ಆ್ಯಪ್ನಗರ

ಮಕ್ಕಳು ಚೆನ್ನಾಗಿದ್ದರೆ ದೇಶ ಚೆನ್ನಾಗಿರುತ್ತದೆ ಚಿಣ್ಣರ ಮಾಸ ಕಾರ್ಯಕ್ರಮ ಉದ್ಘಾಟಿಸಿ ಪಲಿಮಾರು ಶ್ರೀ

ಹೊಟ್ಟೆ ತುಂಬಾ ಊಟ, ಪಠ್ಯ ಚಿಂತನೆ, ಪಠ್ಯೇತರ ಚಟುವಟಿಕೆಯಿಂದ ಮಕ್ಕಳ ಸಮಗ್ರ ಬೆಳವಣಿಗೆ ಸಾಧ್ಯ ಎಂದು ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಹೇಳಿದ್ದಾರೆ.

Vijaya Karnataka 2 Dec 2018, 5:00 am
ಉಡುಪಿ: ಹೊಟ್ಟೆ ತುಂಬಾ ಊಟ, ಪಠ್ಯ ಚಿಂತನೆ, ಪಠ್ಯೇತರ ಚಟುವಟಿಕೆಯಿಂದ ಮಕ್ಕಳ ಸಮಗ್ರ ಬೆಳವಣಿಗೆ ಸಾಧ್ಯ ಎಂದು ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಹೇಳಿದ್ದಾರೆ.
Vijaya Karnataka Web 4


ಪರ್ಯಾಯ ಪಲಿಮಾರು ಮಠದ ವತಿಯಿಂದ ಚಿಣ್ಣರ ಸಂತರ್ಪಣೆ(ಶ್ರೀಕೃಷ್ಣ ಪ್ರಸಾದ) ಯೋಜನೆಗೊಳಪಟ್ಟ 138 ಶಾಲೆಗಳ ಮಕ್ಕಳ ಪ್ರತಿಭಾ ಪ್ರದರ್ಶನಕ್ಕಾಗಿ ಆಯೋಜಿಸಿದ ಚಿಣ್ಣರ ಮಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಶನಿವಾರ ಆಶೀರ್ವಚನ ನೀಡಿದರು.

ಮಕ್ಕಳು ಚೆನ್ನಾಗಿದ್ದರೆ ದೇಶ ಚೆನ್ನಾಗಿರುತ್ತದೆ. ದೇವರಿಗೆ ಗರ್ಭಗುಡಿಯೊಳಗೆ ನೈವೇದ್ಯ, ಮಂಗಳಾರತಿ ಒಂದು ವಿಧದ ಪೂಜೆಯಾದರೆ ಚಿಣ್ಣರೊಳಗೆ ಚಿನ್ನದ ಕೃಷ್ಣನನ್ನು ಕಾಣುವುದು ಇನ್ನೊಂದು ಬಗೆಯ ಪೂಜೆ. ಮಕ್ಕಳ ಪ್ರತಿಭೆಗೆ ಶ್ರೀಕೃಷ್ಣನ ಸನ್ನಿಧಿಯಲ್ಲಿ ನೀಡಿದ ಉತ್ತಮ ಅವಕಾಶದ ಸದ್ಭಳಕೆಯಾಗಬೇಕು ಎಂದರು.

ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಮಾತನಾಡಿ, 2002ರಲ್ಲಿ ಪಲಿಮಾರು ಶ್ರೀಪಾದರು ಆರಂಭಿಸಿದ ಚಿಣ್ಣರ ಸಂತರ್ಪಣೆ ಯೋಜನೆಯನ್ನು ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಗಮನಿಸಿ ಅಕ್ಷರ ದಾಸೋಹ ಜಾರಿಗೊಳಿಸಿದ್ದಾರೆ. ಇಂದು ದೇಶದ 12 ಕೋಟಿ ಮಕ್ಕಳಿಗೆ ಬಿಸಿಯೂಟ ದೊರೆಯುತ್ತಿದೆ. ಅಮೆರಿಕ, ಇಂಗ್ಲೆಂಡ್‌ನಂತಹ ದೇಶದಲ್ಲೇ ಇಲ್ಲದ ಹಸಿದ ಮಕ್ಕಳ ಹೊಟ್ಟೆಗೆ ಊಟ ಹಾಕುವ ಕಾರ್ಯಕ್ಕೆ ಅನ್ನಬ್ರಹ್ಮನ ಕ್ಷೇತ್ರ ಉಡುಪಿ ಪ್ರೇರಣೆ ಎಂದು ಹೇಳಿದರು.

ಚಿಣ್ಣರ ಸಂತರ್ಪಣೆ ಕಾರ್ಯದರ್ಶಿ ಶ್ರೀನಿವಾಸ ರಾವ್‌, ತೀರ್ಪುಗಾರರಾದ ನಾರಾಯಣ, ಅಜಿತ್‌ ಕುಮಾರ್‌ ಉಪಸ್ಥಿತರಿದ್ದರು. ಮಠದ ದಿವಾನ ಶಿಬರೂರು ವೇದವ್ಯಾಸ ತಂತ್ರಿ ಸ್ವಾಗತಿಸಿದರು. ಚಿಣ್ಣರ ಸಂತರ್ಪಣೆ ಶಾಲೆಗಳ ಒಕ್ಕೂಟದ ಅಧ್ಯಕ್ಷ ಅಶೋಕ್‌ ಕುಮಾರ್‌ ಮಾಡ ಕಾರ್ಯಕ್ರಮ ನಿರೂಪಿಸಿದರು. ನಿರ್ಮಲ್‌ ಕುಮಾರ್‌ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ