ಆ್ಯಪ್ನಗರ

ಕಟಪಾಡಿ ಶ್ರೀವಿಶ್ವನಾಥ ಕ್ಷೇತ್ರ ಹೊರೆಕಾಣಿಕೆ ಮೆರವಣಿಗೆ

ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ವರ್ಷಾವಧಿ ಜಾತ್ರೋತ್ಸವದ ಪೂರ್ವಭಾವಿಯಾಗಿ ಶನಿವಾರ ಏಣಗುಡ್ಡೆ ಶ್ರೀ ಬ್ರಹ್ಮ ಬೈದರ್ಕಳ ಗರೋಡಿಯಿಂದ ಶ್ರೀ ಕ್ಷೇತ್ರದವರೆಗೆ ವೈಭವದ ಶೋಭಾಯಾತ್ರೆಯೊಂದಿಗೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಸಂಪನ್ನಗೊಂಡಿತು.

Vijaya Karnataka 10 Feb 2019, 5:00 am
ಕಟಪಾಡಿ: ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ವರ್ಷಾವಧಿ ಜಾತ್ರೋತ್ಸವದ ಪೂರ್ವಭಾವಿಯಾಗಿ ಶನಿವಾರ ಏಣಗುಡ್ಡೆ ಶ್ರೀ ಬ್ರಹ್ಮ ಬೈದರ್ಕಳ ಗರೋಡಿಯಿಂದ ಶ್ರೀ ಕ್ಷೇತ್ರದವರೆಗೆ ವೈಭವದ ಶೋಭಾಯಾತ್ರೆಯೊಂದಿಗೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಸಂಪನ್ನಗೊಂಡಿತು.
Vijaya Karnataka Web 112


ದಿ. ಕಟಪಾಡಿ ಮದ್ದು ಸುವರ್ಣ ಮತ್ತು ಕಮಲಾ ಎಂ. ಸುವರ್ಣ ದಂಪತಿಯ ಸ್ಮರಣಾರ್ಥ ಅವರ ಪುತ್ರಿ ಸುಜಾತಾ ಹಂಸರಾಜ್‌ ಶ್ರೀ ಅನ್ನಪೂರ್ಣೇಶ್ವರಿ ಗುಡಿಗೆ ಸಮರ್ಪಿಸಲಿರುವ ರಜತ ದ್ವಾರವನ್ನು ಮೆರವಣಿಗೆಯಲ್ಲಿ ತರಲಾಯಿತು.

ಬಳಿಕ ಕ್ಷೇತ್ರದ ತಂತ್ರಿಗಳಾದ ಮರವೂರು ರಾಕೇಶ್‌ ತಂತ್ರಿಯವರ ಮಾರ್ಗದರ್ಶನದಂತೆ ಕ್ಷೇತ್ರದ ಪ್ರಧಾನ ಅರ್ಚಕರಾದ ಶ್ರೀ ದೇವದಾಸ ಶಾಂತಿ ಅವರ ನೇತೃತ್ವದಲ್ಲಿ ಜಾತ್ರೋತ್ಸವದ ಪ್ರಯುಕ್ತ ಪುಣ್ಯಾಹ, ಪ್ರಸಾದ ಶುದ್ಧಿ, ಸಾಮೂಹಿಕ ಪ್ರಾರ್ಥನೆ ನೆರವೇರಿಸಲಾಯಿತು. ಬಳಿಕ ಗುರು ಪೂಜೆ ಜರಗಿತು.

ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ಬಿ.ಎನ್‌. ಶಂಕರ ಪೂಜಾರಿ, ಗೌ. ಪ್ರ. ಕಾರ್ಯದರ್ಶಿ ಯು. ಶಿವಾನಂದ್‌, ಉಪಾಧ್ಯಕ್ಷ ರಾದ ಶ್ರೀಕರ ಅಂಚನ್‌, ಆನಂದ ಮಾಬಿಯಾನ್‌, ಜತೆ ಕಾರ್ಯದರ್ಶಿಗಳಾದ ಎನ್‌. ಜಿ. ಸುಕುಮಾರ್‌ ಅಂಬಾಡಿ, ಪ್ರಮೋದ್‌ ಸುವರ್ಣ , ಕೋಶಾಧಿಕಾರಿ ವೀರೇಶ್‌ ಸುವರ್ಣ , ಜೊತೆ ಕೋಶಾಧಿಕಾರಿ ಆರ್‌. ಜಿ. ಕೋಟ್ಯಾನ್‌, ಸೇವಾದಳದ ದಳಪತಿ ಹರೀಶ್‌ ಕುಂದರ್‌ , ಮಹಿಳಾ ಬಳಗದ ಸಂಚಾಲಕಿ ಶಿಲ್ಪಾ ಜಿ. ಸುವರ್ಣ , ಆಂತರಿಕ ಲೆಕ್ಕ ಪರಿಶೋಧಕ ಆನಂದ್‌ ಜತ್ತನ್‌, ಆಡಳಿತ ಸಮಿತಿಯ ಸದಸ್ಯರಾದ ರಾಕೇಶ್‌ ಕುಂಜೂರು, ಪ್ರತಾಪ್‌ ಕುಮಾರ್‌ ಉದ್ಯಾವರ, ಕೃಷ್ಣ ಸನಿಲ್‌ , ಶೋಭಾ ಎ. ಬಂಗೇರ, ಭಾಸ್ಕರ ಕೋಟ್ಯಾನ್‌ , ಕಾಮ್‌ರಾಜ್‌ ಸುವರ್ಣ , ಸತೀಶ್‌ ಅಂಬಾಡಿ, ಲೋಕೇಶ್‌ ಕುಮಾರ್‌, ಪ್ರಭಾಕರ ಪಾಲನ್‌, ಮಾಜಿ ಗೌರವ ಪ್ರಧಾನ ಕಾರ್ಯದರ್ಶಿ ಹರೀಶ್ಚಂದ್ರ ಅಮೀನ್‌, ಪ್ರಮುಖರಾದ ರತ್ನಾಕರ ಅಂಚನ್‌, ದಯಾನಂದ ಬಂಗೇರ, ಗಂಗಾಧರ ಸುವರ್ಣ, ನವೀನ್‌ ಅಮೀನ್‌ , ರೋಹನ್‌ ಕುಮಾರ್‌ ಕುತ್ಯಾರು, ಗೀತಾಂಜಲಿ ಸುವರ್ಣ, ಕಟಪಾಡಿ ಶಂಕರ ಪೂಜಾರಿ, ಭಾಸ್ಕರ್‌ ಪೂಜಾರಿ ಕೊಕ್ಕರ್ಣೆ, ಮಂಜು ಬಿಲ್ಲವ, ಜಗನ್ನಾಥ್‌ ಕೋಟೆ, ರಜತ ದ್ವಾರದ ಸೇವಾದಾರರಾದ ಸುಜಾತಾ ಹಂಸರಾಜ್‌ ಅವರ ಪರವಾಗಿ ಸಹೋದರಿ ಅಮಿತಾ ಮಹಾಬಲ್‌ ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ