ಆ್ಯಪ್ನಗರ

ಇಂಡಿಯನ್‌ ಸೀನಿಯರ್‌ ಛೇಂಬರ್‌ ರಾಷ್ಟ್ರೀಯ ಸಮ್ಮೇಳನ

ಕೇರಳದ ತ್ರಿಶೂರ್‌ನಲ್ಲಿ ಮಾರ್ಚ್‌ 2 ಮತ್ತು 3ರಂದು ಜರುಗಿದ ಇಂಡಿಯನ್‌ ಸೀನಿಯರ್‌ ಛೇಂಬರ್‌ನ ರಾಷ್ಟ್ರೀಯ ಸಮ್ಮೇಳನ 'ಕೂಡಿಯಟ್ಟಂ'ನಲ್ಲಿ ನವೀನ್‌ ಅಮೀನ್‌ ಶಂಕರಪುರ ನೇತೃತ್ವದ ಇಂಡಿಯನ್‌ ಸೀನಿಯರ್‌ ಛೇಂಬರ್‌- ಉಡುಪಿ ಟೆಂಪಲ್‌ ಸಿಟಿ ಲೀಜನ್‌, ಅತ್ಯುತ್ತಮ ಲೀಜನ್‌ ರಾಷ್ಟ್ರೀಯ ಪ್ರಶಸ್ತಿ ಪಡೆದಿದೆ.

Vijaya Karnataka 13 Mar 2019, 5:00 am
ಕಟಪಾಡಿ: ಕೇರಳದ ತ್ರಿಶೂರ್‌ನಲ್ಲಿ ಮಾರ್ಚ್‌ 2 ಮತ್ತು 3ರಂದು ಜರುಗಿದ ಇಂಡಿಯನ್‌ ಸೀನಿಯರ್‌ ಛೇಂಬರ್‌ನ ರಾಷ್ಟ್ರೀಯ ಸಮ್ಮೇಳನ 'ಕೂಡಿಯಟ್ಟಂ'ನಲ್ಲಿ ನವೀನ್‌ ಅಮೀನ್‌ ಶಂಕರಪುರ ನೇತೃತ್ವದ ಇಂಡಿಯನ್‌ ಸೀನಿಯರ್‌ ಛೇಂಬರ್‌- ಉಡುಪಿ ಟೆಂಪಲ್‌ ಸಿಟಿ ಲೀಜನ್‌, ಅತ್ಯುತ್ತಮ ಲೀಜನ್‌ ರಾಷ್ಟ್ರೀಯ ಪ್ರಶಸ್ತಿ ಪಡೆದಿದೆ.
Vijaya Karnataka Web indian


ಇಂಡಿಯನ್‌ ಸೀನಿಯರ್‌ ಛೇಂಬರ್‌ನ ರಾಷ್ಟ್ರೀಯ ಅಧ್ಯಕ್ಷ ಎಸ್‌ ಶಿವಾನಂದನ್‌ ಪ್ರಶಸ್ತಿ ಪ್ರದಾನ ಮಾಡಿದರು. ಇದರೊಂದಿಗೆ ಅತ್ಯುತ್ತಮ ಪ್ರಾಂತೀಯ ಸಮ್ಮೇಳನ ಆತಿಥ್ಯಕ್ಕಾಗಿ ಪ್ರಶಸ್ತಿ, ಅತ್ಯುತ್ತಮ ರಾಷ್ಟ್ರೀಯ ಉಪಾಧ್ಯಕ್ಷ ರಾಗಿ ಚಿತ್ರಕುಮಾರ್‌, ಅತ್ಯುತ್ತಮ ಕಾರ್ಯದರ್ಶಿಯಾಗಿ ಮಂಜುಳಾ ವಿ.ಪ್ರಸಾದ್‌, ಹಾಗೂ ಕಾರ್ಯಕ್ರಮಗಳಿಗಾಗಿ ವಿಶೇಷ ಪುರಸ್ಕಾರ ಪಡೆದಿದೆ.

ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಆಡಳಿತ ವಿಭಾಗ ರಾಷ್ಟ್ರೀಯ ಅಧಿಕಾರಿ ಅಜಿತ್‌ ಮೆನನ್‌, ರಾಷ್ಟ್ರೀಯ ಕಾರ್ಯದರ್ಶಿ ವಾಸುದೇವನ್‌, ರಾಷ್ಟ್ರೀಯ ಉಪಾಧ್ಯಕ್ಷ ಚಿತ್ರಕುಮಾರ್‌, ಕಾರ್ಯದರ್ಶಿ ಮಂಜುಳಾ ವಿ.ಪ್ರಸಾದ್‌, ಕೋಶಾಧಿಕಾರಿ ಜಗದೀಶ್‌ ಕೆಮ್ಮಣ್ಣು, ಉಪಾಧ್ಯಕ್ಷ ವಿಜಯ ಕುಮಾರ್‌ ಶೆಟ್ಟಿ, ಪ್ರಮೋದ್‌ ಕುಮಾರ್‌, ವಿಷ್ಣುಪ್ರಸಾದ್‌, ನಿರ್ದೇಶಕರಾದ ಅಲ್ವಿನ್‌ ಮಿನೇಜಸ್‌, ಅರುಣ್‌ ಕುಮಾರ್‌, ಸುಧೀರ್‌, ಮನೋಜ್‌, ದಯಾನಂದ್‌, ಶಂಕರ ಪೂಜಾರಿ, ಸಿಲ್ವಿಯಾ ಕ್ಯಾಸ್ತಲಿನೋ, ಪವಿತ್ರ ಶೆಟ್ಟಿ ಹಾಗೂ ಕಾರ್ಕಳ ಸೀನಿಯರ್‌ ಛೇಂಬರ್‌ನ ಗಿರೀಶ್‌ ರಾವ್‌ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ