ಆ್ಯಪ್ನಗರ

82 ಅಡಿ ಆಂಜನೇಯ ವಿಗ್ರಹ ಏರಿದ ಜ್ಯೋತಿರಾಜ್‌

ಚಿತ್ರದುರ್ಗದ ಬಂಡೆ, ಗೋಡೆ, ಎತ್ತರದ ಕಟ್ಟಡಗಳನ್ನು ಕ್ಷಣಮಾತ್ರದಲ್ಲಿ ಏರುವ ಜ್ಯೋತಿರಾಜ್‌ ಯಾನೆ ಕೋತಿರಾಜ್‌(30) ಶನಿವಾರ ಕುಂದಾಪುರ ತಾಲೂಕಿನ ಅತಿ ಎತ್ತರದ ಆಂಜನೇಯ ವಿಗ್ರಹ ಏರುವ ಮೂಲಕ ಬೆರಗು ಮೂಡಿಸಿದರು.

Vijaya Karnataka 20 May 2018, 8:00 am
ಕುಂದಾಪುರ: ಚಿತ್ರದುರ್ಗದ ಬಂಡೆ, ಗೋಡೆ, ಎತ್ತರದ ಕಟ್ಟಡಗಳನ್ನು ಕ್ಷಣಮಾತ್ರದಲ್ಲಿ ಏರುವ ಜ್ಯೋತಿರಾಜ್‌ ಯಾನೆ ಕೋತಿರಾಜ್‌(30) ಶನಿವಾರ ಕುಂದಾಪುರ ತಾಲೂಕಿನ ಅತಿ ಎತ್ತರದ ಆಂಜನೇಯ ವಿಗ್ರಹ ಏರುವ ಮೂಲಕ ಬೆರಗು ಮೂಡಿಸಿದರು.
Vijaya Karnataka Web koti


ಇಲ್ಲಿಗೆ ಸಮೀಪದ ಹಂಗಳೂರು ಪ್ರಸನ್ನ ಆಂಜನೇಯ ದೇವಸ್ಥಾನದ ಪ್ರತಿಷ್ಠಾ ವರ್ಧಂತ್ಯುತ್ಸವದಲ್ಲಿ ಪಾಲ್ಗೊಂಡ ಅವರು, ದೇವಳದ 82 ಅಡಿ ಎತ್ತರದ ಪ್ರಸನ್ನ ಆಂಜನೇಯ ವಿಗ್ರಹವನ್ನು ನಿರಾಯಾಸವಾಗಿ ಏರಿದರು. ಮಧ್ಯಾಹ್ನದ ಏರು ಹೊತ್ತಲ್ಲಿ ವಿಗ್ರಹದ ಹಿಂಬದಿಯಿಂದ ಏರಲಾರಂಭಿಸಿದ ಅವರು ಅರ್ಧ ತಾಸಿನಲ್ಲಿ ತುತ್ತ ತುದಿ ತಲುಪಿ ಕೇಸರಿ ಮತ್ತು ರಾಷ್ಟ್ರಧ್ವಜ ಹಾರಿಸಿ ನಗು ಬೀರಿದರು.

ಕುಂದಾಪುರಕ್ಕೆ 3ನೇ ಬಾರಿ: 2014ರ ಆಗಸ್ಟ್‌ ಮತ್ತು 2017ರ ಮೇ ತಿಂಗಳಲ್ಲಿ ಕುಂದಾಪುರಕ್ಕೆ ಆಗಮಿಸಿದ್ದ ಜ್ಯೋತಿರಾಜ್‌ ಇಲ್ಲಿನ ಶಾಸ್ತ್ರೀವೃತ್ತದ 5 ಅಂತಸ್ತಿನ ಜೆ.ಕೆ. ಟವರ್ಸ್‌ ಏರುವ ಮೂಲಕ ಬೆರಗು ಮೂಡಿಸಿದ್ದರು. ಇದೀಗ 3ನೇ ಬಾರಿಗೆ ಕುಂದಾಪುರಕ್ಕೆ ಆಗಮಿಸಿದ ಜ್ಯೋತಿರಾಜ್‌ ತಾಲೂಕಿನ ಅತಿ ಎತ್ತರದ ಆಂಜನೇಯ ವಿಗ್ರಹ ಏರಿದರು.

ಒಲಿಂಪಿಕ್ಸ್‌ ಗುರಿ: ನನಗೀಗ 30 ವರ್ಷ. ಮೊದಲಿನ ಹುಮ್ಮಸ್ಸು ಇಲ್ಲ. ಆದರೆ ಬಂಡೆ, ಗೋಡೆ ಏರುವಾಗ ಅದಾವುದೋ ಚೈತನ್ಯ ಆವರಿಸಿಕೊಂಡು ಬಿಡುತ್ತದೆ. ಆಂಜನೇಯ ವಿಗ್ರಹ ಏರುವ ಮೂಲಕ ಮನಸ್ಸಿಗೆ ನೆಮ್ಮದಿ ಮೂಡಿದೆ ಎಂದ ಅವರು, ಒಲಿಂಪಿಕ್ಸ್‌ನಲ್ಲಿ ಈ ಸಾಹಸ ಪ್ರದರ್ಶಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ