ಆ್ಯಪ್ನಗರ

ಶೀರೂರು ಶ್ರೀ ಸಾವಿನ ಸುಳಿವು ಲಭ್ಯ: ಭೂ ಮಾಫಿಯಾ ಛೂ ಬಿಟ್ಟ 'ವಿಷ' ಕನ್ಯೆ

ಶೀರೂರು ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ ವ್ಯವಹಾರ, ಸಂಬಂಧಗಳ ನೆಲೆಯಲ್ಲಿ ಭೂ ಮಾಫಿಯಾ ಛೂ ಬಿಟ್ಟ 'ವಿಷ'ಕನ್ಯೆಯ ವಿಚಾರಣೆ ನಡೆಸಿದ ಪೊಲೀಸರಿಗೆ ಶನಿವಾರ ಮಹತ್ವದ ಸುಳಿವು ಲಭಿಸಿದೆ.

Vijaya Karnataka 22 Jul 2018, 9:28 am
ಉಡುಪಿ: ಶೀರೂರು ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ ವ್ಯವಹಾರ, ಸಂಬಂಧಗಳ ನೆಲೆಯಲ್ಲಿ ಭೂ ಮಾಫಿಯಾ ಛೂ ಬಿಟ್ಟ 'ವಿಷ'ಕನ್ಯೆಯ ವಿಚಾರಣೆ ನಡೆಸಿದ ಪೊಲೀಸರಿಗೆ ಶನಿವಾರ ಮಹತ್ವದ ಸುಳಿವು ಲಭಿಸಿದೆ.
Vijaya Karnataka Web shiroor shri.


ಬ್ರಹ್ಮಾವರ ಸರ್ಕಲ್‌ ಇನ್ಸ್‌ಪೆಕ್ಟರ್‌ ಶ್ರೀಕಾಂತ್‌, ಕಾರ್ಕಳ ಎಎನ್‌ಎಫ್‌ ಅಧಿಕಾರಿ ಬೆಳ್ಳಿಯಪ್ಪ ನೇತೃತ್ವದಲ್ಲಿ ಪೊಲೀಸರ 12 ತಂಡವನ್ನು ಹಲವು ಆಯಾಮಗಳ ತನಿಖೆಗಾಗಿ ರಚಿಸಿದ್ದು, ವಿಚ್ಛೇದಿತ ಮಹಿಳೆ ಸಹಿತ ಆರು ಮಂದಿಯನ್ನು ವಿಚಾರಣೆ ನಡೆಸಲಾಗಿದೆ.

ಆಪ್ತರಾಗಿದ್ದ ಭಕ್ತೆಯೊಬ್ಬರು ನೀಡಿದ ಅವಲಕ್ಕಿ ಮೂಲಕ ನಡೆದಿರಬಹುದಾದ ವಿಷ ಪ್ರಯೋಗದ ಹಿಂದಿನ ರಹಸ್ಯ ಅರಿಯಲು ವಿಚಾರಣೆ ನಡೆಸಿದ ಪೊಲೀಸರಿಗೆ ಪ್ರಕರಣದ ಹಿಂದೆ ಭೂ ಮಾಫಿಯಾದ ಕೈವಾಡವಿರುವ ಸುಳಿವು ದೊರೆತಿದೆ.

ಸಾವಿಗೆ ಮಹಿಳೆ ಕಾರಣ


100 ಕೋಟಿ ರೂ.

ಶೀರೂರು ಶ್ರೀಪಾದರು ಮಠದ ಪಟ್ಟದ ದೇವರು ವಿಠ್ಠಲನ ಹೆಸರಲ್ಲಿರುವ ಜಾಗವನ್ನು ಗುತ್ತಿಗೆ ನೀಡುವ ಮೂಲಕ 100 ಕೋಟಿ ರೂ.ಗಳಿಗೂ ಅಧಿಕ ಪಾಲುದಾರಿಕೆ ವ್ಯವಹಾರದಲ್ಲಿ ತೊಡಗಿದ್ದು,ಈ ಕಾರಣಕ್ಕಾಗಿ ಬ್ಯಾಂಕ್‌ಗಳಿಂದ ಸಾಲವನ್ನೂ ಪಡೆದಿದ್ದರು. ತಮಗೆ ವಂಚನೆ ಮಾಡಿದ್ದ ಮುಂಬಯಿಯ ಉದ್ಯಮಿಗಳಿಬ್ಬರು 26 ಕೋಟಿ ರೂ. ವಸೂಲಿ ಮಾಡಿಕೊಡುವಂತೆ ಶ್ರೀಗಳು ದೈವಗಳ ಮೊರೆ ಹೋಗಿದ್ದರು.

ಸಾಲ ಪಾವತಿಸಲಾಗದ ಸಂಕಷ್ಟ:

ಉಡುಪಿ ಕಲ್ಸಂಕದಲ್ಲಿರುವ ಕನಕ ಮಾಲ್‌ಗೆ ಪಡೆದ 15 ಕೋಟಿ ರೂ. ಸಾಲದ ಬಡ್ಡಿ, ಚಕ್ರಬಡ್ಡಿ ಸೇರಿ 30 ಕೋಟಿ ರೂ.ಗಳಿಗೂ ಅಧಿಕವಾಗಿತ್ತು. ಬ್ಯಾಂಕ್‌ ಸಾಲ ಮರುಪಾವತಿಗೆ ಎರಡು ತಿಂಗಳ ಹಿಂದೆ ಹಿರಿಯಡ್ಕದ ಶೀರೂರು ಮೂಲ ಮಠದಲ್ಲಿ ಬ್ಯಾಂಕ್‌ ಕಡೆಯಿಂದ ಸೂಚನೆ ನೀಡಿದ್ದಲ್ಲದೆ, ಬಳಿಕ ಪ್ರಕಟಣೆಯನ್ನೂ ಹೊರಡಿಸಿತ್ತು.

ಶೀರೂರು ಮಠದ ಸ್ಥಿರಾಸ್ತಿ, ಚರಾಸ್ತಿ 120 ಕೋಟಿ ರೂ.ಗಳಿಗೂ ಅಧಿಕವಿದ್ದು 75 ಎಕರೆಗೂ ಅಧಿಕ ಭೂಮಿ ದಾನ ಮಾಡಲಾಗಿದೆ. ಉಳಿದಂತೆ ಎಲ್ಲಿ, ಎಷ್ಟು ಆಸ್ತಿಯಿದೆ ಎನ್ನುವ ದಾಖಲೆಗಳನ್ನು ಕ್ರೋಢೀಕರಿಸಿ ಉಸ್ತುವಾರಿ, ನಿರ್ವಹಣೆಗಾಗಿ ದ್ವಂದ್ವ ಮಠ ಸೋದೆ ಮಠದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ಐವರ ಸಮಿತಿ ರಚಿಸಿದ್ದಾರೆ.

ಶೀರೂರು ಶ್ರೀಗಳು ಮಣಿಪಾಲದ ಕುಂಡೇಲಕಾಡಿನಲ್ಲಿ ಮೂರು ಕಟ್ಟಡಗಳನ್ನು ಬಿಲ್ಡರ್‌ಗಳ ಪಾಲುದಾರಿಕೆಯಲ್ಲಿ ನಿರ್ಮಿಸಿದ್ದಾರೆ. ಮುಂಬಯಿ ಮೂಲದ ಕೆಲ ಪಾಲುದಾರ ಉದ್ಯಮಿಗಳು ಹಣ ನೀಡದೆ ವಂಚಿಸಿದ್ದರು ಎನ್ನಲಾಗಿದೆ.

ಮಹಿಳೆಯ ಸುತ್ತ ಪ್ರಕರಣ


ಆತ್ಮ ರಕ್ಷಣೆಗಾಗಿ ಪಿಸ್ತೂಲಿತ್ತು

ಬಿಲ್ಡರ್‌ಗಳು, ಪಾಲುದಾರರಿಂದ ಬೆದರಿಕೆ ಇದ್ದ ಕಾರಣ ತಮ್ಮ ಜೀವಕ್ಕೆ ಅಪಾಯವಿರುವುದನ್ನು ವಕೀಲರಲ್ಲಿ ಹೇಳಿಕೊಂಡಿದ್ದ ಶ್ರೀಪಾದರು ಆತ್ಮ ರಕ್ಷಣೆ ನೆಲೆಯಲ್ಲಿ ಪಿಸ್ತೂಲು ಖರೀದಿಸಿದ್ದರು.

ಇಂತಹ ಯಾವ ಬೆಳವಣಿಯೂ ಆಗಿಲ್ಲ

ಶೀರೂರು ಶ್ರೀ ಸಂಶಯಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಮೂಲದ ಮಹಿಳೆಯ ವಿಚಾರಣೆ ಮಾಡಿಲ್ಲ, ಬಂಧಿಸಿಲ್ಲ. ಇಂತಹ ಯಾವುದೇ ಬೆಳವಣಿಗೆಯಾಗಿಲ್ಲ. ತನಿಖೆ ವಿವಿಧ ಆಯಾಮಗಳಲ್ಲಿ ನಡೆಯುತ್ತಿದೆ. ತನಿಖೆ ಪೂರ್ಣವಾಗುವ ತನಕ ಮಾಹಿತಿ ನೀಡಲಾಗದು.

-ಲಕ್ಷ್ಮಣ ಬ. ನಿಂಬರಗಿ, ಎಸ್ಪಿ, ಉಡುಪಿ

ವಿಚಾರಣೆ


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ