ಆ್ಯಪ್ನಗರ

‘ಕಾರಂತ ಥೀಂ ಪಾರ್ಕ್‌ ಕೋಟ ಪರಿಸರದ ಹೆಮ್ಮೆಯ ಜ್ಞಾನ ಮಂದಿರ’

ಸದಾ ಮಕ್ಕಳ ಚಟುವಟಿಕೆಗೆ ಪ್ರೇರಣೆಯಾಗುವ ಅವರಲ್ಲಿ ಆತ್ಮವಿಶ್ವಾಸ ತುಂಬುವ ಕಾರಂತ ಥೀಮ್‌ ಪಾರ್ಕ್‌ ನಿಜವಾಗಿಯೂ ಸ್ತುತ್ಯಾರ್ಹ. ಸಾಧಕರ ಬದುಕನ್ನು ಅನಾವರಣ ಮಾಡುವ, ನೆನಪುಗಳನ್ನು ಮುಂದಿನ ಜನಾಂಗಕ್ಕೆ ರವಾನಿಸುವ, ಪ್ರತಿಭಾವಂತರನ್ನು ಗೌರವಿಸುವ ಕಾರ್ಯ ಶ್ಲಾಘನೀಯ. ಕಾರಂತ ಥೀಮ್‌ ಪಾರ್ಕ್‌ ಕೋಟ ಪರಿಸರದ ಹೆಮ್ಮೆಯ ಜ್ಞಾನ ಮಂದಿರ ಎಂದು ಶ್ರೀ ಕ್ಷೇತ್ರ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಕೆ.ಅನಂತ ಪದ್ಮನಾಭ್‌ ಐತಾಳ್‌ ಹೇಳಿದರು.

Vijaya Karnataka 17 Jul 2019, 5:00 am
ಕೋಟ: ಸದಾ ಮಕ್ಕಳ ಚಟುವಟಿಕೆಗೆ ಪ್ರೇರಣೆಯಾಗುವ ಅವರಲ್ಲಿ ಆತ್ಮವಿಶ್ವಾಸ ತುಂಬುವ ಕಾರಂತ ಥೀಮ್‌ ಪಾರ್ಕ್‌ ನಿಜವಾಗಿಯೂ ಸ್ತುತ್ಯಾರ್ಹ. ಸಾಧಕರ ಬದುಕನ್ನು ಅನಾವರಣ ಮಾಡುವ, ನೆನಪುಗಳನ್ನು ಮುಂದಿನ ಜನಾಂಗಕ್ಕೆ ರವಾನಿಸುವ, ಪ್ರತಿಭಾವಂತರನ್ನು ಗೌರವಿಸುವ ಕಾರ್ಯ ಶ್ಲಾಘನೀಯ. ಕಾರಂತ ಥೀಮ್‌ ಪಾರ್ಕ್‌ ಕೋಟ ಪರಿಸರದ ಹೆಮ್ಮೆಯ ಜ್ಞಾನ ಮಂದಿರ ಎಂದು ಶ್ರೀ ಕ್ಷೇತ್ರ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಕೆ.ಅನಂತ ಪದ್ಮನಾಭ್‌ ಐತಾಳ್‌ ಹೇಳಿದರು.
Vijaya Karnataka Web karantha


ಕೋಟ ಡಾ.ಶಿವರಾಮ ಕಾರಂತ ಪ್ರತಿಷ್ಠಾನ, ಉಡುಪಿ ಡಾ.ಕಾರಂತ ಟ್ರಸ್ಟ್‌, ಕೋಟತಟ್ಟು ಗ್ರಾಮ ಪಂಚಾಯಿತಿ ವತಿಯಿಂದ ನಡೆದ ತಿಂಗಳ ಸಡಗರ ತೊಳ್ಸಂಬಟ್ಟೆ-2019 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೋಟತಟ್ಟು ಗ್ರಾ. ಪಂ. ಅಧ್ಯಕ್ಷ ರಘು ತಿಂಗಳಾಯ, ಅಂತಾರಾಷ್ಟ್ರೀಯ ಖ್ಯಾತಿಯ ನಿರ್ದೇಶಕ ಜಿ.ಮೂರ್ತಿ, ಮನು ಹಂದಾಡಿ, ನಿವೃತ್ತ ಅಧ್ಯಾಪಕ ರಾಮದೇವ ಐತಾಳ್‌, ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಸಾಂಸ್ಕೃತಿಕ ಚಿಂತಕ ಕಲ್ಪನಾ ಭಾಸ್ಕರ್‌, ಸುಬ್ರಹ್ಮಣ್ಯ ಶೆಟ್ಟಿ, ನಟ ರಘು ಪಾಂಡೇಶ್ವರ್‌, ಕಾರಂತ ಥೀಂ ಪಾರ್ಕ್‌ ಟ್ರಸ್ಟಿ ಸುಬ್ರಾಯ್‌ ಆಚಾರ್‌, ಸುಶೀಲಾ ಸೋಮಶೇಖರ್‌, ಉಪಸ್ಥಿತರಿದ್ದರು.

ಕಾರ್ಯದರ್ಶಿ ನರೇಂದ್ರ ಕುಮಾರ್‌ ಕೋಟ ಸ್ವಾಗತಿಸಿದರು. ಕಾರಂತ ಪ್ರತಿಷ್ಠಾನದ ಟ್ರಸ್ಟಿ ಸತೀಶ್‌ ವಡ್ಡರ್ಸೆ ಕಾರ್ಯಕ್ರಮ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ