ಯಾತಿ ಪಡೆದಿರುವ ವಿಶ್ವಪ್ರಸಿದ್ಧ ಕಾಪು ಲೈಟ್‌ಹೌಸ್ ಸಂಪರ್ಕ ಕಡಿತಗೊಂಡಿದೆ.

ವಿಧಾನಸಭೆ ಕಲಾಪ ಆರಂಭ; ಅಶೋಕ್ ಗಸ್ತಿ, ಪ್ರಣಬ್‌ ಮುಖರ್ಜಿ ಸೇರಿದಂತೆ ಅಗಲಿದ ಗಣ್ಯರಿಗೆ ಸಂತಾಪ

ಕಾಪು ಬೀಚ್‌ನಲ್ಲಿ ಬ್ರಿಟೀಷರು ನಿರ್ಮಾಣ ಮಾಡಿರುವ ಪ್ರಸಿದ್ಧ ಲೈಟ್‌ಹೌಸ್‌ನ ಹಿಂಭಾಗದಲ್ಲಿ ಸಮುದ್ರ ಮತ್ತು ನದಿ ಸೇರುವ ಸಂಗಮ ಪ್ರದೇಶವಿದೆ. ಈ ಭಾಗದಲ್ಲಿ ಲೈಟ್‌ಹೌಸನ್ನು ಸೇರಲೆಂದು ಕಾಲು ದಾರಿ ನಿರ್ಮಿಸಲಾಗಿತ್ತು. ಆದರೆ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿದ ಧಾರಾಕಾರ ಮಳೆ ಮತ್ತು ಭಾನುವಾರ ಉಂಟಾದ ಪ್ರವಾಹದಿಂದಾಗಿ ಲೈಟ್‌ಹೌಸ್ ಸಂಪರ್ಕಿಸುವ ಕಾಲುದಾರಿ ಕಡಿತಗೊಂಡಿದೆ.

ಕೊಲ್ಲೂರು ದೇಗುಲದ ಸಮಗ್ರ ಅಭಿವೃದ್ಧಿಗೆ ಪ್ಲ್ಯಾನ್‌ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸಚಿವ ಕೋಟ ಸೂಚನೆ

ಲೈಟ್‌ಹೌಸ್‌ ಬಳಿ ಹೊಳೆಯಿಂದ ಬರುವ ನೆರೆಯ ನೀರು ದಿಕ್ಕು ಬದಲಿಸಿ ಸಮುದ್ರ ಸೇರುತ್ತಿದ್ದು, ಹೀಗಾಗಿ ಲೈಟ್‌ಹೌಸ್‌ ಸಂಪರ್ಕಿಸುವ ಕಾಲುದಾರಿ ಮಾರ್ಗದ ಸಂಪರ್ಕ ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಹೊಳೆಯ ಹಿಂಭಾಗದ ದಾರಿಯ ಬದಲಾಗಿ ಲೈಟ್‌ಹೌಸ್‌ನ ಮುಂಭಾಗದಲ್ಲಿ ನೀರು ಸಮುದ್ರ ಸೇರುವುದರಿಂದ ಲೈಟ್‌ಹೌಸ್‌ಗೆ ತೆರಳುವ ಮಾರ್ಗ ಕಡಿತಗೊಂಡಿದೆ. ಇದಲ್ಲದೇ, ಅಲ್ಲಿನ ಶೌಚಾಲಯದ ಹತ್ತಿರವಿದ್ದ ಸಿಮೆಂಟ್ ಸ್ಲಾಬ್, ಪಾತ್‌ವೇ, ಲೈಟ್‌ ಹೌಸ್ ಭಾಗದ ಮೆಟ್ಟಿಲುಗಳು ಕೂಡ ಸಂಪೂರ್ಣ ಕೊಚ್ಚಿ ಹೋಗಿ ಶಿಥಿಲಗೊಂಡಿದೆ.

ವರುಣನ ಅಬ್ಬರಕ್ಕೆ ತತ್ತರಿಸಿದ ಉಡುಪಿ: 50 ಕುಟುಂಬಗಳ ರಕ್ಷಣೆ, ಮಲ್ಪೆಯಲ್ಲಿ 3 ಬೋಟ್ ಮುಳುಗಡೆ!

ಕಾಪು ಪಡು ಗ್ರಾಮ, ಗರಡಿ ಪ್ರದೇಶ, ಸುಬ್ಬಯ್ಯ ತೋಟ, ಬೈರು ಗುತ್ತು ತೋಟ ಸೇರಿದಂತೆ ಅನೇಕ ಕಡೆಗಳಿಂದ ಬಂದ ನೆರೆನೀರಿನಿಂದಾಗಿ ನದಿಯಲ್ಲಿ ನೀರು ರಭಸವಾಗಿ ಹರಿಯುತ್ತಿದ್ದು, ಹೀಗಾಗಿ ಲೈಟ್‌ಹೌಸ್‌ ಬಳಿ ರಸ್ತೆ ಕೊಚ್ಚಿಕೊಂಡು ಹೋಗಿದೆ ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ