ವಿಲಾಸ್ ಕುಮಾರ್ ನಿಟ್ಟೆ
ಬ್ರಿಟಷ್ ಕಾಲದಲ್ಲಿ ನಿರ್ಮಾಣಗೊಂಡ ಕಾರ್ಕಳ ನ್ಯಾಯಾಲಯದ ಕಟ್ಟಡವು ಹೊಸ ರೂಪ ಪಡೆದುಕೊಳ್ಳಲಿದೆ. ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿರುವ ಬೆಳುವಾಯಿ ನಝೀರ್ ಸಾಹೇಬ್ ಅವರ ವಿಶೇಷ ಮುತುವರ್ಜಿಯಿಂದ ನ್ಯಾಯಾಲಯದ ನೂತನ ಕಟ್ಟಡಕ್ಕೆ ರೂಪುರೇಷೆಗಳು ಸಿದ್ಧಗೊಂಡಿವೆ.
ನ್ಯಾಯಾಲಯ ಕಟ್ಟಡಗಳ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಜತೆಗೂಡಿ 15 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದೆ. 3350 ಚದರ ಮೀಟರ್ ವಿಸ್ತಾರವುಳ್ಳ ಈ ಕಟ್ಟಡದಲ್ಲಿ ನೆಲ ಅಂತಸ್ತು ಹಾಗೂ ಮೊದಲ ಅಂತಸ್ತು ನಿರ್ಮಾಣವಾಗಲಿದೆ. ನಾಲ್ಕು ನ್ಯಾಯಾಲಯಗಳು ಕಾರ್ಯನಿರ್ವಹಿಸುವಂಥ ವ್ಯವಸ್ಥೆಯೊಂದಿಗೆ ಸುಸಜ್ಜಿತವಾಗಿ ಕಟ್ಟಡ ತಲೆ ಎತ್ತಲಿದೆ.
ಸರ್ವೆ ನಂಬ್ರ 88/2, ಸರ್ವೇ ನಂಬ್ರ 84/17 ಬಿ 1ರಲ್ಲಿ ಒಟ್ಟು 2.41 ಎಕರೆ ಪ್ರದೇಶವನ್ನು ಈ ನ್ಯಾಯಾಲಯ ಹೊಂದಿದೆ. 1004.04 ಚದರ ಮೀಟರ್ ವಿಸ್ತಾರದಲ್ಲಿ ನ್ಯಾಯಾಲಯದ ಹಳೆ ಕಟ್ಟಡವಿರುತ್ತದೆ. ಇನ್ನು ಕೆಲವೇ ತಿಂಗಳ ಅವಧಿಯಲ್ಲಿ ಆ ಕಟ್ಟಡ ನೆಲಸಮಗೊಳ್ಳಲಿದೆ. ನೂತನ ಕಟ್ಟಡವು 1.65 ಎಕರೆ ಪ್ರದೇಶ ವ್ಯಾಪ್ತಿಯೊಳಗೆ ನಿರ್ಮಾಣಗೊಳ್ಳಲಿದೆ.
ಕಟ್ಟಡ ನಿರ್ಮಾಣದ ಇತಿಹಾಸ...! : ಕೋರ್ಟ್ ಕಟ್ಟಡ(ಡಿಸ್ಟ್ರಿಕ್ಡ್ ಮುನ್ಸಿಫ್ ಆಫೀಸ್):1898, ಮುದ್ದೆ ಮಾಲು ಕಟ್ಟಡ(ಸೇಲ್ಸ್ ಎಂಡ್ ಕ್ರಾಶ್ ಹೌಸ್): 1898, ಎಪಿಪಿ ಕಚೇರಿ(ಟಿಫನ್ ರೂಂ): 1898, ಲ್ಯಾಟ್ರಿನ್ ಕಟ್ಟಡ(ಸಿಬ್ಬಂದಿಗಳಿಗೆ): 1898, ಜೆಎಂಎಫ್ಸಿ ಜಡ್ಜ್ ಕ್ಟಾಟ್ರಸ್: 1978, ಮುನ್ಸಿಫ್ ಕ್ಟಾಟ್ರಸ್: 1978, ಶೌಚಾಲಯ ಕಟ್ಟಡ(ಸಾರ್ವಜನಿಕರಿಗೆ): 1994, ಇ ಕೋರ್ಟ್ ಕಟ್ಟಡ: 2010
ಹೊಸ ಕಟ್ಟಡದಲ್ಲೇನಿದೆ ?: ನಾಲ್ಕು ನ್ಯಾಯಾಲಯಗಳು, ಕಾರಾಗೃಹ, ಭದ್ರತಾ ಕೊಠಡಿ, ಸಹಾಯಕ ಸರಕಾರಿ ಅಭಿಯೋಜಕರ ಕಚೇರಿ, ನ್ಯಾಯಾಧೀಶರ ಕಚೇರಿ, ತಾಯಿ-ಮಗುವಿನ ಕೊಠಡಿ, ಲಿಫ್ಟ್, ಜನರೇಟರ್, ಬೋರ್ವೆಲ್, ಶುದ್ಧ ಕುಡಿಯುವ ನೀರಿನ ಘಟಕ, ರೆಕಾರ್ಡ್ ರೂಂ, ಶೌಚಾಲಯ, ನ್ಯಾಯಾಲಯ ಹೊರಾಂಗಣದಲ್ಲಿ ಡಾಮರೀಕರಣ, ವಾಹನ ನಿಲುಗಡೆ ವ್ಯವಸ್ಥೆ, ಹೂದೋಟ, ವಿಶ್ರಾಂತಿ ಕೊಠಡಿ.
ತಾತ್ಕಾಲಿಕ ವ್ಯವಸ್ಥೆ ಏನು ?: ನೂತನ ಕಟ್ಟಡ ನಿರ್ಮಾಣದ ವೇಳೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯ, ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯ, ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯ ಮತ್ತು ಸರಕಾರಿ ಸಹಾಯಕ್ಕೆ ಅಭಿಯೋಜಕರ ಕಚೇರಿ ಸೇರಿದಂತೆ ಎಲ್ಲಾ ವಿಭಾಗಗಳು Üಗರ ಪೊಲೀಸ್ ಠಾಣೆ ಸಮೀಪದಲ್ಲಿರುವ ತಲಾ 312 ಚದರ ಮೀಟರ್ ವಿಸ್ತಾರವುಳ್ಳ ಮೂರು ನ್ಯಾಯಾಧೀಶರ ವಸತಿ ಗೃಹಕ್ಕೆ ತಾತ್ಕಾಲಿಕವಾಗಿ ವರ್ಗಾವಣೆಗೊಳ್ಳಲಿದೆ. ಪ್ರಸ್ತುತ ಅಲ್ಲಿರುವ ನ್ಯಾಯಾಧೀಶರ ವಸತಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.
ಕಾರ್ಕಳ ನ್ಯಾಯಾಲಯದಿಂದ ಉನ್ನತ ಹಂತಕ್ಕೇರಿದವರು... : 1. ಬೆಳುವಾಯಿ ಅಬ್ದುಲ್ ನಝೀರ್( ಸುಪ್ರೀಂ ಕೋರ್ಟ್ ನ್ಯಾಯಾಧೀಶರು) 2. ಮಂಜುನಾಥ ನಾಯಕ್ ( ಜಿಲ್ಲಾ ನ್ಯಾಯಾಧೀಶರು) ರಿಜಿಸ್ಟರ್ ಬೆಂಗಳೂರು ಹೈಕೋರ್ಟ್ 3. ಲತಾ (ಜಿಲ್ಲಾ ನ್ಯಾಯಾಧೀಶರು) ಬೆಂಗಳೂರು 4. ಕೆ.ಎಸ್. ಹೆಗ್ಡೆ( ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರು) 5. ಸಂತೋಷ್ ಹೆಗ್ಡೆ(ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರು, ನಿವೃತ್ತ ಲೋಕಾಯುಕ್ತರು) 6. ರೋಡಲ್ಫೊ ಪಿರೇರಾ( ನ್ಯಾಯಾಧೀಶರು) 7. ಪದ್ಮಪ್ರಸಾದ್ ಜೈನ್ ನಲ್ಲೂರು(ನ್ಯಾಯಾಧೀಶರು) 8. ಪ್ರಕಾಶ್ ನಾಯಕ್ ಹೆಬ್ರಿ(ನ್ಯಾಯಾಧೀಶರು) 9. ಸಂದೇಶ್ ಪ್ರಭು ಹೆಬ್ರಿ(ನ್ಯಾಯಾಧೀಶರು) 10. ಎಂ.ವೀರಪ್ಪ ಮೊಯಿಲಿ ( ಮಾಜಿ ಮುಖ್ಯಮಂತ್ರಿ)
ಇತಿಹಾಸ ಹೀಗಿದೆ...! : ಹಿರಿಯರ ಅಭಿಪ್ರಾಯದ ಪ್ರಕಾರ ಪ್ರಸ್ತುತ ಕಟ್ಟಡ ಹೊಂದಿರುವ ನ್ಯಾಯಾಲಯ ಕಾಡಿನಿಂದ ಆವೃತವಾಗಿತ್ತು. ಅಲ್ಲಿರುವ ಬೃಹದಾಕಾರದ ಮರಗಳನ್ನೇ ಬಳಸಿ, ಸುಂದರವಾದ ಕಟ್ಟಡ ನಿರ್ಮಾಣ ಮಾಡಲಾಗಿತ್ತು. ಕಟ್ಟಡ ಹಳೆ ಮಾದರಿಯಿಂದ ಕೂಡಿದ್ದರೂ, ಸುಭದ್ರವಾಗಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಆರಂಭದಲ್ಲಿ ಬಾರಕೂರು, ಬಳಿಕ ಮುಲ್ಕಿಯಲ್ಲಿ ನ್ಯಾಯಾಲಯವಿದ್ದು, ಬಳಿಕ ಕಾರ್ಕಳದಲ್ಲಿ ನ್ಯಾಯಾಲಯ ನಿರ್ಮಾಣಗೊಂಡಿತ್ತು. ಸುಮಾರು ನೂರಕ್ಕೂ ಹೆಚ್ಚು ವರ್ಷಗಳ ಇತಿಹಾಸ ಈ ನ್ಯಾಯಾಲಯಕ್ಕಿದೆ. ಈಗಿರುವ ಮಿನಿ ವಿಧಾನಸೌಧದ ಬಳಿ ಮ್ಯಾಜಿಸ್ಪ್ರೇಟ್ ಕೋರ್ಟ್ ಇದ್ದು, ಬಳಿಕ ಅದು ಈಗಿರುವ ಕಟ್ಟಡಕ್ಕೆ ಸ್ಥಳಾಂತರಗೊಂಡಿತ್ತು.
ಬ್ರಿಟಷ್ ಕಾಲದಲ್ಲಿ ನಿರ್ಮಾಣಗೊಂಡ ಕಾರ್ಕಳ ನ್ಯಾಯಾಲಯದ ಕಟ್ಟಡವು ಹೊಸ ರೂಪ ಪಡೆದುಕೊಳ್ಳಲಿದೆ. ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿರುವ ಬೆಳುವಾಯಿ ನಝೀರ್ ಸಾಹೇಬ್ ಅವರ ವಿಶೇಷ ಮುತುವರ್ಜಿಯಿಂದ ನ್ಯಾಯಾಲಯದ ನೂತನ ಕಟ್ಟಡಕ್ಕೆ ರೂಪುರೇಷೆಗಳು ಸಿದ್ಧಗೊಂಡಿವೆ.
ನ್ಯಾಯಾಲಯ ಕಟ್ಟಡಗಳ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಜತೆಗೂಡಿ 15 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದೆ. 3350 ಚದರ ಮೀಟರ್ ವಿಸ್ತಾರವುಳ್ಳ ಈ ಕಟ್ಟಡದಲ್ಲಿ ನೆಲ ಅಂತಸ್ತು ಹಾಗೂ ಮೊದಲ ಅಂತಸ್ತು ನಿರ್ಮಾಣವಾಗಲಿದೆ. ನಾಲ್ಕು ನ್ಯಾಯಾಲಯಗಳು ಕಾರ್ಯನಿರ್ವಹಿಸುವಂಥ ವ್ಯವಸ್ಥೆಯೊಂದಿಗೆ ಸುಸಜ್ಜಿತವಾಗಿ ಕಟ್ಟಡ ತಲೆ ಎತ್ತಲಿದೆ.
ಸರ್ವೆ ನಂಬ್ರ 88/2, ಸರ್ವೇ ನಂಬ್ರ 84/17 ಬಿ 1ರಲ್ಲಿ ಒಟ್ಟು 2.41 ಎಕರೆ ಪ್ರದೇಶವನ್ನು ಈ ನ್ಯಾಯಾಲಯ ಹೊಂದಿದೆ. 1004.04 ಚದರ ಮೀಟರ್ ವಿಸ್ತಾರದಲ್ಲಿ ನ್ಯಾಯಾಲಯದ ಹಳೆ ಕಟ್ಟಡವಿರುತ್ತದೆ. ಇನ್ನು ಕೆಲವೇ ತಿಂಗಳ ಅವಧಿಯಲ್ಲಿ ಆ ಕಟ್ಟಡ ನೆಲಸಮಗೊಳ್ಳಲಿದೆ. ನೂತನ ಕಟ್ಟಡವು 1.65 ಎಕರೆ ಪ್ರದೇಶ ವ್ಯಾಪ್ತಿಯೊಳಗೆ ನಿರ್ಮಾಣಗೊಳ್ಳಲಿದೆ.
ಕಟ್ಟಡ ನಿರ್ಮಾಣದ ಇತಿಹಾಸ...! : ಕೋರ್ಟ್ ಕಟ್ಟಡ(ಡಿಸ್ಟ್ರಿಕ್ಡ್ ಮುನ್ಸಿಫ್ ಆಫೀಸ್):1898, ಮುದ್ದೆ ಮಾಲು ಕಟ್ಟಡ(ಸೇಲ್ಸ್ ಎಂಡ್ ಕ್ರಾಶ್ ಹೌಸ್): 1898, ಎಪಿಪಿ ಕಚೇರಿ(ಟಿಫನ್ ರೂಂ): 1898, ಲ್ಯಾಟ್ರಿನ್ ಕಟ್ಟಡ(ಸಿಬ್ಬಂದಿಗಳಿಗೆ): 1898, ಜೆಎಂಎಫ್ಸಿ ಜಡ್ಜ್ ಕ್ಟಾಟ್ರಸ್: 1978, ಮುನ್ಸಿಫ್ ಕ್ಟಾಟ್ರಸ್: 1978, ಶೌಚಾಲಯ ಕಟ್ಟಡ(ಸಾರ್ವಜನಿಕರಿಗೆ): 1994, ಇ ಕೋರ್ಟ್ ಕಟ್ಟಡ: 2010
ಹೊಸ ಕಟ್ಟಡದಲ್ಲೇನಿದೆ ?: ನಾಲ್ಕು ನ್ಯಾಯಾಲಯಗಳು, ಕಾರಾಗೃಹ, ಭದ್ರತಾ ಕೊಠಡಿ, ಸಹಾಯಕ ಸರಕಾರಿ ಅಭಿಯೋಜಕರ ಕಚೇರಿ, ನ್ಯಾಯಾಧೀಶರ ಕಚೇರಿ, ತಾಯಿ-ಮಗುವಿನ ಕೊಠಡಿ, ಲಿಫ್ಟ್, ಜನರೇಟರ್, ಬೋರ್ವೆಲ್, ಶುದ್ಧ ಕುಡಿಯುವ ನೀರಿನ ಘಟಕ, ರೆಕಾರ್ಡ್ ರೂಂ, ಶೌಚಾಲಯ, ನ್ಯಾಯಾಲಯ ಹೊರಾಂಗಣದಲ್ಲಿ ಡಾಮರೀಕರಣ, ವಾಹನ ನಿಲುಗಡೆ ವ್ಯವಸ್ಥೆ, ಹೂದೋಟ, ವಿಶ್ರಾಂತಿ ಕೊಠಡಿ.
ತಾತ್ಕಾಲಿಕ ವ್ಯವಸ್ಥೆ ಏನು ?: ನೂತನ ಕಟ್ಟಡ ನಿರ್ಮಾಣದ ವೇಳೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯ, ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯ, ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯ ಮತ್ತು ಸರಕಾರಿ ಸಹಾಯಕ್ಕೆ ಅಭಿಯೋಜಕರ ಕಚೇರಿ ಸೇರಿದಂತೆ ಎಲ್ಲಾ ವಿಭಾಗಗಳು Üಗರ ಪೊಲೀಸ್ ಠಾಣೆ ಸಮೀಪದಲ್ಲಿರುವ ತಲಾ 312 ಚದರ ಮೀಟರ್ ವಿಸ್ತಾರವುಳ್ಳ ಮೂರು ನ್ಯಾಯಾಧೀಶರ ವಸತಿ ಗೃಹಕ್ಕೆ ತಾತ್ಕಾಲಿಕವಾಗಿ ವರ್ಗಾವಣೆಗೊಳ್ಳಲಿದೆ. ಪ್ರಸ್ತುತ ಅಲ್ಲಿರುವ ನ್ಯಾಯಾಧೀಶರ ವಸತಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.
ಕಾರ್ಕಳ ನ್ಯಾಯಾಲಯದಿಂದ ಉನ್ನತ ಹಂತಕ್ಕೇರಿದವರು... : 1. ಬೆಳುವಾಯಿ ಅಬ್ದುಲ್ ನಝೀರ್( ಸುಪ್ರೀಂ ಕೋರ್ಟ್ ನ್ಯಾಯಾಧೀಶರು) 2. ಮಂಜುನಾಥ ನಾಯಕ್ ( ಜಿಲ್ಲಾ ನ್ಯಾಯಾಧೀಶರು) ರಿಜಿಸ್ಟರ್ ಬೆಂಗಳೂರು ಹೈಕೋರ್ಟ್ 3. ಲತಾ (ಜಿಲ್ಲಾ ನ್ಯಾಯಾಧೀಶರು) ಬೆಂಗಳೂರು 4. ಕೆ.ಎಸ್. ಹೆಗ್ಡೆ( ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರು) 5. ಸಂತೋಷ್ ಹೆಗ್ಡೆ(ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರು, ನಿವೃತ್ತ ಲೋಕಾಯುಕ್ತರು) 6. ರೋಡಲ್ಫೊ ಪಿರೇರಾ( ನ್ಯಾಯಾಧೀಶರು) 7. ಪದ್ಮಪ್ರಸಾದ್ ಜೈನ್ ನಲ್ಲೂರು(ನ್ಯಾಯಾಧೀಶರು) 8. ಪ್ರಕಾಶ್ ನಾಯಕ್ ಹೆಬ್ರಿ(ನ್ಯಾಯಾಧೀಶರು) 9. ಸಂದೇಶ್ ಪ್ರಭು ಹೆಬ್ರಿ(ನ್ಯಾಯಾಧೀಶರು) 10. ಎಂ.ವೀರಪ್ಪ ಮೊಯಿಲಿ ( ಮಾಜಿ ಮುಖ್ಯಮಂತ್ರಿ)
ಇತಿಹಾಸ ಹೀಗಿದೆ...! : ಹಿರಿಯರ ಅಭಿಪ್ರಾಯದ ಪ್ರಕಾರ ಪ್ರಸ್ತುತ ಕಟ್ಟಡ ಹೊಂದಿರುವ ನ್ಯಾಯಾಲಯ ಕಾಡಿನಿಂದ ಆವೃತವಾಗಿತ್ತು. ಅಲ್ಲಿರುವ ಬೃಹದಾಕಾರದ ಮರಗಳನ್ನೇ ಬಳಸಿ, ಸುಂದರವಾದ ಕಟ್ಟಡ ನಿರ್ಮಾಣ ಮಾಡಲಾಗಿತ್ತು. ಕಟ್ಟಡ ಹಳೆ ಮಾದರಿಯಿಂದ ಕೂಡಿದ್ದರೂ, ಸುಭದ್ರವಾಗಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಆರಂಭದಲ್ಲಿ ಬಾರಕೂರು, ಬಳಿಕ ಮುಲ್ಕಿಯಲ್ಲಿ ನ್ಯಾಯಾಲಯವಿದ್ದು, ಬಳಿಕ ಕಾರ್ಕಳದಲ್ಲಿ ನ್ಯಾಯಾಲಯ ನಿರ್ಮಾಣಗೊಂಡಿತ್ತು. ಸುಮಾರು ನೂರಕ್ಕೂ ಹೆಚ್ಚು ವರ್ಷಗಳ ಇತಿಹಾಸ ಈ ನ್ಯಾಯಾಲಯಕ್ಕಿದೆ. ಈಗಿರುವ ಮಿನಿ ವಿಧಾನಸೌಧದ ಬಳಿ ಮ್ಯಾಜಿಸ್ಪ್ರೇಟ್ ಕೋರ್ಟ್ ಇದ್ದು, ಬಳಿಕ ಅದು ಈಗಿರುವ ಕಟ್ಟಡಕ್ಕೆ ಸ್ಥಳಾಂತರಗೊಂಡಿತ್ತು.