ಆ್ಯಪ್ನಗರ

ಉಡುಪಿ ಜಿಲ್ಲೆ ಜನರ ನಿದ್ದೆಗೆಡಿಸಿದ 14 ದಿನಗಳ ಸಾಂಸ್ಥಿಕ ಕ್ವಾರಂಟೈನ್‌! ಯಾಕೆ?

14 ದಿನಗಳ ಸಾಂಸ್ಥಿಕ ಕ್ವಾರಂಟೈನ್‌ ಉಡುಪಿ ಜಿಲ್ಲಾಡಳಿತ ಹಾಗೂ ಜನರನ್ನ ಆತಂಕಕ್ಕೀಡು ಮಾಡಿದೆ. ಯಾಕೆಂದರೆ ಉಡುಪಿ ಜಿಲ್ಲೆಯ ಶೇ.99 ಮಂದಿ ಕೊರೊನಾ ಸೋಂಕಿತರಲ್ಲಿ ಕೊರೊನಾ ಲಕ್ಷಣಗಳೇ ಇಲ್ಲ.

Vijaya Karnataka Web 30 May 2020, 10:17 am
ಉಡುಪಿ: ಉಡುಪಿ ಜಿಲ್ಲೆಯ ಶೇ.99 ಮಂದಿ ಕೊರೊನಾ ಸೋಂಕಿತರಲ್ಲಿ ಕೊರೊನಾ ಲಕ್ಷಣಗಳೇ ಇಲ್ಲ. ಆದರೆ ಸರಕಾರ ಏಳು ದಿನಗಳ ಸಾಂಸ್ಥಿಕ ಕ್ವಾರಂಟೈನ್‌ ಪೂರೈಸಿ, ಸೋಂಕಿನ ಲಕ್ಷಣಗಳಿಲ್ಲದವರನ್ನು ಮನೆಗೆ ಕಳುಹಿಸಿದೆ. ಸರಕಾರದ ಈ ದ್ವಂದ್ವ ನೀತಿಯಿಂದಾಗಿ ಸೋಂಕಿನ ಲಕ್ಷಣಗಳೇ ಇಲ್ಲದೆ ಇರುವ ಸೋಂಕಿತರು ಮನೆಗೆ ತೆರಳಿ, ಮನೆ ಮಂದಿಗೆ ಮಾತ್ರವಲ್ಲಕ್ವಾರಂಟೈನ್‌ ತಪ್ಪಿಸಿದರೆ ಅನ್ಯರಿಗೂ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಆತಂಕ ಹೆಚ್ಚಿದೆ.
Vijaya Karnataka Web corona-agencies


ಇಂತಹ ನೀತಿಯಿಂದಾಗಿ ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ ಮತ್ತು ಜನತೆ ದುಬಾರಿ ಬೆಲೆ ತೆರಲಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಈ ತನಕ ಒಟ್ಟು 10,965 ಮಾದರಿ ಸಂಗ್ರಹಿಸಿದ್ದು ಕೇವಲ 4,950 ಮಾದರಿಗಳ ಪರೀಕ್ಷಾ ವರದಿ ಬಂದಿದೆ (ಶೇ.45.14), ಇನ್ನೂ 6,019 ಮಾದರಿಗಳ (ಶೇ.54.89) ಪರೀಕ್ಷಾ ವರದಿ ಬರಲು ಬಾಕಿಯಿದೆ. ರಾಜ್ಯದಲ್ಲೇ ಉಡುಪಿ ಜಿಲ್ಲೆಯಲ್ಲಿಅತ್ಯಧಿಕ(1ಲಕ್ಷ ಜನಸಂಖ್ಯೆಗೆ ಸರಾಸರಿ 812 ಮಂದಿ) ಸ್ಯಾಂಪಲ್‌ ಟೆಸ್ಟಿಂಗ್‌(ಮಾದರಿ ಪರೀಕ್ಷೆ ) ನಡೆದಿದ್ದರೂ ಪರೀಕ್ಷಾ ಫಲಿತಾಂಶ ಗಳಿಕೆಯಲ್ಲಿ ಭಾರೀ ಹಿನ್ನಡೆ ಕಂಡಿದೆ.

ದಿನಕ್ಕೆ 500ರಂತೆ ಪರೀಕ್ಷಾ ವರದಿ ಬಂದರೂ 12ರಿಂದ 15 ದಿನಗಳೇ ಬೇಕು. ಅಜ್ಜರಕಾಡು ಜಿಲ್ಲಾಸರಕಾರಿ ಆಸ್ಪತ್ರೆಯಲ್ಲಿ ಪ್ರಯೋಗಾಲಯ ಸ್ಥಾಪನೆ ನಿಧಾನಗತಿಯಲ್ಲಿದ್ದರೆ, ಮಣಿಪಾಲ ಕೆಎಂಸಿ ಪ್ರಯೋಗಾಲಯವೂ ವೇಗ ಪಡೆದಿಲ್ಲ. ಹೊರ ರಾಜ್ಯದಿಂದ ಬಂದು ಸಾಂಸ್ಥಿಕ ನಿಗಾದಲ್ಲಿಇರುವವರ ಸಂಖ್ಯೆ 328ಕ್ಕೆ ಇಳಿದಿದೆ. 7,840 ಮಂದಿ ಕಳೆದೆರಡು ದಿನಗಳಲ್ಲಿ ಮನೆಗೆ ತೆರಳಿದ್ದಾರೆ.

ಮಾಲ್‌ಗಳು ಪುನರಾರಂಭಕ್ಕೆ ಯೋಜನೆ ಹಾಕಿದ ಸರಕಾರ


ಅತ್ಯಧಿಕ ಪ್ರಕರಣ!
ಬೆಂಗಳೂರು ನಗರ: 303, ಮಂಡ್ಯ: 257, ಕಲಬುರಗಿ: 251, ಯಾದಗಿರಿ: 223, ಉಡುಪಿ: 164, ಬೆಳಗಾವಿ: 146, ದಾವಣಗೆರೆ: 146, ಹಾಸನ: 144 ಈ ವರೆಗೆ ಪಾಸಿಟಿವ್‌ ಕೇಸ್ ನೋಂದಣಿಯಾಗಿದೆ. ಈ ಪೈಕಿ ಉಡುಪಿ ಐದನೇ ಸ್ಥಾನದಲ್ಲಿದೆ.

152 ಪ್ರಕರಣಗಳಲ್ಲಿಸೋಂಕಿನ ಲಕ್ಷಣಗಳಿಲ್ಲ!
ಉಡುಪಿ ಜಿಲ್ಲೆಯ 164 ಕೊರೊನಾ ಸೋಂಕಿತ ಪ್ರಕರಣಗಳ ಪೈಕಿ 12 ಮಂದಿಯಲ್ಲಷ್ಟೇ ಸೋಂಕಿನ ಗುಣಲಕ್ಷಣಗಳಿದ್ದರೆ, 152 ಮಂದಿಯಲ್ಲಿ ಸೋಂಕಿನ ಲಕ್ಷಣಗಳೇ ಇಲ್ಲದಿರುವುದು ಸೋಂಕು ಹೆಚ್ಚಲು ಇರುವ ಪ್ರಮುಖ ಕಾರಣಗಳಲ್ಲಿಒಂದಾಗಿದೆ. ಎನ್ನಲಾಗಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಪರ ಜಿಲ್ಲಾಧಿಕಾರಿ ಬಿ.ಸದಾಶಿವ ಪ್ರಭು, ಸರಕಾರದ ಸಾಂಸ್ಥಿಕ ಜವಾಬ್ದಾರಿ ಈಗ ವೈಯಕ್ತಿಕ ಜವಾಬ್ದಾರಿಯಾಗಿ ಪರಿವರ್ತನೆಯಾಗಿದೆ. ಹೀಗಾಗಿ ಪ್ರತಿಯೊಬ್ಬರೂ ವೈಯಕ್ತಿಕ ಆರೋಗ್ಯ ಕಾಳಜಿ ಮಾತ್ರವಲ್ಲಅನ್ಯರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುವ ಹೊಣೆಗಾರಿಕೆಯಿದೆ. ಕೊರೊನಾ ಸೋಂಕಿನ ವಿಚಾರದಲ್ಲಿ ಒಬ್ಬರು ಹೊಣೆಗೇಡಿತನ ತೋರಿದರೆ ಜನಸಮುದಾಯಕ್ಕೇ ಅಪಾಯ ಕಾದಿದೆ ಎಂದಿದ್ದಾರೆ.

ಜನವರಿ-ಮಾರ್ಚ್‌ ತ್ರೈಮಾಸಿಕ ಜಿಡಿಪಿ ದರ ಶೇ. 3.1ಕ್ಕೆ ಇಳಿಕೆ, ಮುಂದಿದೆ ಅಗ್ನಿ ಪರೀಕ್ಷೆ!

ರೋಗಲಕ್ಷಣಗಳಿಲ್ಲದೆ ಇರುವ ಸೋಂಕಿತರು ವೇಗವಾಗಿ ಡಿಸ್ಚಾರ್ಜ್‌ ಆಗುವುದರಿಂದ ಸೋಂಕು ಹೊರಡುವ ಭೀತಿ ಇರೋದು ನಿಜ. ಆದ್ರೆ ಇದರೊಂದಿಗೆ ಇಂತಹವರು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿ ಕೂಡಲೇ ಹೊರಗೆ ಹೋಗದೆ ಇರುವುದು ಒಳ್ಳೆಯದು. ಇದರಿಂದ ಬೇರೆಯವರಿಗೆ ಸೋಂಕು ಹರಡುವುದನ್ನು ತಡೆಗಟ್ಟಬಹುದು.

-ಎಸ್‌ಜಿ ಕುರ್ಯ ಉಡುಪಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ