ಆ್ಯಪ್ನಗರ

ಗುರಿಕಾರರ ಸಮಾವೇಶ, ಮತ್ಸ್ಯಜ್ಯೋತಿ ಗೌರವ ಪುರಸ್ಕಾರ

ಜಿ.ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಆಶ್ರಯದಲ್ಲಿ ಜಿಲ್ಲಾ ಮೊಗವೀರ ಯುವ ಸಂಘಟನೆ ನೇತೃತ್ವದಲ್ಲಿ ಮೊಗವೀರ ಗುರಿಕಾರರ ಸಮಾವೇಶ, ಮೀನುಗಾರ ಮಹಿಳೆಯರಿಗೆ ಮತ್ಸ್ಯಜ್ಯೋತಿ ಗೌರವ ಪುರಸ್ಕಾರ, ಭಾವಿ ವಧುವರರಿಗೆ ಸಾಮೂಹಿಕ ವೀಳ್ಯಶಾಸ್ತ್ರ ಕಾರ್ಯಕ್ರಮ ಗುರುವಾರ ಅಂಬಲಪಾಡಿ ಶ್ಯಾಮಿಲಿ ಸಭಾಂಗಣದಲ್ಲಿ ನಡೆಯಿತು.

Vijaya Karnataka 12 Apr 2019, 5:00 am
ಉಡುಪಿ: ಜಿ.ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಆಶ್ರಯದಲ್ಲಿ ಜಿಲ್ಲಾ ಮೊಗವೀರ ಯುವ ಸಂಘಟನೆ ನೇತೃತ್ವದಲ್ಲಿ ಮೊಗವೀರ ಗುರಿಕಾರರ ಸಮಾವೇಶ, ಮೀನುಗಾರ ಮಹಿಳೆಯರಿಗೆ ಮತ್ಸ್ಯಜ್ಯೋತಿ ಗೌರವ ಪುರಸ್ಕಾರ, ಭಾವಿ ವಧುವರರಿಗೆ ಸಾಮೂಹಿಕ ವೀಳ್ಯಶಾಸ್ತ್ರ ಕಾರ್ಯಕ್ರಮ ಗುರುವಾರ ಅಂಬಲಪಾಡಿ ಶ್ಯಾಮಿಲಿ ಸಭಾಂಗಣದಲ್ಲಿ ನಡೆಯಿತು.
Vijaya Karnataka Web gurikara


ಡಾ.ಜಿ.ಶಂಕರ್‌ ಅವರ ಪತ್ನಿ ಶಾಲಿನಿ ಶಂಕರ್‌ ಉದ್ಘಾಟಿಸಿದರು. ಈ ಸಂದರ್ಭ ಮೊಗವೀರ ಸಮಾಜದ ಕೂಡುಕಟ್ಟಿನ ಎಲ್ಲ ನೀತಿ ನಿಯಮಾವಳಿ ಸುಸೂತ್ರವಾಗಿ ಪಾಲಿಸಿಕೊಂಡು ಬಂದ ಬೆಳ್ಳಂಪಳ್ಳಿ, ಮಣಿಪುರ ಮೊಗವೀರ ಸಭಾ ಹಾಗೂ ನಾರಾಯಣ ಮೊಗವೀರ ಅವರಿಗೆ ಅಭಿನಂದನೆ ನಡೆಯಿತು. ಮೊಗವೀರ ಸಮಾಜದ 12 ಮಂದಿ ಹಿರಿಯ ಮಹಿಳಾ ಮೀನುಗಾರರಿಗೆ ಮತ್ಸ್ಯ ಜ್ಯೋತಿ ಗೌರವ ಪುರಸ್ಕಾರ ಪ್ರದಾನ ಮಾಡಲಾಯಿತು.

ಮೇ 1ರಂದು ನಡೆಯುವ ಮೊಗವೀರ ಸಮಾಜದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನೋಂದಣಿಯಾಗಿರುವ 40 ಜೋಡಿಗಳಿಗೆ ವೀಳ್ಯಶಾಸ್ತ್ರ ಕಾರ್ಯಕ್ರಮವನ್ನು ಡಾ.ಜಿ.ಶಂಕರ್‌, ಶಾಲಿನಿ ಶಂಕರ್‌ ಹಾಗೂ ಅವರ ಮಗಳು ಶ್ಯಾಮಿಲಿ ನೆರವೇರಿಸಿದರು.

ದ.ಕ.ಮೊಗವೀರ ಮಹಾಜನ ಸಂಘ ಉಚ್ಚಿಲ ಅಧ್ಯಕ್ಷ ಜಯ ಸಿ.ಕೋಟ್ಯಾನ್‌, ಬಗ್ವಾಡಿ ಹೋಬಳಿ ಮೊಗವೀರ ಮಹಾಜನ ಸೇವಾ ಸಂಘದ ಶಾಖಾಧ್ಯಕ್ಷ ಕೆ.ಕೆ.ಕಾಂಚನ್‌, ಬಾರಕೂರು ಮೊಗವೀರ ಸಂಯುಕ್ತ ಸಭಾ ಅಧ್ಯಕ್ಷ ವಿಶ್ವನಾಥ ಮಾಸ್ತರ್‌, ಜಿಲ್ಲಾ ಮೊಗವೀರ ಯುವ ಸಂಘಟನೆ ಅಧ್ಯಕ್ಷ ವಿನಯ ಕರ್ಕೇರ, ಮಾಜಿ ಅಧ್ಯಕ್ಷ ಗಣೇಶ್‌ ಕಾಂಚನ್‌, ಉದ್ಯಮಿ ಶಿವ ಡಿ.ಅಮೀನ್‌ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ