ಆ್ಯಪ್ನಗರ

ನಾನಾ ಪ್ರಕರಣಗಳಲ್ಲಿ ವಾರಂಟ್‌: 27 ಮಂದಿ ಸೆರೆ

ಲೋಕಸಭೆ ಚುನಾವ

Vijaya Karnataka 30 Mar 2019, 5:00 am
ಉಡುಪಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು ನಾನಾ ಠಾಣೆಗಳಲ್ಲಿರುವ ಪ್ರಕರಣಕ್ಕೆ ಸಂಬಂಧಿಸಿ ವಾರಂಟ್‌ ಹೊಂದಿದ್ದ 27 ಮಂದಿಯನ್ನು ಬಂಧಿಸಿದ್ದಾರೆ.
Vijaya Karnataka Web in many cases warrant 27 people arrested
ನಾನಾ ಪ್ರಕರಣಗಳಲ್ಲಿ ವಾರಂಟ್‌: 27 ಮಂದಿ ಸೆರೆ


ಹಲವು ವರ್ಷಗಳಿಂದ ಜಾರಿಯಾಗದೆ ಬಾಕಿಯಿರುವ ವಾರಂಟ್‌ಗಳ ಪರಾಮರ್ಶೆ ನಡೆಸಿ ಪತ್ತೆ ಹಚ್ಚಲು ಹೊರ ರಾಜ್ಯಗಳಿಗೆ ಪೊಲೀಸ್‌ ಉಪನಿರೀಕ್ಷಕರ ನೇತೃತ್ವದ ಮೂರು ತಂಡಗಳನ್ನು ಹಾಗೂ ಹೊರ ಜಿಲ್ಲೆಗಳಿಗೆ ಎಎಸ್‌ಐ ನೇತೃತ್ವದ ತಂಡಗಳನ್ನು ಮಾ.23ರಂದು ಕಳುಹಿಸಲಾಗಿತ್ತು.

ಮಧ್ಯಪ್ರದೇಶದ ಇಂದೋರ್‌ನಿಂದ ಇಬ್ಬರು, ಮಹಾರಾಷ್ಟ್ರದ ಸಾಂಗ್ಲಿಯಿಂದ ಒಬ್ಬ, ಕೇರಳದಿಂದ ಮೂವರನ್ನು ಪಿಎಸ್‌ಐ ನೇತೃತ್ವದ ತಂಡ ಪತ್ತೆ ಹಚ್ಚಿದೆ. ಹೊರ ಜಿಲ್ಲೆಗೆ ತೆರಳಿದ ಐದು ತಂಡಗಳು 21 ಮಂದಿಯನ್ನು ಬಂಧಿಸಿದ್ದು, ಒಟ್ಟು 7 ಮಂದಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಕಾಸರಗೋಡಿನಲ್ಲಿ ಬಂಧಿತ ಅಮೀರ್‌ ಆಲಿ 26 ವರ್ಷಗಳಿಂದ ತಲೆಮರೆಸಿಕೊಂಡಿದ್ದು, ಬೈಂದೂರು ಠಾಣೆಗೆ ಸಂಬಂಧಿಸಿ ಕಳವು ಪ್ರಕರಣದ ಪ್ರಧಾನ ಆರೋಪಿಯಾಗಿದ್ದಾನೆ. ಮಣಿಪಾಲ ಠಾಣಾ ಪಿಎಸ್‌ಐ ಶ್ರೀಧರ ನಂಬಿಯಾರ್‌ ನೇತೃತ್ವದ ತಂಡ ಕಾಸರಗೋಡಿನಲ್ಲಿ ಬಂಧಿಸಿತ್ತು.

ಇದೇ ಪ್ರಕರಣದ ಇನ್ನೊಬ್ಬ ಆರೋಪಿ ಕೆ.ಪಿ. ಯೂಸುಫ್‌ ಮೃತ ಪಟ್ಟಿದ್ದನ್ನು ಖಚಿತಪಡಿಸಿದ ತಂಡ, ಆತನ ಮರಣಪ್ರಮಾಣ ಪತ್ರ ಪಡೆದಿದೆ. ತಂಡಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಹೆಚ್ಚುವರಿ ಪೊಲೀಸ್‌ ಅಧೀಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ