ಆ್ಯಪ್ನಗರ

ಎಲ್ಲ ಕ್ಷೇತ್ರಗಳಲ್ಲೂ ಕಾರ್ಕಳ ಅಭಿವೃದ್ಧಿಯಾಗಬೇಕು: ಸುನಿಲ್‌ ಕುಮಾರ್‌

ಸ್ಥಳೀಯ ತಾ.ಪಂ. ಸಭಾಂಗಣದಲ್ಲಿ ಮುಖ್ಯ ಶಿಕ್ಷ ಕರ ಸಭೆ ಶನಿವಾರ ನಡೆಯಿತು

Vijaya Karnataka 11 Jun 2019, 5:00 am
ಕಾರ್ಕಳ: ಸ್ಥಳೀಯ ತಾ.ಪಂ. ಸಭಾಂಗಣದಲ್ಲಿ ಮುಖ್ಯ ಶಿಕ್ಷ ಕರ ಸಭೆ ಶನಿವಾರ ನಡೆಯಿತು.
Vijaya Karnataka Web KRL-10KV-SBY


ಶಾಸಕ ವಿ.ಸುನಿಲ್‌ ಕುಮಾರ್‌ ಮಾತನಾಡಿ, ಸ್ವರ್ಣ ಕಾರ್ಲ ಯೋಜನೆಯ ಭಾಗವಾಗಿ ಮುಂದಿನ ಶೈಕ್ಷ ಣಿಕ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸುವ ಗುರಿ ಹೊಂದಲಾಗಿದೆ ಎಂದರು.

ಕೇವಲ ರಸ್ತೆ, ಸೇತುವೆ ಅಭಿವೃದ್ಧಿಗೊಳಿಸಿದಲ್ಲಿ ತಾಲೂಕಿನ ಸಮಗ್ರ ಅಭಿವೃದ್ಧಿಯಾಗದು. ಎಲ್ಲ ಕ್ಷೇತ್ರಗಳಲ್ಲೂ ಕಾರ್ಕಳ ಅಭಿವೃದ್ಧಿ ಕಾಣಬೇಕು. ಈ ನಿಟ್ಟಿನಲ್ಲಿ ಸರಕಾರಿ ಇಲಾಖೆಗಳೆಲ್ಲವೂ ಕಾರ್ಯೋನ್ಮುಖವಾಗಬೇಕು. ಯಾವುದೇ ಪಕ್ಷ ದ ಮುಖ್ಯಮಂತ್ರಿಯಾಗಿದ್ದರೂ ಕಾರ್ಕಳದ ಅಭಿವೃದ್ಧಿಗಾಗಿ ನಾನು ಶ್ರಮ ವಹಿಸುತ್ತೇನೆ. 2020ರ ವೇಳೆಗೆ ಎಸ್ಸೆಸ್ಸೆಲ್ಸಿಯಲ್ಲಿ ಕಾರ್ಕಳ ತಾಲೂಕು ನಂ.1 ಆಗಬೇಕು. ಎಸ್ಸೆಸ್ಸೆಲ್ಸಿಯ ಎಲ್ಲ ವಿದ್ಯಾರ್ಥಿಗಳೂ ತೇರ್ಗಡೆಯಾಗಬೇಕು. ಈ ನಿಟ್ಟಿನಲ್ಲಿ ಬಿಇಒ ನೇತೃತ್ವದಲ್ಲಿ ನಾನಾ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಪ್ರತೀ ಮೂರು ತಿಂಗಳಿಗೊಮ್ಮೆ ಮುಖ್ಯ ಶಿಕ್ಷ ಕರ ಸಭೆ ಹಾಗೂ 2 ತಿಂಗಳಿಗೊಮ್ಮೆ ಹೆತ್ತವರ ಸಭೆ ನಡೆಸಲಾಗುವುದು ಎಂದರು.

ಬಿಇಓ ಶಶಿಧರ್‌ ಜಿ.ಎಸ್‌., ಪೆರ್ವಾಜೆ ಶಾಲಾ ಮುಖ್ಯ ಶಿಕ್ಷ ಕಿ ಹರ್ಷಿಣಿ, ಮುಖ್ಯ ಶಿಕ್ಷ ಕರ ಸಂಘದ ಅಧ್ಯಕ್ಷ ಪ್ರಕಾಶ್‌ ರಾವ್‌ ಉಪಸ್ಥಿತರಿದ್ದರು.

ಮಿಷನ್‌ ಹಂಡ್ರೆಡ್‌ ತಾಲೂಕು ನೋಡಲ್‌ ಅಧಿಕಾರಿ, ಬಿಆರ್‌ಸಿ ವೆಂಕಟರಮಣ ಕಲ್ಕೂರು ಕಾರ್ಯಕ್ರಮ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ