ಆ್ಯಪ್ನಗರ

ಹೆಮ್ಮಾಡಿ ಶಾಲೆಯಲ್ಲಿ ಆಕರ್ಷಿಸಿದ ಮಕ್ಕಳ ಸಂತೆ

ಬನ್ನಿ ಬನ್ನಿ ಬನ್ನಿ... ಬರೇ 10 ರೂಪಾಯಿ. ಜ್ಯೂಸ್‌ ಕುಡಿರಿ, ತಿಂಡಿ ತಿನ್ನಿ. ಈ ಬಿರು ಬೇಸಿಗೆಗೆ ಬೇಕೆ ಕಲ್ಲಂಗಡಿ, ಲಿಂಬು ಶರಬತ್‌?....ಹೆಮ್ಮಾಡಿ ಪ್ರಾಥಮಿಕ ಶಾಲೆ ಆವರಣದಲ್ಲಿ ವಿದ್ಯಾರ್ಥಿ ಸಂತೆಯಲ್ಲಿ ವಿದ್ಯಾರ್ಥಿಗಳು ವ್ಯಾಪಾರದಲ್ಲಿ ಹೀಗೆ ಸಂಭ್ರಮದಿಂದ ತೊಡಗಿಕೊಂಡಿದ್ದರು.

Vijaya Karnataka 11 Apr 2019, 5:00 am
ಕುಂದಾಪುರ: ಬನ್ನಿ ಬನ್ನಿ ಬನ್ನಿ... ಬರೇ 10 ರೂಪಾಯಿ. ಜ್ಯೂಸ್‌ ಕುಡಿರಿ, ತಿಂಡಿ ತಿನ್ನಿ. ಈ ಬಿರು ಬೇಸಿಗೆಗೆ ಬೇಕೆ ಕಲ್ಲಂಗಡಿ, ಲಿಂಬು ಶರಬತ್‌?....ಹೆಮ್ಮಾಡಿ ಪ್ರಾಥಮಿಕ ಶಾಲೆ ಆವರಣದಲ್ಲಿ ವಿದ್ಯಾರ್ಥಿ ಸಂತೆಯಲ್ಲಿ ವಿದ್ಯಾರ್ಥಿಗಳು ವ್ಯಾಪಾರದಲ್ಲಿ ಹೀಗೆ ಸಂಭ್ರಮದಿಂದ ತೊಡಗಿಕೊಂಡಿದ್ದರು.
Vijaya Karnataka Web hemmady


ಮಕ್ಕಳಲ್ಲಿ ವ್ಯಾವಹಾರಿಕ ಜ್ಞಾನ, ವ್ಯಾಪಾರ ಕೌಶಲ್ಯವನ್ನು ಬೆಳೆಸುವ ಸದುದ್ದೇಶದಿಂದ ಹೆಮ್ಮಾಡಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ ಆಹಾರ ಮೇಳ ವಿಶಿಷ್ಟವಾಗಿ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು.

ವಿಶೇಷವೆಂದರೆ ಪ್ರತಿ ದಿನ ತರಗತಿ ಕೋಣೆಯಲ್ಲಿ ಶಿಕ್ಷ ಕರು ಹೇಳುತ್ತಿದ್ದ ಪಾಠ ಕೇಳುತ್ತಿದ್ದರೆ ಈ ದಿನ ಮಾತ್ರ ವಿದ್ಯಾರ್ಥಿಗಳು ಸಂತೆಯಲ್ಲಿ ತಾವು ತಯಾರಿಸಿದ, ಕೊಂಡು ತಂದ, ಬೆಳೆದ ಉತ್ಪನ್ನಗಳ ಮಾರಾಟದಲ್ಲಿ ತೊಡಗಿಕೊಂಡಿದ್ದರು. ಆಹಾರ ಮೇಳದಲ್ಲಿ ಅತ್ಯಂತ ಯಶಸ್ವಿಯಾಗಿ ಗ್ರಾಹಕರ ಮನವೊಲಿಸಿ ತಾವು ಮಾರಾಟಕ್ಕಿಟ್ಟಿದ್ದ ಉತ್ಪನ್ನಗಳನ್ನು ಮಾರಾಟ ಮಾಡಿ ವ್ಯಾಪಾರ ಕುದುರಿಸಿ ಹಣ ಪಡೆದ ವಿದ್ಯಾರ್ಥಿಗಳ ಮೊಗದಲ್ಲಿ ಮಂದಹಾಸ ಮೂಡಿಬಂತು.

ಬೆಳಗ್ಗೆ ಬೇಗನೆ ಬಂದ ವಿದ್ಯಾರ್ಥಿಗಳು ಶಾಲೆಯಲ್ಲಿಯೇ ಶಿಕ್ಷ ಕರು, ಎಸ್‌ಡಿಎಂಸಿ ಸದಸ್ಯರು ಹಾಗೂ ಅಡುಗೆ ಸಿಬ್ಬಂದಿ ಮಾರ್ಗದರ್ಶನದಲ್ಲಿ ಕೇಸರಿಬಾತ್‌ ಹಾಗೂ ಪಲಾವ್‌ ಖಾದ್ಯ ತಯಾರಿಸಿದ್ದರು. ಇದು ಬಹುಬೇಗನೆ ಖಾಲಿಯಾಗುವುದರೊಂದಿಗೆ ಕಲ್ಲಂಗಡಿ ಹಣ್ಣು, ಕಲ್ಲಂಗಡಿ ಜ್ಯೂಸ್‌, ರಾಗಿ ಹಾಗೂ ಹೆಸರು ಜ್ಯೂಸ್‌ ಕೇವಲ ಹತ್ತು ರೂ.ಗೆ ಬೇಗ ಬೇಗನೆ ಮಾರಾಟವಾದವು.

ಕರಕುಶಲ ವಸ್ತು, ವಿಜ್ಞಾನ ಮಾದರಿ ಪ್ರದರ್ಶನ: ಶಾಲೆಯಲ್ಲಿ ಆಹಾರ ಮೇಳಕ್ಕೆ ಆಗಮಿಸಿದ ಗ್ರಾಹಕರಿಗೆ, ವಿದ್ಯಾರ್ಥಿಗಳ ಪೋಷಕರಿಗಾಗಿ ಕರಕುಶಲ ವಸ್ತು ಪ್ರದರ್ಶನ ಹಾಗೂ ವಿಜ್ಞಾನ ಮಾದರಿಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳು ಶಿಕ್ಷ ಕರ ಮಾರ್ಗದರ್ಶನದಲ್ಲಿ ತಯಾರಿಸಿದ ಕರಕುಶಲ ವಸ್ತುಗಳು ನೋಡುಗರನ್ನು ಆಕರ್ಷಿಸಿದವು.

ದಿನಸಿ ಸಾಮಾಗ್ರಿಗಳ ಮಿನಿ ಸಂತೆ : ಶಾಲೆಯಲ್ಲಿ ಆಯೋಜಿಸಿದ್ದ ಆಹಾರ ಮೇಳದಲ್ಲಿ ವಿದ್ಯಾರ್ಥಿಯೊಬ್ಬ ದಿನಸಿ ಸಾಮಾಗ್ರಿಗಳನ್ನು ಮಾರಾಟಕ್ಕಿಟ್ಟಿದ್ದು ಮೇಳಕ್ಕೆ ಆಗಮಿಸಿದ ಗ್ರಾಹಕರು, ವಿದ್ಯಾರ್ಥಿಗಳ ಪೋಷಕರು ಈ ಮಿನಿ ಸಂತೆಯಲ್ಲಿ ಸಾಮಾಗ್ರಿ ಖರೀದಿಗೆ ಮುಗಿಬಿದ್ದರು. ಗ್ರಾಹಕರು ಹಾಗೂ ದಿನಸಿ ಅಂಗಡಿಯ ವಿದ್ಯಾರ್ಥಿಯ ನಡುವೆ ರಿಯಾಯಿತಿ ದರಕ್ಕಾಗಿ ಸಾಕಷ್ಟು ಚರ್ಚೆಗಳು ನಡೆದವು. ಮೆಣಸು, ಕೊತ್ತುಂಬರಿ, ಹುಳಿ, ಬೆಳ್ಳುಳ್ಳಿ, ಈರುಳ್ಳಿ, ಜೀರಿಗೆ, ಮೆಂತೆ, ಕಾಳುಮೆಣಸು ಸೇರಿದಂತೆ ಇನ್ನಿತರ ದಿನಸಿ ವಸ್ತುಗಳನ್ನು ಖರೀದಿಸಲು ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ