ಆ್ಯಪ್ನಗರ

ವಸತಿ ಯೋಜನೆ: 10 ಮೆ. ಟನ್‌ ಮರಳು ನೀಡಲು ಆದೇಶ

ಸರಕಾರಿ ವಸತಿ ಯೋಜನೆಯ ಫಲಾನುಭವಿಗಳಿಗೆ ಅನುಕೂಲವಾಗುವಂತೆ ಪರವಾನಗಿದಾರರಿಗೆ ನಿಗದಿ ಪÜಡಿಸಿರುವ ಮರಳಿನ ಪ್ರಮಾಣದಲ್ಲಿ ಶೇ.10ರಷ್ಟು ಮರಳನ್ನು ನಿರ್ಮಿತಿ ಕೇಂದ್ರದವರು ನೇಜಾರು ಪ್ರದೇಶದಲ್ಲಿ ನಿರ್ಮಿಸಿರುವ ಸ್ಟಾಕ್‌ಯಾರ್ಡ್‌ಗೆ ಹಾಕಲು ಮರಳು ಪರವಾನಗಿದಾರರಿಗೆ ಸೂಚಿಸಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Vijaya Karnataka 21 Dec 2018, 5:00 am
ಉಡುಪಿ: ಸರಕಾರಿ ವಸತಿ ಯೋಜನೆಯ ಫಲಾನುಭವಿಗಳಿಗೆ ಅನುಕೂಲವಾಗುವಂತೆ ಪರವಾನಗಿದಾರರಿಗೆ ನಿಗದಿ ಪÜಡಿಸಿರುವ ಮರಳಿನ ಪ್ರಮಾಣದಲ್ಲಿ ಶೇ.10ರಷ್ಟು ಮರಳನ್ನು ನಿರ್ಮಿತಿ ಕೇಂದ್ರದವರು ನೇಜಾರು ಪ್ರದೇಶದಲ್ಲಿ ನಿರ್ಮಿಸಿರುವ ಸ್ಟಾಕ್‌ಯಾರ್ಡ್‌ಗೆ ಹಾಕಲು ಮರಳು ಪರವಾನಗಿದಾರರಿಗೆ ಸೂಚಿಸಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Vijaya Karnataka Web housing scheme 10metric order to give tons of sand
ವಸತಿ ಯೋಜನೆ: 10 ಮೆ. ಟನ್‌ ಮರಳು ನೀಡಲು ಆದೇಶ


ಜಿಲ್ಲೆಯ ಬ್ರಹ್ಮಾವರ ಮತ್ತು ಉಡುಪಿ ತಾಲೂಕಿನ ಸಿಆರ್‌ಝಡ್‌ ವ್ಯಾಪ್ತಿಯಲ್ಲಿನ ನದಿ ಪಾತ್ರಗಳಲ್ಲಿ ಗುರುತಿಸಿರುವ 5 ಮರಳು ದಿಬ್ಬಗಳಲ್ಲಿ ಮರಳು ದಿಬ್ಬಗಳನ್ನು ತೆರವುಗೊಳಿಸಲು ಈಗಾಗಲೇ 36 ಜನರು ಪರವಾನಗಿ ಹಾಗೂ ಸಾಗಾಟ ಪರವಾನಗಿ ಪಡೆದುಕೊಂಡಿದ್ದಾರೆ.

ಈಗಾಗಲೇ ಕಡಿಮೆ ವರಮಾನದ ಸರಕಾರಿ ವಸತಿ ಯೋಜನೆಯ ಫಲಾನುಭವಿಗಳು ಆಯಾ ಗ್ರಾಪಂ/ನಗರಸಭೆ/ಪುರಸಭೆ ಅಧಿಕಾರಿಯವರಿಂದ ಕಟ್ಟಡ ನಿರ್ಮಾಣಕ್ಕೆ ಬೇಕಾಗುವ ಮರಳಿನ ಬಗ್ಗೆ ಮನೆ ಮಂಜೂರಾತಿ ಪತ್ರ, ಮನೆ ನಿರ್ಮಾಣದ ನೀಲಿ ನಕಾಶೆ, ಅಧಾರ್‌ ಕಾರ್ಡ್‌, ದೃಢೀಕರಣ ಪತ್ರದೊಂದಿಗೆ 10 ಮೆ.ಟನ್‌ ಮರಳಿಗೆ 6000 ರೂ.ನÜಂತೆ ಹಾಗೂ ಮರಳು ಲೋಡಿಂಗ್‌ ಚಾರ್ಜ್‌, ಜಿಎಸ್‌ಟಿ ಶುಲ್ಕ, ಸಾಗಾಟ ಪರವಾನಗಿ ಹಾಳೆಯ ಶುಲ್ಕವನ್ನು ನಿರ್ಮಿತಿ ಕೇಂದ್ರದ ಅಧಿಕಾರಿಗೆ ಸಲ್ಲಿಸಿ ಪಡೆಯಬಹುದು ಎಂದು ಅವರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ