ಆ್ಯಪ್ನಗರ

ಜ್ಞಾನ ಗಳಿಕೆಯ ಹಾದಿಯಲ್ಲಿ ಪ್ರತಿಷ್ಠೆ ಸಲ್ಲದು: ಅದಮಾರುಶ್ರೀ

ಸಮಾಜದಲ್ಲಿ ಚೆನ್ನಾಗಿ ಬೆಳೆಯಬೇಕಾದರೆ ನಮ್ಮಲ್ಲಿರುವ ಪ್ರತಿಷ್ಠೆ ಬಿಡಬೇಕು ಎಂದು ಅದಮಾರು ಮಠದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು ಹೇಳಿದ್ದಾರೆ.

Vijaya Karnataka 18 Jun 2019, 5:00 am
ಉಡುಪಿ: ಸಮಾಜದಲ್ಲಿ ಚೆನ್ನಾಗಿ ಬೆಳೆಯಬೇಕಾದರೆ ನಮ್ಮಲ್ಲಿರುವ ಪ್ರತಿಷ್ಠೆ ಬಿಡಬೇಕು ಎಂದು ಅದಮಾರು ಮಠದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು ಹೇಳಿದ್ದಾರೆ.
Vijaya Karnataka Web 111


ಅವರು ರಾಜಾಂಗಣದಲ್ಲಿ ವಿರಾಟಪರ್ವ ಪ್ರವಚನ ಮಂಗಲ ಹಾಗೂ ಷಷ್ಠಿಪೂರ್ತಿ ಅಂಗವಾಗಿ ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶತೀರ್ಥ ಶ್ರೀಪಾದರ ನೇತೃತ್ವದಲ್ಲಿ ಸೋಮವಾರ ನಡೆದ ಗುರು ವಂದನೆ ವಿಶ್ವಾರ್ಪಣಂ ಸ್ವೀಕರಿಸಿ ಆಶೀರ್ವಚನ ನೀಡಿದರು.

ಜ್ಞಾನ ಗಳಿಕೆ ನಿಟ್ಟಿನಲ್ಲಿ ನಮಗೆ ತಿಳಿಯದಿರುವುದನ್ನು ಅನ್ಯರಲ್ಲಿ ಕೇಳಿ ಅರಿತುಕೊಳ್ಳಲು ಯಾವುದೇ ಅಹಂ ಸಲ್ಲದು. ನಿತ್ಯ ಮಾಡಿದ ಕೆಲಸವನ್ನು ಭಗವಂತನಿಗೆ ಅರ್ಪಿಸಬೇಕು. ಪಲಿಮಾರು ಶ್ರೀವಿದ್ಯಾಧೀಶತೀರ್ಥ ಶ್ರೀಪಾದರ ನೇತೃತ್ವದಲ್ಲಿ ನಡೆದ ಒಂದು ಕೋಟಿ ಧನ್ವಂತರಿ ಹೋಮದಿಂದ ಆಧ್ಯಾತ್ಮಿಕ ಬಲ ಬಂದಿದೆ ಎಂದು ಹೇಳಿದರು.

ಬಾಲ್ಯದಿಂದ ಈ ತನಕದ ಚಿತ್ರಗಳ ಚೌಕಟ್ಟನ್ನು ಅದಮಾರು ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರಿಗೆ ಅರ್ಪಿಸಲಾಯಿತು. ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ಹೆಣ್ಮಕ್ಕಳಿಗೆ ಮಾಂಗಲ್ಯವಿದ್ದಮತೆ ಸನ್ಯಾಸಿಗಳಿಗೆ ಪಾಠ, ಪ್ರವಚನ ಅತಿ ಮುಖ್ಯ ಎಂದು ನುಡಿದರು.

ಅದಮಾರುಮಠದ ಕಿರಿಯ ಯತಿ ಶ್ರೀಈಶಪ್ರಿಯತೀರ್ಥ ಶ್ರೀಪಾದರು, ಪಲಿಮಾರು ಮಠದ ಕಿರಿಯ ಯತಿ ಶ್ರೀವಿದ್ಯಾರಾಜೇಶ್ವರತೀರ್ಥರು, ಕಟೀಲಿನ ಲಕ್ಷ್ಮೇನಾರಾಯಣ ಆಸ್ರಣ್ಣ, ಉಡುಪಿ ಶಾಸಕ ಕೆ. ರಘುಪತಿ ಭಟ್‌ ಉಪಸ್ಥಿತರಿದ್ದರು.

ತಿರುಪತಿ ಸಹಿತ ವಿವಿಧ ಧಾರ್ಮಿಕ ಕ್ಷೇತ್ರಗಳ ಪ್ರಸಾದ ಹಾಗೂ ಗುರುಕಾಣಿಕೆಯನ್ನು ಈ ಸಂದರ್ಭ ಸಮರ್ಪಿಸಲಾಯಿತು. ರಾಯಚೂರಿನ ಭಕ್ತರು ಅದಮಾರು ಶ್ರೀವಿಶ್ವಪ್ರಿಯತೀರ್ಥರನ್ನು ಚಾತುರ್ಮಾಸ್ಯ ವ್ರತ ಕೈಗೊಳ್ಳುವಂತೆ ಗೌರವ ಸಮರ್ಪಿಸಿದರು. ಡಾ. ವಂಶಿಕೃಷ್ಣ ಕಾರ್ಯಕ್ರಮ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ