ಆ್ಯಪ್ನಗರ

ಉಡುಪಿ: ಸಚಿವ ಕೋಟ ನೆರವಿನಿಂದ ಊರು ಸೇರಿದ 31 ಕನ್ನಡಿಗರು

ನಿಪ್ಪಾಣಿಯಲ್ಲಿ ಸಿಲುಕಿದ ಸುಮಾರು 31 ಕನ್ನಡಿಗ ಪ್ರಯಾಣಿಕರು ರಾಜ್ಯ ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೆರವಿನಿಂದ ಗುರುವಾರ ತಮ್ಮ ಊರು ಸೇರಿ ನಿಟ್ಟುಸಿರು ಬಿಟ್ಟಿದ್ದಾರೆ.

Vijaya Karnataka Web 22 May 2020, 4:56 pm
ಉಡುಪಿ : ನಿಪ್ಪಾಣಿಯಲ್ಲಿ ಸಿಲುಕಿದ ಸುಮಾರು 31 ಕನ್ನಡಿಗ ಪ್ರಯಾಣಿಕರು ರಾಜ್ಯ ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೆರವಿನಿಂದ ಗುರುವಾರ ತಮ್ಮ ಊರು ಸೇರಿ ನಿಟ್ಟುಸಿರು ಬಿಟ್ಟಿದ್ದಾರೆ. ಮುಂಬಯಿಯಿಂದ ಬಸ್ಸಿನಲ್ಲಿ ಹೊರಟ 31 ಪ್ರಯಾಣಿಕರು ಕೇವಲ ಮುಂಬಯಿ ಪಾಸನ್ನು ಮಾತ್ರ ಪಡೆದಿದ್ದರು. 4,500 ರೂ. ಪಡೆದ ಬಸ್ಸಿನ ಏಜೆಂಟ್‌ ಇವರೆಲ್ಲರಿಗೆ ಬಸ್‌ ಟಿಕೆಟನ್ನು ಮಾಡಿಕೊಟ್ಟಿದ್ದು ಕರ್ನಾಟಕದ ಪಾಸ್‌ ಇ ಪಾಸ್‌ ಮೂಲಕ ನಿಮ್ಮ ಮೊಬೈಲ್‌ ಗಳಿಗೆ ಬರಲಿರುವುದಾಗಿ ಭರವಸೆ ಕೊಟ್ಟಿದ್ದರು.
Vijaya Karnataka Web kota srinivas poojari


ಆದರೆ ಕರ್ನಾಟಕದ ಗಡಿ ತಲುಪಿದರೂ ಇ ಪಾಸ್‌ ಬರದೇ ಇದ್ದಾಗ ಪ್ರಯಾಣಿಕರು ಕಂಗಾಲಾದರು. ಮುಂಬಯಿಯಿಂದ ಬರಿವ ಕೊರೊನಾ ಸೋಂಕಿತರಿಂದ ಕರ್ನಾಟಕ ನಲುಗಿದ್ದು ಕರ್ನಾಟಕದ ಒಳಗೆ ಮುಂಬಯಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಮುಂಬಯಿಯಿಂದ ತಮ್ಮ ಮನೆ, ಕೆಲಸಗಳನ್ನು ಶಾಶ್ವತವಾಗಿ ಬಿಟ್ಟು ಬಂದಿರುವ ಅನೇಕ ಪ್ರಯಾಣಿಕರು ಅತ್ತ ಮುಂಬಯಿಗೂ ಹೋಗಲಾಗದೆ ಇತ್ತ ಉಡುಪಿಗೂ ಬರಲಾರದೆ ಅಡ ಕತ್ತರಿಯಲ್ಲಿ ಸಿಲುಕಿಕೊಂಡರು. ಬಸ್ಸಿನಲ್ಲಿಮಹಿಳೆಯರು, ವೃದ್ಧರು ಗರ್ಭಿಣಿಯರು, ಮಕ್ಕಳ ಸಹಿತ ಪ್ರಯಾಣಿಕರು ದಾರಿ ಕಾಣದೆ ರಸ್ತೆಯ ಬದಿ ಉಳಿದುಕೊಳ್ಳುವಂತಾಗಿದ್ದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಗಮನ ಸೆಳೆಯಿತು. ಕೂಡಲೇ ಸ್ಪಂದಿಸಿದ ಕೋಟಾ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು, ಸಂಸದೆ ಶೋಭಾ ಕರಂದ್ಲಾಜೆ ಜತೆ ಮಾತನಾಡಿ 31ಕನ್ನಡಿಗರಿಗೆ ಕರ್ನಾಟಕದ ಗಡಿ ಪ್ರವೇಶಿಸಲು ಅನುಕೂಲ ಮಾಡಿಕೊಟ್ಟರು.

ಮಾನವೀಯತೆ ಮೆರೆದ ರೇಷ್ಮಾ ಬಸ್‌ ಮಾಲೀಕ
ನಿಪ್ಪಾಣಿಯಲ್ಲಿಸಿಲುಕಿದ 31 ಕನ್ನಡಿಗರನ್ನು ಕರೆತರುವಲ್ಲಿ ರೇಷ್ಮಾ ಬಸ್ಸಿನ ಮಾಲೀಕ ಮಹಮ್ಮದ್‌ ಮತೀನ್‌ ಮಾನವೀಯತೆ ಮೆರೆದಿದ್ದಾರೆ. ತಮ್ಮ ಸ್ವಂತದ 10,000 ರೂ. ಖರ್ಚು ಮಾಡಿ ಬಸ್ಸಿನಲ್ಲಿರುವ ವೃದ್ಧರು, ಗರ್ಭಿಣಿಯರು, ಮಕ್ಕಳನ್ನು ಉಡುಪಿಗೆ ತಲುಪಿಸುವ ವ್ಯವಸ್ಥೆ ಮಾಡಿದ್ದು ಪ್ರಶಂಸೆಗೆ ಪಾತ್ರವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ