ಆ್ಯಪ್ನಗರ

‘ಹಸಿರು ಗಿಳಿಯಾರು’ ಕಾರ್ಯಕ್ರಮಕ್ಕೆ ಚಾಲನೆ

ಜನಸೇವಾ ಟ್ರಸ್ಟ್‌ ಕೋಟ ಮೂಡುಗಿಳಿಯಾರು, ಗೀತಾನಂದ ಫೌಂಡೇಶನ್‌ ಮತ್ತು ಪ್ರೆಂಡ್ಸ್‌ ಗಿಳಿಯಾರು ಆಶ್ರಯದಲ್ಲಿ ಫಲ, ಪುಷ್ಪ ಔಷಧ ವೃಕ್ಷ ಗಳ ಹಸಿರು ಗಿಳಿಯಾರು ಕಾರ್ಯಕ್ರಮಕ್ಕೆ ಭಾನುವಾರ ಕೋಟ ಪಶು ಆಸ್ಪತ್ರೆ ಆವರಣದಲ್ಲಿ ನಡೆಯಿತು.

Vijaya Karnataka 8 Jul 2019, 5:00 am
ಕೋಟ: ಜನಸೇವಾ ಟ್ರಸ್ಟ್‌ ಕೋಟ ಮೂಡುಗಿಳಿಯಾರು, ಗೀತಾನಂದ ಫೌಂಡೇಶನ್‌ ಮತ್ತು ಪ್ರೆಂಡ್ಸ್‌ ಗಿಳಿಯಾರು ಆಶ್ರಯದಲ್ಲಿ ಫಲ, ಪುಷ್ಪ ಔಷಧ ವೃಕ್ಷ ಗಳ ಹಸಿರು ಗಿಳಿಯಾರು ಕಾರ್ಯಕ್ರಮಕ್ಕೆ ಭಾನುವಾರ ಕೋಟ ಪಶು ಆಸ್ಪತ್ರೆ ಆವರಣದಲ್ಲಿ ನಡೆಯಿತು.
Vijaya Karnataka Web UDP-07cb4


ಕೋಟ ಪಶು ಆಸ್ಪತ್ರೆಯ ಡಾ.ಅರುಣ್‌ ಕುಮಾರ್‌ ಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಗಿಡಗಳನ್ನು ನೆಡುವುದು ಎಷ್ಟು ಮುಖ್ಯವೋ ಅದನ್ನ ಪಾಲನೆ ಮಾಡುವುದೂ ಅಷ್ಟೇ ಮುಖ್ಯ. ನಮ್ಮ ಆಸ್ಪತ್ರೆ ಆವರಣದಲ್ಲಿ ನೆಟ್ಟ ಗಿಡಗಳನ್ನು ಪಾಲನೆ ಮಾಡುವ ಹೊಣೆಗಾರಿಕೆ ನಮ್ಮದು. ಇದೊಂದು ಮಾದರಿ ಯೋಚನೆಯಾಗಿದ್ದು ಇತರರಿಗೂ ಮಾದರಿಯಾಗಲಿ ಎಂದರು.

ಈ ಸಂದರ್ಭ ಕ್ಯಾನ್ಸರ್‌ ನಿವಾರಕ ಲಕ್ಷ ್ಮಣ ಫಲ, ರಾಮ ಫಲ, ಕಹಿಬೇವು, ರೆಂಜೆ, ಮಂದಾರ, ಜಾಮ್‌ ಪ್ರುಟ್ಸ್‌, ಚಿಕ್ಕು ಮುಂತಾದ 15ಕ್ಕೂ ಹೆಚ್ಚು ಪ್ರಭೇದದ ಐವತ್ತಕ್ಕೂ ಹೆಚ್ಚು ಗಿಡಗಳನ್ನ ನೆಡಲಾಯಿತು.

ಉದ್ಯಮಿ ಭೋಜ ಪೂಜಾರಿ, ಸುರೇಂದ್ರ ಹೆಗ್ಗಡೆ, ಯಾಗಾಂಧರ್‌ ಸ್ವಾಮೀಜಿ, ಗೀತಾನಂದ ಫೌಂಡೇಶನ್‌ ಸಮಾಜ ಸೇವಾ ವಿಭಾಗದ ರವಿಕಿರಣ್‌, ನ್ಯಾಯವಾದಿಗಳಾದ ಟಿ. ಮಂಜುನಾಥ್‌ ಗಿಳಿಯಾರು, ಜನಸೇವಾ ಟ್ರಸ್ಟ್‌ ಕೋಶಾಧಿಕಾರಿ ಅರುಣ್‌ ಶೆಟ್ಟಿ, ಕಾರ್ಯದರ್ಶಿ ಅಶೋಕ್‌ ಬನ್ನಾಡಿ, ಜತೆ ಕಾರ್ಯದರ್ಶಿ ವಿನಯ್‌ ಪುತ್ರನ್‌, ಸಂಘಟನಾ ಕಾರ್ಯದರ್ಶಿ ಕಿರಣ್‌ ಆಚಾರ್ಯ, ಹೈಕಾಡಿ ವಿಜಯ್‌ ಕುಮಾರ್‌ ಶೆಟ್ಟಿ, ಹರೀಶ್‌ ಕಿರಣ್‌ ತುಂಗ, ಅಭಿಜಿತ್‌ ಪಾಂಡೇಶ್ವರ, ಶರತ್‌ ಕೊತ್ತಾಡಿ ಮುಂತಾದವರು ಉಪಸ್ಥಿತರಿದ್ದರು.

ಗಣೇಶ್‌ ಬನ್ನಾಡಿ ಸ್ವಾಗತಿಸಿದರು. ಅರುಣ್‌ ಕುಮಾರ್‌ ಕಮ್ಮಟ್ಟು ಕಾರ್ಯಕ್ರಮವನ್ನ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ