ಉಡುಪಿ: ಕೊಂಕಣ ರೈಲ್ವೆ ವ್ಯಾಪ್ತಿಯ ಕಾರವಾರ ವಲಯದ ಗೋವಾ ಬಳಿಯಯ ಪೆರ್ನಮ್ನಲ್ಲಿರುವ ಸುರಂಗ ಮಾರ್ಗದ ಗೋಡೆಯ ಒಂದು ಭಾಗ ಗುರುವಾರ ಭಾರೀ ಮಳೆಯಿಂದಾಗಿ ಕುಸಿದಿದೆ. ಮಧುರೆ ಹಾಗೂ ಪೆರ್ನಂ ಮಧ್ಯೆ ಸುರಂಗದ ಐದು ಮೀ. ಎತ್ತರದ ಗೋಡೆ ಕುಸಿದಿದ್ದು ಯಾವುದೇ ಅಪಾಯವಾಗಿಲ್ಲ. ಗೋಡೆ ಕುಸಿದು ರೈಲ್ವೆ ಹಳಿ ಮೇಲೆ ಸುರಿದ ಮಣ್ಣು ತೆರವು ನಡೆಯುತ್ತಿದೆ. ಕುಸಿದ ಗೋಡೆಯ ದುರಸ್ಥಿ ಪ್ರಗತಿಯಲ್ಲಿದೆ. ಮುಂದಿನ ಸೂಚನೆ ತನಕ ಈ ಮಾರ್ಗದಲ್ಲಿ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ.
ಎರ್ನಾಕುಲಂ ನಿಜಾಮುದ್ದೀನ್ ಸೂಪರ್ ಫಾಸ್ಟ್ ಸ್ಪೆಶಲ್ ಎಕ್ಸ್ಪ್ರೆಸ್(02617) ತಿರುವನಂತಪುರ ಸೆಂಟ್ರಲ್ ಲೋಕಮಾನ್ಯ ತಿಲಕ್ ಸ್ಪೆಶಲ್ ಎಕ್ಸ್ಪ್ರೆಸ್(06346) ರೈಲು ಮಡಗಾಂವ್, ಲೋಂಡ ಮೀರಜ್, ಪುಣೆ, ಪನ್ವೇಲ್, ಕಲ್ಯಾಣ್ ಬದಲಿ ಮಾರ್ಗದಲ್ಲಿ ಸಂಚರಿಸಿತು.
ನವದೆಹಲಿ ತಿರುವನಂತಪುರಂ ಸೆಂಟ್ರಲ್ ರಾಜಧಾನಿ ವಿಶೇಷ ಎಕ್ಸ್ಪ್ರೆಸ್(02432), ಹಜರತ್ ನಿಜಾಮುದ್ದೀನ್, ಎರ್ನಾಕುಳಂ ಸೂಪರ್ ಫಾಸ್ಟ್(02618), ಲೋಕಮಾನ್ಯ ತಿಲಕ್, ತಿರುವನಂತಪುರಂ ಸೆಂಟ್ರಲ್ ರೈಲ(06345) ರೈಲನ್ನು ಪನ್ವೆಲ್ ಪುಣೆ, ಮೀರಜ, ಲೋಂಡಾ, ಮಡಗಾಂವ್ ಮೂಲಕ ತೆರಳಲು ವ್ಯವಸ್ಥೆ ಮಾಡಲಾಯಿತು.
ರಾಜ್ಯದಲ್ಲಿ ಮಳೆ ಅಬ್ಬರ: ರೆಡ್ ಅಲರ್ಟ್ ಘೋಷಣೆಯಾದ ಜಿಲ್ಲೆಗಳಲ್ಲಿ ಪರಿಸ್ಥಿತಿ ಹೇಗಿದೆ?
ಗೋವಾದಲ್ಲಿ ಕಳೆದ ಐದು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಕೆಲ ತಗ್ಗು ಪ್ರದೇಶಗಳಲ್ಲಿ ಪ್ರವಾಹದ ಗಂಭೀರ ಪರಿಸ್ಥಿತಿಯಿದೆ. ಪ್ರಯಾಣಿಕರು ಹೆಚ್ಚಿನ ಮಾಹಿತಿಗೆ 022 27587939, 10722 ಸಂಪರ್ಕಿಸಬಹುದು ಎಂದು ಕೊಂಕಣ ರೈಲ್ವೆ ಮಂಗಳೂರು ವಿಭಾಗ ಸಾರ್ವಜನಿಕ ಸಂಪರ್ಕಾಧಿಕಾರಿ ಸುಧಾ ಕೃಷ್ಣಮೂರ್ತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೋಟೇಶ್ವರದಲ್ಲಿ ಹೆಚ್ಚಿದ ಕಡಲ್ಕೊರೆತ, ಅಪಾಯದಂಚಿನಲ್ಲಿ ರಸ್ತೆ, ವಿದ್ಯುತ್ ಲೈನ್ಗಳು..!
ಎರ್ನಾಕುಲಂ ನಿಜಾಮುದ್ದೀನ್ ಸೂಪರ್ ಫಾಸ್ಟ್ ಸ್ಪೆಶಲ್ ಎಕ್ಸ್ಪ್ರೆಸ್(02617) ತಿರುವನಂತಪುರ ಸೆಂಟ್ರಲ್ ಲೋಕಮಾನ್ಯ ತಿಲಕ್ ಸ್ಪೆಶಲ್ ಎಕ್ಸ್ಪ್ರೆಸ್(06346) ರೈಲು ಮಡಗಾಂವ್, ಲೋಂಡ ಮೀರಜ್, ಪುಣೆ, ಪನ್ವೇಲ್, ಕಲ್ಯಾಣ್ ಬದಲಿ ಮಾರ್ಗದಲ್ಲಿ ಸಂಚರಿಸಿತು.
ನವದೆಹಲಿ ತಿರುವನಂತಪುರಂ ಸೆಂಟ್ರಲ್ ರಾಜಧಾನಿ ವಿಶೇಷ ಎಕ್ಸ್ಪ್ರೆಸ್(02432), ಹಜರತ್ ನಿಜಾಮುದ್ದೀನ್, ಎರ್ನಾಕುಳಂ ಸೂಪರ್ ಫಾಸ್ಟ್(02618), ಲೋಕಮಾನ್ಯ ತಿಲಕ್, ತಿರುವನಂತಪುರಂ ಸೆಂಟ್ರಲ್ ರೈಲ(06345) ರೈಲನ್ನು ಪನ್ವೆಲ್ ಪುಣೆ, ಮೀರಜ, ಲೋಂಡಾ, ಮಡಗಾಂವ್ ಮೂಲಕ ತೆರಳಲು ವ್ಯವಸ್ಥೆ ಮಾಡಲಾಯಿತು.
ರಾಜ್ಯದಲ್ಲಿ ಮಳೆ ಅಬ್ಬರ: ರೆಡ್ ಅಲರ್ಟ್ ಘೋಷಣೆಯಾದ ಜಿಲ್ಲೆಗಳಲ್ಲಿ ಪರಿಸ್ಥಿತಿ ಹೇಗಿದೆ?
ಗೋವಾದಲ್ಲಿ ಕಳೆದ ಐದು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಕೆಲ ತಗ್ಗು ಪ್ರದೇಶಗಳಲ್ಲಿ ಪ್ರವಾಹದ ಗಂಭೀರ ಪರಿಸ್ಥಿತಿಯಿದೆ. ಪ್ರಯಾಣಿಕರು ಹೆಚ್ಚಿನ ಮಾಹಿತಿಗೆ 022 27587939, 10722 ಸಂಪರ್ಕಿಸಬಹುದು ಎಂದು ಕೊಂಕಣ ರೈಲ್ವೆ ಮಂಗಳೂರು ವಿಭಾಗ ಸಾರ್ವಜನಿಕ ಸಂಪರ್ಕಾಧಿಕಾರಿ ಸುಧಾ ಕೃಷ್ಣಮೂರ್ತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೋಟೇಶ್ವರದಲ್ಲಿ ಹೆಚ್ಚಿದ ಕಡಲ್ಕೊರೆತ, ಅಪಾಯದಂಚಿನಲ್ಲಿ ರಸ್ತೆ, ವಿದ್ಯುತ್ ಲೈನ್ಗಳು..!