ಆ್ಯಪ್ನಗರ

ಖಾಸಗಿ ಸಹಭಾಗಿತ್ವದಿಂದ ಕೊರೊನಾ ಗೆಲ್ಲುತ್ತಿರುವ ಉಡುಪಿ, ಕಲಬುರಗಿ ಜಿಲ್ಲೆ!

ಉಡುಪಿ ಮತ್ತು ಕಲಬುರಗಿ ಜಿಲ್ಲೆಯಲ್ಲಿ ಕೊರೊನಾ ರೋಗಿಗಳ ಶೀಘ್ರ ಗುಣಮುಖರಾಗಲು ಖಾಸಗಿ ಸಹಭಾಗಿತ್ವದಿಂದಲೇ ಸಾಧ್ಯವಾಗಿದೆ. ಖಾಸಗಿ ಆಸ್ಪತ್ರೆಯ ಮಾರ್ಗದರ್ಶನದಲ್ಲಿ ಇಲ್ಲಿನ ಜಿಲ್ಲಾಡಳಿತ ಯಶಸ್ವಿ ಕಂಡಿದೆ.

Vijaya Karnataka Web 22 Jun 2020, 10:04 am
ಉಡುಪಿ: ರಾಜ್ಯದಲ್ಲಿ ಅತೀ ಹೆಚ್ಚು ಪ್ರಕರಣ ದಾಖಲಾದ ಜಿಲ್ಲೆಗಳಲ್ಲಿ ಕಲಬುರಗಿ ಹಾಗೂ ಕರಾವಳಿ ನಗರಿ ಉಡುಪಿ, ಯಾದಗಿರಿ ಜಿಲ್ಲೆ ಸೇರಿವೆ. ಇಲ್ಲಿ ಒಂದೇ ದಿನಕ್ಕೆ 200ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದ ನಿದರ್ಶನವು ಇದೆ. ಇದು ಅಲ್ಲಿನ ಜಿಲ್ಲಾಡಳಿತ, ಜನರನ್ನ ಕಂಗೆಡೆಸಿಯೂ ಇತ್ತು. ಆದರೆ, ಅಲ್ಲಿನ ಜಿಲ್ಲಾಡಳಿತ ಅತ್ಯಂತ ಯಶಸ್ವಿಯಾಗಿ ಪರಿಸ್ಥಿತಿಯನ್ನ ನಿಭಾಯಿಸಿವೆ. ಇದರ ಫಲವಾಗಿ ಅಲ್ಲೀಗ ಸಕ್ರಿಯ ಪ್ರಕರಣಗಳ ಸಂಖ್ಯೆ ಅತ್ಯಂತ ಕಡಿಮೆ ಇದೆ.
Vijaya Karnataka Web 18


ಉಡುಪಿ ಮತ್ತು ಕಲಬುರಗಿ ಜಿಲ್ಲಾಡಳಿತಗಳು ಈ ಯಶಸ್ಸು ಕಾಣಲು ಸಾಧ್ಯವಾಗಿದ್ದು ಖಾಸಗಿ ಸಹಭಾಗಿತ್ವದಿಂದ. ಉಡುಪಿಗೆ ಆಗಮಿಸಿದ ಮುಂಬಯಿ ಮೂಲದ ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ನೀಡುವಲ್ಲಿ, ಮಣಿಪಾಲದ ಟಿಎಂಎ ಪೈ ಆಸ್ಪತ್ರೆ ನೆರವಿಗೆ ನಿಂತಿತು. ಮಾಹೆಗೆ ಸೇರಿದ ಈ ಆಸ್ಪತ್ರೆಯ ಸುಸಜ್ಜಿತ ವ್ಯವಸ್ಥೆ ಮತ್ತು ತಜ್ಞ ವೈದ್ಯರ ಸಲಹೆ ರೋಗಿಗಳು ಶೀಘ್ರ ಚೇತರಿಸುವಂತೆ ಮಾಡಿತು.

ಈಗ ಉಡುಪಿ ಜಿಲ್ಲೆಯಲ್ಲಿ ಸಕ್ರಿಯವಾಗಿ ಬಾಕಿ ಉಳಿದಿರುವುದು ಕೇವಲ 102 ಪ್ರಕರಣಗಳು ಮಾತ್ರ. ಕಲಬುರಗಿಯ ರೋಗಗಳ ಮೇಲ್ವಿಚಾರಣೆಯನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗಳ ತಜ್ಞರ ನಿಯೋಗವೊಂದು ರಾಜಧಾನಿತಿಂದಲೇ ನೋಡಿಕೊಂಡಿತು. ಸೂಕ್ತ ಸಲಹಗೆಗಳಿಂದಾಗಿ ಕಲಬುರಗಿಯ ರೋಗಿಗಳು ಬೇಗನೆ ಚೇತರಿಸಿಕೊಳ್ಳುವಂತಾಯಿತು.

ಗೋವಿನ ಸಗಣಿಯಿಂದ ಪರಿಸರ ಸ್ನೇಹಿ ಪೈಂಟ್‌ ಉತ್ಪಾದನೆ!

ಇನ್ನು ಈ ಬೆಳವಣಿಗೆಯಿಂದಾಗಿ ಮುಂದಿನ ದಿನಗಳಲ್ಲಿ ಖಾಸಗಿ ಸಹಭಾಗಿತ್ವದ ಮೂಲಕ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಿದರೆ ಉತ್ತಮ ಅನ್ನುವ ಮಾತುಗಳು ಕೇಳಿ ಬರುತ್ತಿವೆ. ಸದ್ಯ ಸರಕಾರ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಅವಕಾಶ ನೀಡಿದ್ದು, ದರ ಫಿಕ್ಸ್‌ ಮಾಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ