ಆ್ಯಪ್ನಗರ

ಕೇದಾರ್‌ ಶ್ರೀ ಹರಿಹರ ಪುಣ್ಯಕ್ಷೇತ್ರ ಬ್ರಹ್ಮಕಲಶ ಧಾರ್ಮಿಕ ಸಭೆ

ಇಂದು ಪ್ರತಿಯೊಬ್ಬನ ಹೊಟ್ಟೆ ಮತ್ತು ತಲೆಯಲ್ಲಿ ಕಲ್ಮಶ ತುಂಬಿ ಹೋಗಿವೆ. ಆರೋಗ್ಯಪೂರ್ಣ ಜೀವನ ನಡೆಸಲು ಈ ಎರಡೂ ಕಲ್ಮಶಗಳನ್ನು ಕಳೆಯಬೇಕಾದ ಅಗತ್ಯವಿದೆ. ದೇವಾಲಯಗಳು ಮನಸ್ಸಿನ ಕಲ್ಮಶ ಕಳೆಯುವ ಕೇಂದ್ರಗಳಾಗಿವೆ ಎಂದು ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ.ನಿ.ಬಿ.ವಿಜಯ ಬಲ್ಲಾಳ್‌ ಹೇಳಿದರು.

Vijaya Karnataka 28 May 2019, 5:00 am
ಕಟಪಾಡಿ: ಇಂದು ಪ್ರತಿಯೊಬ್ಬನ ಹೊಟ್ಟೆ ಮತ್ತು ತಲೆಯಲ್ಲಿ ಕಲ್ಮಶ ತುಂಬಿ ಹೋಗಿವೆ. ಆರೋಗ್ಯಪೂರ್ಣ ಜೀವನ ನಡೆಸಲು ಈ ಎರಡೂ ಕಲ್ಮಶಗಳನ್ನು ಕಳೆಯಬೇಕಾದ ಅಗತ್ಯವಿದೆ. ದೇವಾಲಯಗಳು ಮನಸ್ಸಿನ ಕಲ್ಮಶ ಕಳೆಯುವ ಕೇಂದ್ರಗಳಾಗಿವೆ ಎಂದು ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ.ನಿ.ಬಿ.ವಿಜಯ ಬಲ್ಲಾಳ್‌ ಹೇಳಿದರು.
Vijaya Karnataka Web kedar


ಜೀಣೋದ್ಧಾರಗೊಂಡಿರುವ ಉದ್ಯಾವರ ಶ್ರೀ ಹರಿಹರ ಪುಣ್ಯ ಕ್ಷೇತ್ರ, ಕೇದಾರ್‌ ಶ್ರೀ ಬ್ರಹ್ಮೇಶ್ವರ ಮಹಾಲಿಂಗೇಶ್ವರ ಶ್ರೀ ಮಹಾವಿಷ್ಣು ದೇವಸ್ಥಾನದ ನೂತನ ಶಿಲಾಮಯ ಗರ್ಭಗುಡಿ ಮತ್ತು ತೀರ್ಥ ಮಂಟಪ ಸಮರ್ಪಣೆ, ಅಷ್ಟಬಂಧ ಸಹಿತ ಬಿಂಬ ಪ್ರತಿಷ್ಠೆ-ಬ್ರಹ್ಮಕಲಶೋತ್ಸವ ರಂಗಪೂಜಾ, ಬಲಿ ಉತ್ಸವ ಕಾರ್ಯಕ್ರಮ ಅಂಗವಾಗಿ ಭಾನುವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಧಾರ್ಮಿಕ ಉಪನ್ಯಾಸ ನೀಡಿದ ಕೇತ್ರದ ತಂತ್ರಿಗಳಾದ ವೇದಮೂರ್ತಿ ಕೆ.ಎಸ್‌.ಕೃಷ್ಣಮೂರ್ತಿ ತಂತ್ರಿ ಮಾತನಾಡಿ, ದೇವಸ್ಥಾನ ಜೀಣೋದ್ಧಾರ ಕಾರ್ಯದಲ್ಲಿ ಭಾಗಿಯಾಗುವ ಅದೃಷ್ಟ ಪೂರ್ವ ಜನ್ಮದ ಸುಕೃತದ ಫಲವಿದ್ದಾಗಷ್ಟೇ ಸಾಧ್ಯ. ಜನ್ಮ ನೀಡಿದ ಜನನಿ ಮತ್ತು ಜನ್ಮಭೂಮಿಯ ಮಣ್ಣಿನ ಋುಣವನ್ನು ತೀರಿಸಿದಾಗಷ್ಟೇ ಇಂತಹ ಸುಯೋಗಗಳು ಪ್ರಾಪ್ತಿಯಾಗುತ್ತವೆ ಎಂದರು.

ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ಮಾತನಾಡಿ, ಹರಿಹರರಿಬ್ಬರೂ ನೆಲೆಯಾಗಿರುವ ಬಹಳ ವಿರಳವಾದ ಈ ಕ್ಷೇತ್ರ ಕೇವಲ ಇಲ್ಲಿಗೆ ಸೀಮಿತವಾಗದೆ ರಾಜ್ಯವ್ಯಾಪಿ ಭಕ್ತರನು ಆಕರ್ಷಿಸುವ ಕ್ಷೇತ್ರವಾಗಿ ಬೆಳೆಯಬೇಕಿದೆ. ಈ ನಿಟ್ಟಿನಲ್ಲಿ ಮುಂದೆಯೂ ಈ ಕ್ಷೇತ್ರ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡಲಿದ್ದೇನೆ ಎಂದರು.

ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರವೀಣ್‌ ಶೆಟ್ಟಿ ಕೊರಂಗ್ರಪಾಡಿ ಅಧ್ಯಕ್ಷ ತೆ ವಹಿಸಿದ್ದರು. ಉದ್ಯಮಿ ಸಮಾಜ ಸೇವಕ ಸುರೇಶ್‌ ಶೆಟ್ಟಿ ಗುರ್ಮೆ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶೇಖರ್‌ ಕೆ. ಕೋಟ್ಯಾನ್‌, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಯು.ವಾದಿರಾಜ ಆಚಾರ್ಯ ಮೇಲ್ಮಠ, ಪ್ರಧಾನ ಕಾರ್ಯದರ್ಶಿ ವಿಜಯಾ ಆಚಾರ್ಯ, ಉದ್ಯಾವರ ಗ್ರಾ.ಪಂ ಅಧ್ಯಕ್ಷೆ ಸುಗಂಧಿ ಶೇಖರ್‌, ಉದ್ಯಮಿಗಳಾದ ವಿಶ್ವನಾಥ ಪಂದಬೆಟ್ಟು, ಮುನಿಯಾಲು ಉದಯ ಕುಮಾರ್‌ ಶೆಟ್ಟಿ, ರಂಗಕರ್ಮಿ ಉದ್ಯಾವರ ನಾಗೇಶ್‌ ಕುಮಾರ್‌ ಉಪಸ್ಥಿತರಿದ್ದರು.

ಈ ಸಂದರ್ಭ ದೇವಸ್ಥಾನ ಶಿಲಾ ಶಿಲ್ಪಿ ಅಶೋಕ್‌ ಕಾರ್ಕಳ ಹಾಗೂ ದಾರು ಶಿಲ್ಪಿ ಶ್ಯಾಮರಾಯ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ವ್ಯವಸ್ಥಾಪನಾ ಸಮಿತಿ ಸದಸ್ಯ ದಿವಾಕರ್‌ ಬೊಳ್ಜೆ ಸ್ವಾಗತಿಸಿದರು. ಕೋಶಾಧಿಕಾರಿ ಸುಧಾಕರ್‌ ಕುಮಾರ್‌ ಪ್ರಸ್ತಾವಿಕ ಮಾತುಗಳನ್ನಾಡಿದರು. ಸುರೇಶ್‌ ಡಿ.ಕೋಟ್ಯಾನ್‌ ವಂದಿಸಿದರು. ಅರ್ಪಿತಾ ಪ್ರಶಾಂತ್‌ ಶೆಟ್ಟಿ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ