ಆ್ಯಪ್ನಗರ

ಐಸಿಯು ಬೆಡ್ ವ್ಯವಸ್ಥೆಯಾಗಲಿವೆ, ಆಕ್ಸಿಜನ್ ಬೆಡ್‍ನದ್ದೇ ಚಿಂತೆ: ಉಡುಪಿ ಜಿಲ್ಲಾಧಿಕಾರಿ ಆತಂಕ

ಐಸಿಯು ಕೊರತೆ ನೀಗಿಸಬಹುದು. ಆದರೆ ಆಕ್ಸಿಜನ್ ಪೂರೈಕೆ ಕೊರತೆಯಿಂದಾಗಿ ಹೆಚ್ಚುವರಿ ಆಕ್ಸಿಜನ್ ಬೆಡ್‍ನ ವ್ಯವಸ್ಥೆ ಕಷ್ಟವಾಗುತ್ತಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

Vijaya Karnataka Web 4 May 2021, 7:17 pm
ಉಡುಪಿ: ಕೋವಿಡ್-19 ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಬೆಡ್‍ನ ಕೊರತೆ ಉಂಟಾಗಿದ್ದು, ಮಣಿಪಾಲ ಕೆಎಂಸಿ ಹಾಗೂ ಡಾ.ಟಿಎಂಎ ಪೈ (10 ಬೆಡ್) ಆಸ್ಪತ್ರೆಯಲ್ಲಿ ಐಸಿಯು ಬೆಡ್‍ಗಳನ್ನು ಹೆಚ್ಚಿಸಲಾಗಿದೆ. ಐಸಿಯು ಕೊರತೆ ನೀಗಿಸಬಹುದು. ಆದರೆ ಆಕ್ಸಿಜನ್ ಪೂರೈಕೆ ಕೊರತೆಯಿಂದಾಗಿ ಹೆಚ್ಚುವರಿ ಆಕ್ಸಿಜನ್ ಬೆಡ್‍ನ ವ್ಯವಸ್ಥೆ ಕಷ್ಟವಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.
Vijaya Karnataka Web ICU beds


ಅವರು ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದರು. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರ ಮನವಿ ಮೇರೆಗೆ ಮಣಿಪಾಲ ಕೆಎಂಸಿ ಹಾಗೂ ಡಾ.ಟಿಎಂಎ ಪೈ ಆಸ್ಪತ್ರೆಯಲ್ಲಿ ಐಸಿಯು ಬೆಡ್‍ಗಳನ್ನು ಮೇ 4 ರಿಂದ ಹೆಚ್ಚಿಸಲಾಗಿದೆ.

ನಮ್ಮಲ್ಲಿ ಆಕ್ಸಿಜನ್ ಬೆಡ್ ಇದೆ. ಆದರೆ ಆಕ್ಸಿಜನ್ ಪೂರೈಕೆಯ ಆಧಾರದ ಮೇಲೆ ರೋಗಿಗಳನ್ನು ದಾಖಲಿಸಿಕೊಳ್ಳಬೇಕಾಗಿದೆ. ಆಕ್ಸಿಜನ್ ಕೊರತೆಯ ಬಗ್ಗೆ ಸರಕಾರಕ್ಕೆ ಕೇಳಿದ್ದೇವೆ. ಮುಂದೆ ಜಿಲ್ಲಾವಾರು ಬೇಡಿಕೆಯಂತೆ ಹಂಚಿಕೆ ಮಾಡುವುದಾಗಿ ಹೇಳಿದ್ದಾರೆ. ಆ ನಿಟ್ಟಿನಲ್ಲಿ ವೈದ್ಯರು, ಅಧಿಕಾರಿಗಳ ತಂಡದಿಂದ ಕೆಲಸ ಆಗುತ್ತಿದೆ ಎಂದರು.

ಉಡುಪಿಯಲ್ಲಿ ಕೋವಿಡ್ ಐಸಿಯು ಬೆಡ್ ಭರ್ತಿ, ಸಾವಿನ ಪ್ರಮಾಣವೂ ಹೆಚ್ಚಳ: ಜಿಲ್ಲಾಧಿಕಾರಿ

ಸದ್ಯದ ಆಕ್ಸಿಜನ್ ಕೊರತೆ ನಿಗಿಸುವುದಕ್ಕೆ ಉಸ್ತುವಾರಿ ಸಚಿವರು ಬಳ್ಳಾರಿಯಿಂದ ಒಂದು ಆಕ್ಸಿಜನ್ ಟ್ಯಾಂಕರ್ ವ್ಯವಸ್ಥೆ ಮಾಡಿದ್ದಾರೆ. ಅದರಲ್ಲಿ ಮಂಗಳೂರಿಗೆ ಶೇ. 75, ಉಡುಪಿಗೆ ಶೇ. 25 ರಂತೆ ಪೂರೈಕೆಯಾಗಲಿದೆ. ಆಕ್ಸಿಜನ್ ಕಾಪು ಬೆಳಪುವಿನ ಘಟಕಕ್ಕೆ ತುಂಬಿಸಲಾಗುತ್ತಿದೆ.

ಜಿಲ್ಲೆಯಲ್ಲಿ 2 ದಿನಗಳ ಆಕ್ಸಿಜನ್ ಬೇಡಿಕೆಯಂತೆ ಜಿಲ್ಲಾಡಳಿತ ಕಾರ್ಯಪ್ರವೃತ್ತವಾಗಿದೆ. ಪ್ರತಿಯೊಂದು ಆಕ್ಸಿಜನ್ ಘಟಕಕ್ಕೂ ನೋಡೆಲ್ ಅಧಿಕಾರಿಯನ್ನು ನೇಮಿಸಲಾಗಿದೆ. ಒಂದೇ ಒಂದು ಸಿಲಿಂಡರ್ ಕೂಡಾ ದುರ್ಬಳಕೆ ಆಗದಂತೆ ನಮ್ಮ ಅಧಿಕಾರಿಗಳು ನಿಗಾ ಇಟ್ಟಿದ್ದಾರೆ. ಆಕ್ಸಿಜನ್‍ಯನ್ನು ಆಸ್ಪತ್ರೆಯಲ್ಲೂ ನ್ಯಾಯಯುತವಾಗಿ ಬಳಸಿಕೊಳ್ಳಲು ತಜ್ಞರ ಸಮಿತಿ ರಚಿಸಲಾಗಿದೆ. ಯಾವ ಸೋಂಕಿತರಿಗೆ ಎಷ್ಟು ಪ್ರಮಾಣ/ಯಾರಿಗೆ ಬೇಕಿದೆ ಎನ್ನುವ ಬಗ್ಗೆ ಪರಿಶೀಲನೆ ಮಾಡುತ್ತಾರೆ ಎಂದರು.

ಉಡುಪಿ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಕೋವಿಡ್ ನಿರ್ವಹಣೆಗೆ ಬಹಳ ಕಷ್ಟದ ಸ್ಥಿತಿ ನಿರ್ಮಾಣವಾಗುತ್ತಿದೆ. ದಿನೇ ದಿನೇ ಆಕ್ಸಿಜನ್, ಐಸಿಯು, ವೆಂಟಿಲೇಟರ್ ಬೆಡ್‍ಗಳ ಅವಶ್ಯವುಳ್ಳ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರುತ್ತಿದೆ. ಜಿಲ್ಲೆಯ ಎಲ್ಲಾ ಐಸಿಯು ಬೆಡ್‍ಗಳು ಭರ್ತಿ ಆಗಿದೆ. ಇಂತಹ ಸಂದಿಗ್ನ ಸ್ಥಿತಿಯಲ್ಲಿ ನಾವಿದ್ದೇವೆ ಎಂದರು.

ಕೋವಿಡ್‌ ಪಾಸಿಟಿವ್ ಬಂದ್ರೆ ಮಾಡೋದೇನು? ಚಿಕಿತ್ಸೆಗೆ ಬೆಡ್‌ ಪಡೆಯೋದ್‌ ಹೇಗೆ? ತಿಳಿಯಲೇಬೇಕಾದ ಮಾಹಿತಿ ಇದು!

ಶೇ. 30ಕ್ಕೇರಿದ ಪಾಸಿಟಿವಿಟಿ ರೇಟ್:
ಜಿಲ್ಲೆಯ ಕೋವಿಡ್ ಪಾಸಿಟಿವಿಟಿ ರೇಟ್ ಶೇ. 30 ರಷ್ಟಿದೆ. ಪ್ರತಿ 100 ಮಂದಿಯನ್ನು ಭೇಟಿಯಾದರೆ ಅವರಲ್ಲಿ ಒಬ್ಬರಿಗೆ ಪಾಸಿಟಿವ್ ಇದೆ. ಸಾರ್ವಜನಿಕರ ಸಹಕಾರ ಅವಶ್ಯವಿದೆ. ಪರಿಸ್ಥಿತಿ ಕೈ ಮೀರುವ ಸನ್ನಿವೇಶದಲ್ಲಿದ್ದೇವೆ. ಜನ ಅವಶ್ಯವಿದ್ದರೆ ಮಾತ್ರ ಮನೆಯಿಂದ ಹೊರಗಡೆ ಬರಬೇಕು. ಅನಗತ್ಯ ಓಡಾಟಕ್ಕೆ ಸಾಧ್ಯವಾದಷ್ಟು ಮಟ್ಟಿಗೆ ಕಡಿವಾಣ ಹಾಕಿ ಎಂದು ಸಲಹೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ