ಆ್ಯಪ್ನಗರ

ಚಿನ್ನ, ಬೆಳ್ಳಿ ಕೆಲಸಗಾರರ ಸಂಘದ ಕ್ರೀಡೋತ್ಸವ

ತಾಲೂಕು ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ವಾರ್ಷಿಕೋತ್ಸವ ಪ್ರಯುಕ್ತ ವಾರ್ಷಿಕ ಕ್ರೀಡೋತ್ಸವ ಇಲ್ಲಿನ ಗಾಂಧಿಮೈದಾನದಲ್ಲಿ ಭಾನುವಾರ ಜರುಗಿತು. ಉದ್ಯಮಿ ಶ್ರೀಧರ ಆಚಾರ್ಯ ವಡೇರಹೋಬಳಿ ಕ್ರೀಡೋತ್ಸವ ಉದ್ಘಾಟಿಸಿದರು. ಜುವೆಲ್ಲರಿ ಅಸೋಸಿಯೇಶನ್‌ ಅಧ್ಯಕ್ಷ ಎಂ.ಪ್ರಭು, ಶೇಟ್‌ ಜುವೆಲ್ಲರ್ಸ್‌ ಸುಧೀಂದ್ರ ಶೇಟ್‌, ಪನ್ನೀರ್‌ ಜ್ಯುವೆಲ್ಲರ್ಸ್‌ನ ಸಂತೋಷ ಕುಮಾರ್‌, ವಿಶ್ವ ಬ್ರಾಹ್ಮಣ ಯುವಕ ಸಂಘದ ಪ್ರಶಾಂತ್‌ ಆಚಾರ್ಯ, ಕ್ರೀಡಾ ಕಾರ್ಯದರ್ಶಿ ಸುರೇಂದ್ರ ಶೇಟ್‌ ಉಪಸ್ಥಿತರಿದ್ದರು. ಶ್ರೀಧರ ಆಚಾರ್ಯ ಪ್ರಾರ್ಥಿಸಿದರು.

Vijaya Karnataka 15 Jun 2019, 5:00 am
ಕುಂದಾಪುರ: ತಾಲೂಕು ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ವಾರ್ಷಿಕೋತ್ಸವ ಪ್ರಯುಕ್ತ ವಾರ್ಷಿಕ ಕ್ರೀಡೋತ್ಸವ ಇಲ್ಲಿನ ಗಾಂಧಿಮೈದಾನದಲ್ಲಿ ಭಾನುವಾರ ಜರುಗಿತು. ಉದ್ಯಮಿ ಶ್ರೀಧರ ಆಚಾರ್ಯ ವಡೇರಹೋಬಳಿ ಕ್ರೀಡೋತ್ಸವ ಉದ್ಘಾಟಿಸಿದರು. ಜುವೆಲ್ಲರಿ ಅಸೋಸಿಯೇಶನ್‌ ಅಧ್ಯಕ್ಷ ಎಂ.ಪ್ರಭು, ಶೇಟ್‌ ಜುವೆಲ್ಲರ್ಸ್‌ ಸುಧೀಂದ್ರ ಶೇಟ್‌, ಪನ್ನೀರ್‌ ಜ್ಯುವೆಲ್ಲರ್ಸ್‌ನ ಸಂತೋಷ ಕುಮಾರ್‌, ವಿಶ್ವ ಬ್ರಾಹ್ಮಣ ಯುವಕ ಸಂಘದ ಪ್ರಶಾಂತ್‌ ಆಚಾರ್ಯ, ಕ್ರೀಡಾ ಕಾರ್ಯದರ್ಶಿ ಸುರೇಂದ್ರ ಶೇಟ್‌ ಉಪಸ್ಥಿತರಿದ್ದರು. ಶ್ರೀಧರ ಆಚಾರ್ಯ ಪ್ರಾರ್ಥಿಸಿದರು.
Vijaya Karnataka Web KDP-14k-spo


ಪಂದ್ಯಾಟದ ವಿಜೇತರು: ಕ್ರಿಕೆಟ್‌ ಪಂದ್ಯಾಟದಲ್ಲಿ ಕೀರ್ತಿ ಕೋಟೇಶ್ವರ ತಂಡ ಪ್ರಥಮ, ಗೋಲ್ಡನ್‌ ಕುಂದಾಪುರ ತಂಡ ದ್ವಿತೀಯ ಬಹುಮಾನ ಪಡೆಯಿತು. ಶರತ್‌ ಬೆಸ್ಟ್‌ ಬ್ಯಾಟ್ಸಮೆನ್‌, ನವೀನ್‌ ಕಿರಿಮಂಜೇಶ್ವರ ಬೆಸ್ಟ್‌ ಬೌಲರ್‌, ಚಂದ್ರಶೇಖರ ನವಮಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.

ಮಡಕೆ ಒಡೆಯುವ ಸ್ಪರ್ಧೆಯಲ್ಲಿ ಗಣೇಶ್‌ ಪ್ರಥಮ, ಸ್ಲೋಬೈಕ್‌ ರೇಸ್‌ನಲ್ಲಿ ರವಿ ಚಿಕ್ಕನ್‌ಸಾಲ್‌ ಪ್ರಥಮ, ವೀರೇಂದ್ರ ಕೋಟೇಶ್ವರ ದ್ವಿತೀಯ, ಗುಂಡು ಎಸೆತದಲ್ಲಿ ಸುಬ್ರಹ್ಮಣ್ಯ ಶೇಟ್‌ ಪ್ರಥಮ, ಗಣೇಶ್‌ ಪ್ರಣಮ್ಯ ದ್ವಿತೀಯ, ಓಟದಲ್ಲಿ ಗಣೇಶ್‌ ಮುಳ್ಳಿಕಟ್ಟೆ ಪ್ರಥಮ, ಅರುಣ್‌ ಗುಜ್ಜಾಡಿ ದ್ವಿತೀಯ, ಲಾಂಗ್‌ಜಂಪ್‌ನಲ್ಲಿ ರಾಜೇಶ್‌ ಮರವಂತೆ ಪ್ರಥಮ, ಗಣೇಶ್‌ ಮುಳ್ಳಿಕಟ್ಟೆ ದ್ವಿತೀಯ, ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಗೋಲ್ಡನ್‌ ಟೀಮ್‌ ಕುಂದಾಪುರ ಪ್ರಥಮ, ಪ್ರತಾಪ್‌ ಟೀಮ್‌ ದ್ವಿತೀಯ, ಬೋಲ್‌ ಅವ್ಟ್‌ ಸ್ಪರ್ಧೆಯಲ್ಲಿ ಸುರೇಂದ್ರ ಶೇಟ್‌ ಕುಂದಾಪುರ, ವಾಲಿಬಾಲ್‌ ಪಂದ್ಯಾಟದಲ್ಲಿ ವಿಶ್ವ ಕೋಟ ಪ್ರಥಮ, ಕೀರ್ತಿ ಕೋಟೇಶ್ವರ ದ್ವಿತೀಯ ಬಹುಮಾನ ಪಡೆಯಿತು.

ಸಮಾರೋಪ ಸಮಾರಂಭ: ಚಂದ್ರಶೇಖರ ನವಮಿ ಅಧ್ಯಕ್ಷ ತೆ ವಹಿಸಿದ್ದರು. ಸುಧೀಂದ್ರ ಶೇಟ್‌, ಸುರೇಂದ್ರ ಶೇಟ್‌ ಉಪಸ್ಥಿತರಿದ್ದರು. ಈ ಸಂದರ್ಭ ಪಂದ್ಯಾಟದ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ರಾಜೇಶ್‌ ಮರವಂತೆ, ರವೀಂದ್ರ ಕೋಣಿ, ಓಂಕಾರ ಕೃಷ್ಣ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ