ಆ್ಯಪ್ನಗರ

ಅಂತರ್ ಜಿಲ್ಲಾ ಮಟ್ಟದ ಚೆಸ್ ಚಾಂಪಿಯನ್‌ಷಿಪ್ ಮಂಗಳೂರಿನ ಶರಣ್ ರಾವ್ ಚಾಂಪಿಯನ್

ಮಣಿಪಾಲದ ಡಾ.ಟಿ.ಎಂ.ಎ. ಪೈ ಸಭಾಂಗಣದಲ್ಲಿ ಉಡುಪಿ ಜಿಲ್ಲಾ ಚೆಸ್‌ ಅಸೋಸಿಯೇಶನ್‌ ಮತ್ತು ಲಯನ್ಸ್‌ ಕ್ಲಬ… ಮಣಿಪಾಲ ಆಶ್ರಯದಲ್ಲಿ ನಡೆದ 15ನೇ ಲಯನ್ಸ್‌ ಕಲ್ಯಾ ದೇವರಾಯ ಸ್ಮರಣಾರ್ಥ ಅಂತರ್‌ ಜಿಲ್ಲಾ ಚೆಸ್‌ ಪಂದ್ಯಕೂಟದ ಮುಕ್ತ ವಿಭಾಗದಲ್ಲಿ ಮಂಗಳೂರಿನ ಶರಣ್‌ ರಾವ್‌ ಪ್ರಥಮ ಸ್ಥಾನ ಗಳಿಸಿ ಚಾಂಪಿಯನ್‌ ಶಿಪ್‌ ಟ್ರೋಫಿಯನ್ನು ತನ್ನದಾಗಿಸಿಕೊಂಡಿದ್ದಾರೆ.

Vijaya Karnataka 27 May 2019, 5:00 am
ಉಡುಪಿ: ಮಣಿಪಾಲದ ಡಾ.ಟಿ.ಎಂ.ಎ. ಪೈ ಸಭಾಂಗಣದಲ್ಲಿ ಉಡುಪಿ ಜಿಲ್ಲಾ ಚೆಸ್‌ ಅಸೋಸಿಯೇಶನ್‌ ಮತ್ತು ಲಯನ್ಸ್‌ ಕ್ಲಬ… ಮಣಿಪಾಲ ಆಶ್ರಯದಲ್ಲಿ ನಡೆದ 15ನೇ ಲಯನ್ಸ್‌ ಕಲ್ಯಾ ದೇವರಾಯ ಸ್ಮರಣಾರ್ಥ ಅಂತರ್‌ ಜಿಲ್ಲಾ ಚೆಸ್‌ ಪಂದ್ಯಕೂಟದ ಮುಕ್ತ ವಿಭಾಗದಲ್ಲಿ ಮಂಗಳೂರಿನ ಶರಣ್‌ ರಾವ್‌ ಪ್ರಥಮ ಸ್ಥಾನ ಗಳಿಸಿ ಚಾಂಪಿಯನ್‌ ಶಿಪ್‌ ಟ್ರೋಫಿಯನ್ನು ತನ್ನದಾಗಿಸಿಕೊಂಡಿದ್ದಾರೆ.
Vijaya Karnataka Web 1


ಶ್ರೀರಾಮ್‌ ಮತ್ತು ಲಕ್ಷಿತ್‌ ಬಿ. ಸಾಲಿಯಾನ್‌ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಗಳಿಸಿದ್ದಾರೆ.

ವಯೋಮಿತಿ 7 ರ ವಿಭಾಗದಲ್ಲಿ ರಿತೇಶ್‌ ಕೆ., ಪ್ರಣೀತ್‌ ಕೆ. ನಾಯ್ಕ…, ರೀಮಾ ರಾವ್‌, 9 ರ ವಿಭಾಗದಲ್ಲಿ ಅರುಶಿ ಸೆವೆರಿನ್‌, ಪ್ರಚೇತ್‌ ಪಿ., ಅನೀಶ್‌ ಎಸ್‌.ಸಿ., 11 ರ ವಿಭಾಗದಲ್ಲಿ ಸಾತ್ವಿತ್‌ ಎ. ಶೆಟ್ಟಿ, ಅಂಕಿತ್‌ ಕೆ.ಎಸ್‌., ಶಶಾಂಕ್‌ ಭಟ್‌ ಪಿ, 13 ರ ವಿಭಾಗದಲ್ಲಿ ಸಮಿತ್‌ ಎ. ಸುವರ್ಣ, ದಯಾಕೃಷ್ಣ ಶೆಟ್ಟಿ, ನಿಖಿಲ್‌ವಿಕ್ರಂ ಕೆ. ಎಸ್‌., 15 ರ ವಿಭಾಗದಲ್ಲಿ ಗಗನ್‌ ಎಂ.ಎಸ್‌., ಶಿರೀಶ್‌ ಜಯಪ್ರಕಾಶ್‌, ಮೃದುಲಾ ಮಸ್ಕರೇನಸ್‌ ಅವರುಗಳು ಪ್ರಥಮ ಮೂರು ಸ್ಥಾನಗಳನ್ನು ಗಳಿಸಿದರು. ಅತ್ಯುತ್ತಮ ಹಿರಿಯ ಆಟಗಾರರಾಗಿ ರಾಮ ಶೇರಿಗಾರ್‌ ಮತ್ತು ಕೃಷ್ಣ ಮೂರ್ತಿ, ಕಿರಿಯ ಆಟಗಾರರಾಗಿ ಅಥರ್ವ ಪಿ.ಶೆಟ್ಟಿ ಮತ್ತು ಆರಾಧ್ಯ ಯು.ಡಿ. ಪ್ರಶಸ್ತಿ ಪಡೆದರು.

ಬಾಲಕಿಯರ ವಿಭಾಗದಲ್ಲಿ ದಿ. ಮಾಯಾ ವಿಜೇಂದ್ರನಾಥ ಶೆಣೈ ಸ್ಮರಣಾರ್ಥ ಪ್ರಶಸ್ತಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಇಶಾ ಶರ್ಮ ಅವರ ಪಾಲಾಯಿತು.

ಪಂದ್ಯಾಟದಲ್ಲಿ 180 ಸ್ಪರ್ದಿಗಳು ಭಾಗವಹಿಸಿದ್ದರು. ಪಂದ್ಯಕೂಟದ ಸಹ ಪ್ರಾಯೋಜಕರಾದ ಸಿಂಡಿಕೇಟ್‌ ಬ್ಯಾಂಕ್‌ ಮಹಾ ಪ್ರಬಂಧಕ ಭಾಸ್ಕರ ಹಂದೆ ಅವರು ಪ್ರಶಸ್ತಿಗಳನ್ನು ವಿತರಿಸಿದರು.

ರೋಟರಿ ಪ್ರಮುಖ ಮಂಜುನಾಥ ಉಪಾಧ್ಯ, ಮಟ್ಟಾರು ರಮೇಶ್‌ ಕಿಣಿ, ಉದ್ಯಮಿ ಬೋಳ ಶ್ರೀಪತಿ ಕಾಮತ್‌, ಉಡುಪಿಯ ಐಎಂಎ ಡಾ. ಗುರುಮೂರ್ತಿ ಭಟ್‌, ಡಾ.ಉಲ್ಲಾಸ ಕಾಮತ್‌, ಡಾ.ಸುರೇಶ ಶೆಣೈ ಉಪಸ್ಥಿತರಿದ್ದರು.

ಡಾ.ಗಣೇಶ್‌ ಪೈ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಚೆಸ್‌ ಅಸೋಸಿಯೇಶನ್‌ ಅಧ್ಯಕ್ಷ ಡಾ.ರಾಜಗೋಪಾಲ್‌ ಶೆಣೈ ಪಂದ್ಯಕೂಟವನ್ನು ಸಂಯೋಜಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ