ಆ್ಯಪ್ನಗರ

ಕೆರ್ವಾಸೆಯಲ್ಲಿ ವೀರಗಲ್ಲು ಪತ್ತೆ

ಕಾರ್ಕಳ ತಾಲೂಕಿನ ಕೆರ್ವಾಸೆ ಗ್ರಾಮದ ಉರ್ಮಲಕಟ್ಟದಲ್ಲಿ ವಿಜಯನಗರ ಸಾಮ್ರಾಜ್ಯದ ಪ್ರಾರಂಭಿಕ ಸಂಗಮ ಕಾಲದ ಶಾಸನೋಕ್ತ ವೀರಗಲ್ಲು (14-15ನೇ ಶತಮಾನ) ಬ್ರಹ್ಮವಾರ ಕ್ರಾಸ್‌ಲ್ಯಾಂಡ್‌ ಕಾಲೇಜಿನ ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ಉಪನ್ಯಾಸಕ ಶ್ರುತೇಶ್‌ ಆಚಾರ್ಯ ಮೂಡುಬೆಳ್ಳೆ ಹಾಗೂ ಉಡುಪಿಯ ಪ್ರಾಚ್ಯಸಂಚಯ ಸಂಶೋಧನೆ ಕೇಂದ್ರದ ಮುಖ್ಯ ಸಂಶೋಧಕ ಸುಭಾಸ್‌ ನಾಯಕ್‌ ಬಂಟಕಲ್ಲು ಪತ್ತೆ ಮಾಡಿದ್ದಾರೆ.

Vijaya Karnataka 14 Dec 2018, 5:00 am
ಉಡುಪಿ: ಕಾರ್ಕಳ ತಾಲೂಕಿನ ಕೆರ್ವಾಸೆ ಗ್ರಾಮದ ಉರ್ಮಲಕಟ್ಟದಲ್ಲಿ ವಿಜಯನಗರ ಸಾಮ್ರಾಜ್ಯದ ಪ್ರಾರಂಭಿಕ ಸಂಗಮ ಕಾಲದ ಶಾಸನೋಕ್ತ ವೀರಗಲ್ಲು (14-15ನೇ ಶತಮಾನ) ಬ್ರಹ್ಮವಾರ ಕ್ರಾಸ್‌ಲ್ಯಾಂಡ್‌ ಕಾಲೇಜಿನ ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ಉಪನ್ಯಾಸಕ ಶ್ರುತೇಶ್‌ ಆಚಾರ್ಯ ಮೂಡುಬೆಳ್ಳೆ ಹಾಗೂ ಉಡುಪಿಯ ಪ್ರಾಚ್ಯಸಂಚಯ ಸಂಶೋಧನೆ ಕೇಂದ್ರದ ಮುಖ್ಯ ಸಂಶೋಧಕ ಸುಭಾಸ್‌ ನಾಯಕ್‌ ಬಂಟಕಲ್ಲು ಪತ್ತೆ ಮಾಡಿದ್ದಾರೆ.
Vijaya Karnataka Web news/udupi/kevarse
ಕೆರ್ವಾಸೆಯಲ್ಲಿ ವೀರಗಲ್ಲು ಪತ್ತೆ


ಈ ವೀರಗಲ್ಲು ಗ್ರಾನೈಟ್‌ ಕಲ್ಲಿನಿಂದ ಮಾಡಲ್ಪಟ್ಟಿದ್ದು, ಕನ್ನಡ ಲಿಪಿ ಮತ್ತು ಭಾಷೆ ಹೊಂದಿದೆ. ನಾಲ್ಕು ಪಟ್ಟಿಕೆ ಒಳಗೊಂಡಿರುವ ಈ ವೀರಗಲ್ಲಿನ ಮೂರು ಪಟ್ಟಿಕೆಯಲ್ಲಿ ಲಿಪಿಯಿದ್ದು, ಅಕ್ಷ ರಗಳು ಸಂಪೂರ್ಣವಾಗಿ ತೃಟಿತವಾಗಿದ್ದು ಕೊನೆಯ ಪಟ್ಟಿಕೆಯಲ್ಲಿ 'ತಮ್ಮನು ಮಾಡಿಸಿದ ..ವೀರಕಲ್ಲು' ಎಂಬ ಉಲ್ಲೇಖ ಕಂಡುಬಂದಿದೆ.

ವೀರಗಲ್ಲಿನ ಕೆಳಭಾಗದ ಪಟ್ಟಿಕೆಯಲ್ಲಿ ಯುದ್ಧಕ್ಕೆ ಸನ್ನದ್ಧರಾಗಿರುವ ವೀರರ ಕೆತ್ತನೆ ತೋರಿಸಲಾಗಿದ್ದು, ನಂತರದ ಪಟ್ಟಿಕೆಯಲ್ಲಿ ಯುದ್ಧ ಮಾಡುವ ಸಂದರ್ಭ ವೀರನನ್ನು ಇರಿದು ಕೊಲ್ಲುವಂತೆ ಕೆತ್ತನೆ ಮಾಡಲಾಗಿದೆ. 3ನೇ ಹಂತದಲ್ಲಿ ವೀರನನ್ನು ಅಪ್ಸರೆಯರು ಸ್ವರ್ಗಕ್ಕೆ ಕರೆದುಕೊಂಡು ಹೋಗುವ ದೃಶ್ಯ ಹಾಗೂ ಕೊನೆ ಹಂತದಲ್ಲಿ ವಿಷ್ಣುವಿನ ಕೆತ್ತನೆ ಮಾಡಿ ಅದರ ಎಡಭಾಗ ವೀರನು ಕತ್ತಿ ಹಿಡಿದಿರುವಂತೆ ಮತ್ತು ಆತನ ಪಕ್ಕದಲ್ಲಿ ಗರುಡನನ್ನು ತೋರಿಸಲಾಗಿದ್ದು, ಬಲಭಾಗ ಮಂಗಳ ದ್ರವ್ಯ ಹಿಡಿದಿರುವ ಹಾಗೂ ಅರತಿ ಮಾಡುತ್ತಿರುವ ಸ್ತ್ರೀಯರ ಕೆತ್ತನೆ ಮಾಡಲಾಗಿದೆ.

ವೀರಗಲ್ಲಿನ ಮೇಲ್ಭಾಗ ಅಲಂಕಾರಿಕ ಕೀರ್ತಿಮುಖದ ಕೆತ್ತನೆಯಿದೆ. ಈ ವೀರಗಲ್ಲನ್ನು ವೀರನ ತಮ್ಮನು ತನ್ನ ಅಣ್ಣ ಯುದ್ಧದಲ್ಲಿ ಮರಣ ಹೊಂದಿದ ನೆನಪಿಗಾಗಿ ನಿರ್ಮಾಣ ಮಾಡಿ ನೆಡಿಸಿದ ಎಂದು ಅಭಿಪ್ರಾಯ ಪಡಲಾಗಿದೆ. ಈ ನೆಲೆಯಲ್ಲಿ ಕೇವಲ ಶಾಸನೋಕ್ತ ವೀರಗಲ್ಲು ಮಾತ್ರವಲ್ಲದೇ ಪ್ರಾಚೀನ ಕಾಲದ ನಾಗಬ್ರಹ್ಮಸ್ಥಾನ, ಕಿನ್ನರಿ ನಾಗಶಿಲ್ಪಗಳು, ಜೈನ ನಾಗಶಿಲ್ಪಗಳು, ಚರ ನಾಗಶಿಲ್ಪಗಳು ಹಾಗೂ ಮುರಕಲ್ಲಿನಲ್ಲಿ ಮಾಡಿದ ನಾಗಶಿಲ್ಪ ಮತ್ತು ಚಿತ್ರಕೂಟದ ಅವಶೇಷ ಕಂಡುಬಂದಿದೆ. ಹಾಗೆಯೇ ಅರಸು ಕಂಬಳ ಎಂದು ಕರೆಯುವ ದೊಡ್ಡ ಗದ್ದೆ ಕಾಣಬಹುದು. ಈ ನೆಲೆ ಪ್ರಾಚೀನವಾದ ಮಹತ್ವವನ್ನು ಹೊಂದಿದ್ದು ಇಲ್ಲಿ ಹೆಚ್ಚಿನ ಅನ್ವೇ‚ಷಣೆ ಕೈಗೊಂಡಲ್ಲಿ ಇನ್ನೂ ಅನೇಕ ಮಾಹಿತಿಯನ್ನು ಇತಿಹಾಸಕ್ಕೆ ನೀಡಬಹುದು ಎಂಬ ಅಭಿಪ್ರಾಯವನ್ನು ಅವರು ತಿಳಿಸಿದ್ದಾರೆ.

ಈ ಕ್ಷೇತ್ರಕಾರ್ಯಕ್ಕೆ ಪ್ರಾಚ್ಯಸಂಚಯ ಸಂಶೋಧನ ಕೇಂದ್ರ ಉಡುಪಿ ಇದರ ಸಂಸ್ಥಾಪಕ ಅಧ್ಯಕ್ಷ ರಾದ ಎಸ್‌.ಎ ಕೃಷ್ಣಯ್ಯ ಹಾಗೂ ನಿವೃತ್ತ ಶಿಕ್ಷ ಕ ಶ್ರೀಧರ್‌ ಭಟ್‌ ಹಾಗೂ ಸ್ಥಳೀಯರಾದ ಹರೀಶ್‌ ಆಚಾರ್ಯ ಶಿರ್ಲಾಲು, ರಾಜು ಗುಡಿಗಾರ ಮತ್ತು ಸತೀಶ್‌ ಗುಡಿಗಾರ ಸಹಕಾರ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ