ಆ್ಯಪ್ನಗರ

ಎಂಜಿನಿಯರ್‌ ಕನಸಿಗೆ ಭದ್ರ ಬುನಾದಿ ಐಎಂಜೆ ಫೌಂಡೇಶನ್‌ ಸಹಾಯಧನ

ಕೌನ್ಸೆಲಿಂಗ್‌ನ ಸಂದರ್ಶನದಲ್ಲಿ ಅರ್ಹತೆ ಮತ್ತು ಆದಾಯದ ದಾಖಲೆ ಪರಿಗಣಿಸಿ ಸ್ಕಾಲರ್‌ಶಿಪ್‌ ಹಣವನ್ನು ಅಂತಿಮಗೊಳಿಸಲಾಗುವುದು. ಲಾಕ್‌ಡೌನ್‌ ಸಮಯದಲ್ಲಿ ನಷ್ಟ ಅನುಭವಿಸಿದ ಹೆಚ್ಚಿನ ಪೋಷಕರಿಗೆ ಮಕ್ಕಳ ಶುಲ್ಕ ಕಟ್ಟಲು ಫೌಂಡೇಶನ್‌ ಕೊಡುತ್ತಿರುವ ಈ ಸೌಲಭ್ಯ ಬಹಳಷ್ಟು ಸಹಕಾರಿಯಾಗಲಿದೆ.

Vijaya Karnataka Web 21 May 2020, 10:06 am
ಕುಂದಾಪುರ: ಮಾಜಿ ಸಂಸದ ದಿ. ಐ.ಎಂ. ಜಯರಾಮ ಶೆಟ್ಟಿ ಸ್ಮರಣಾರ್ಥ ಸ್ಥಾಪಿಸಲ್ಪಟ್ಟ ಐಎಂಜೆ ಫೌಂಡೇಶನ್‌ ವತಿಯಿಂದ ಎಂಐಟಿ ಕುಂದಾಪುರ ಕಾಲೇಜಿಗೆ ಪ್ರವೇಶ ಪಡೆಯುವ ಪ್ರತಿಭಾನ್ವಿತ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ 20 ಸಾವಿರರಿಂದ 65 ಸಾವಿರ ರೂ.ವರೆಗೆ ಸ್ಕಾಲರ್‌ಶಿಪ್‌ ದೊರೆಯಲಿದೆ. ಸೌಲಭ್ಯ ಪಡೆಯ ಬಯಸುವ ವಿದ್ಯಾರ್ಥಿಗಳು 634220118ಗೆ ಕರೆ ಮಾಡಿ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ.
Vijaya Karnataka Web IMJ Foundation


ನೋಂದಣಿ ಮಾಡಿಕೊಂಡ ವಿದ್ಯಾರ್ಥಿಗಳು ಐಎಂಜೆ ಫೌಂಡೇಶನ್‌ ನಡೆಸುವ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಬೇಕಾಗುತ್ತದೆ. ಕೌನ್ಸೆಲಿಂಗ್‌ನ ಸಂದರ್ಶನದಲ್ಲಿ ಅರ್ಹತೆ ಮತ್ತು ಆದಾಯದ ದಾಖಲೆ ಪರಿಗಣಿಸಿ ಸ್ಕಾಲರ್‌ಶಿಪ್‌ ಹಣವನ್ನು ಅಂತಿಮಗೊಳಿಸಲಾಗುವುದು. ಲಾಕ್‌ಡೌನ್‌ ಸಮಯದಲ್ಲಿ ನಷ್ಟ ಅನುಭವಿಸಿದ ಹೆಚ್ಚಿನ ಪೋಷಕರಿಗೆ ಮಕ್ಕಳ ಶುಲ್ಕ ಕಟ್ಟಲು ಫೌಂಡೇಶನ್‌ ಕೊಡುತ್ತಿರುವ ಈ ಸೌಲಭ್ಯ ಬಹಳಷ್ಟು ಸಹಕಾರಿಯಾಗಲಿದೆ. ಕೌನ್ಸೆಲಿಂಗ್‌ಗೆ ಹಾಜರಾಗುವುದರಿಂದ ಸ್ಕಾಲರ್‌ಶಿಪ್‌ ಜತೆಯಲ್ಲಿ ಶಿಕ್ಷಣ ಸಾಲ, ಸರಕಾರದಿಂದ ಸಿಗುವ ಸವಲತ್ತುಗಳು, ಪ್ಲೇಸ್‌ಮೆಂಟ್‌, ಉನ್ನತ ವ್ಯಾಸಂಗ ಬಗ್ಗೆ ಹೆಚ್ಚಿನ ಮಾಹಿತಿ ತಜ್ಞರ ಮೂಲಕ ಕೊಡಲಾಗುತ್ತದೆ.

ಐಎಂಜೆ ಫೌಂಡೇಶನ್‌ ಸ್ಕಾಲರ್‌ಶಿಪ್‌ನಿಂದ ನನ್ನ ಎಂಜಿನಿಯರ್‌ ಆಗುವ ಕನಸು ನನಸಾಗಿದೆ. ಪ್ರಾಧ್ಯಾಪಕರ ಪ್ರೋತ್ಸಾಹ ಮತ್ತು ಉತ್ತಮ ಶಿಕ್ಷಣದಿಂದ ಕ್ಯಾಂಪಸ್‌ನಲ್ಲಿ ಉದ್ಯೋಗ ಲಭಿಸುವಂತಾಗಿದೆ.
-ಗುರುಚರಣ್‌ ಬೈಂದೂರು, ಸಾಪ್ಟ್‌ವೇರ್‌ ಎಂಜಿನಿಯರ್‌, ತಂತ್ರಜ್ಞಾನ ಕಂಪನಿ ಬೆಂಗಳೂರು

ನಾನು ಐಎಂಜೆ ಫೌಂಡೇಶನ್‌ ಕೌನ್ಸೆಲಿಂಗ್‌ನಲ್ಲಿ ಭಾಗಿಯಾಗಿದೆ. ಅಲ್ಲಿ ನನಗೆ ತಜ್ಞರಿಂದ ಉತ್ತಮ ಮಾರ್ಗದರ್ಶನ ದೊರೆಯಿತು. ಹಾಗೆಯೇ ನನ್ನ ಸಂಪೂರ್ಣ ಶುಲ್ಕವನ್ನು ಫೌಂಡೇಶನ್‌ ಕಡೆಯಿಂದ ಭರಿಸಲಾಯಿತು.
ರಶ್ಮಿತಾ ಪೂಜಾರಿ, ಡಿಸೈನ್‌ ಎಂಜಿನಿಯರ್‌, ಆರ್‌ಜಿಬಿಎಸ್‌ಐ ಬೆಂಗಳೂರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ