ಆ್ಯಪ್ನಗರ

ಸುವರ್ಣ ತ್ರಿಭುಜ ಬೋಟ್‌ ಕಣ್ಮರೆ ಸುಳ್ಳು ವದಂತಿಯೇ ಸತ್ಯವಾಗಲಿ: ಡಾ. ಜಯಮಾಲಾ

ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆ ತೆರಳಿ ಕಣ್ಮರೆಯಾಗಿದ್ದ ಸುವರ್ಣ ತ್ರಿಭುಜ ಬೋಟ್‌ ಪತ್ತೆಯಾಗಿದೆ ಎನ್ನುವ ಸುಳ್ಳು ವದಂತಿಯೇ ಸತ್ಯವಾಗಲಿ ಎಂದು ನಾವೂ ಆಶಿಸುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲಾ ತಿಳಿಸಿದ್ದಾರೆ.

Vijaya Karnataka 5 Feb 2019, 5:00 am
ಉಡುಪಿ: ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆ ತೆರಳಿ ಕಣ್ಮರೆಯಾಗಿದ್ದ ಸುವರ್ಣ ತ್ರಿಭುಜ ಬೋಟ್‌ ಪತ್ತೆಯಾಗಿದೆ ಎನ್ನುವ ಸುಳ್ಳು ವದಂತಿಯೇ ಸತ್ಯವಾಗಲಿ ಎಂದು ನಾವೂ ಆಶಿಸುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲಾ ತಿಳಿಸಿದ್ದಾರೆ.
Vijaya Karnataka Web golden triangle boat disappear false rumor is true dr jayamala
ಸುವರ್ಣ ತ್ರಿಭುಜ ಬೋಟ್‌ ಕಣ್ಮರೆ ಸುಳ್ಳು ವದಂತಿಯೇ ಸತ್ಯವಾಗಲಿ: ಡಾ. ಜಯಮಾಲಾ


ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ ಬಳಿ ನಿರ್ಮಾಣಗೊಂಡಿರುವ ನಾನಾ ಅಭಿವೃದ್ಧಿ ಕಾಮಗಾರಿಯನ್ನು ಕ್ರೀಡಾ ಸಚಿವರೊಂದಿಗೆ ಸೋಮವಾರ ಉದ್ಘಾಟಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಸುವರ್ಣ ತ್ರಿಭುಜ ಬೋಟ್‌ ಶ್ರೀಲಂಕಾದಲ್ಲಿ ಪತ್ತೆಯಾಗಿದೆ ಎನ್ನುವ ವದಂತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕುಟುಂಬಸ್ಥರು ನಮ್ಮ ಮನೆಯ ಮೀನುಗಾರರು ಸುರಕ್ಷಿತವಾಗಿರುವ ಬಗ್ಗೆ ದೃಢ ನಂಬಿಕೆ ಇಟ್ಟುಕೊಂಡು ಜೀವಿಸುತ್ತಿದ್ದಾರೆ. ಮನೆಯವರ ಕಷ್ಟ ನಮಗೂ ಅರ್ಥವಾಗುತ್ತದೆ. ನಾವೂ ಕೂಡಾ ಆ ವದಂತಿಯೇ ಸತ್ಯವಾಗಲಿ ಎಂದು ಆಶಿಸುತ್ತೇವೆ ಎಂದರು.

ಆಳ ಸಮುದ್ರದಲ್ಲಿ 23 ಮೀಟರ್‌ ಉದ್ದದ ಬೋಟ್‌ ಕಂಡು ಬಂದಿದ್ದು, ಮಗುಚಿ ಬಿದ್ದಿರುವ ಹಾಗೂ ಕತ್ತಲು ಆವರಿಸಿರುವುದರಿಂದ ಸ್ಪಷ್ಟವಾಗಿ ಗೋಚರವಾಗುತ್ತಿಲ್ಲ. ನಾಪತ್ತೆಯಾದ ಸುವರ್ಣ ತ್ರಿಭುಜ ಬೋಟ್‌ 24 ಮೀಟರ್‌ ಎನ್ನಲಾಗುತ್ತಿದ್ದು, ಪರಿಶೀಲನೆಗಾಗಿ ಮುಳುಗು ತಜ್ಞರನ್ನು ಕರೆಯಿಸಿ ಹುಡುಕಾಟ ಮಾಡಲಾಗಿದೆ.

ಮುಳುಗು ತಜ್ಞರು 35 ಮೀಟರ್‌ನಷ್ಟು ಆಳಕ್ಕೆ ತೆರಳಿದ್ದು, ತಾಂತ್ರಿಕ ಕಾರಣಗಳಿಂದಾಗಿ ಹಿಂದೆ ಬಂದಿದ್ದಾರೆ ಎನ್ನಲಾಗುತ್ತಿದೆ. 35 ಮೀಟರ್‌ ಹೋದವರಿಗೆ 60 ಮೀಟರ್‌ ಹೋಗುವುದು ಕಷ್ಟದ ವಿಚಾರವಲ್ಲ. ನೌಕಾಪಡೆಯ ಹಡುಗಿನ ಹಾನಿ, ಬೋಟ್‌ ಸಮೇತ 7 ಮೀನುಗಾರರು ನಾಪತ್ತೆ ಹಾಗೂ ಮೊಬೈಲ್‌ ಸಂಪರ್ಕ ಒಂದೇ ಸಮಯಕ್ಕೆ ಕಡಿತವಾಗಿರುವ ಅಂಶಗಳೆಲ್ಲ ಸಾಕಷ್ಟು ಅನುಮಾನಕ್ಕೆ ಎಡೆಮಾಡಿದೆ. ಇದಕ್ಕೆ ಬೋಟ್‌ ಪರಿಶೀಲನೆ ಮಾಡಿದ ಬಳಿಕ ಉತ್ತರ ಸಿಗಲಿದೆ. ನಾವು ಯಾವ ಕಾರಣಕ್ಕೂ ಹುಡುಕಾಟ ಕೈ ಬಿಡುವುದಿಲ್ಲ ಎಂದು ಭರವಸೆ ನೀಡಿದರು.

ಕೋಟದಲ್ಲಿ ವಾರದ ಹಿಂದೆ ನಡೆದ ಯುವಕರ ಅವಳಿ ಕೊಲೆ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಸಚಿವರು, ಆರೋಪಿಗಳ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ. ತನಿಖೆಯಲ್ಲಿ ಎಲ್ಲೂ ವಿಳಂಬವಾಗಿಲ್ಲ. ಪೊಲೀಸರ ವಿಚಾರಣೆ ಮಾರ್ಗದಲ್ಲೇ ಮುಂದುವರಿಯುತ್ತಿದ್ದು, ಯಾವ ಕಾರಣಕ್ಕೂ ಆರೋಪಿಗಳನ್ನು ಬಿಡಲು ಸಾಧ್ಯವಿಲ್ಲ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ