ಆ್ಯಪ್ನಗರ

ತಾಯಿಯನ್ನು ನಿಂದಿಸಿದ್ದಕ್ಕೆ ಗುರುಪ್ರಸಾದ್‌ ಭಟ್‌ ಕೊಲೆ: ಬಂಧಿತರು

ಹಣಕಾಸು ವಿಚಾರಕ್ಕೆ ಸಂಬಂಧಿಸಿ ಸ್ನೇಹಿತರ ನಡುವೆ ಮಾತಿಗೆ ಮಾತು ಬೆಳೆದು ಅತಿರೇಕಕ್ಕೆ ತಲುಪಿ, ತಾಯಿಗೆ ಅವಾಚ್ಯ ಶಬ್ದದಿಂದ ನಿಂದಿಸಿದ್ದಕ್ಕೆ ಕೋಪಗೊಂಡ ಸಹೋದರರಿಬ್ಬರು ಸ್ನೇಹಿತರ ಜತೆ ಸೇರಿ ಗುರುಪ್ರಸಾದ್‌ ಭಟ್‌ ಕೊಲೆ ಮಾಡಿದ್ದನ್ನು ಬಂಧಿತರು ಒಪ್ಪಿದ್ದಾರೆ.

Vijaya Karnataka 31 Jul 2018, 7:48 am
ಉಡುಪಿ: ಹಣಕಾಸು ವಿಚಾರಕ್ಕೆ ಸಂಬಂಧಿಸಿ ಸ್ನೇಹಿತರ ನಡುವೆ ಮಾತಿಗೆ ಮಾತು ಬೆಳೆದು ಅತಿರೇಕಕ್ಕೆ ತಲುಪಿ, ತಾಯಿಗೆ ಅವಾಚ್ಯ ಶಬ್ದದಿಂದ ನಿಂದಿಸಿದ್ದಕ್ಕೆ ಕೋಪಗೊಂಡ ಸಹೋದರರಿಬ್ಬರು ಸ್ನೇಹಿತರ ಜತೆ ಸೇರಿ ಗುರುಪ್ರಸಾದ್‌ ಭಟ್‌ ಕೊಲೆ ಮಾಡಿದ್ದನ್ನು ಬಂಧಿತರು ಒಪ್ಪಿದ್ದಾರೆ.
Vijaya Karnataka Web Guruprasad Bhat


ಭಾನುವಾರ ಮಧ್ಯಾಹ್ನ 1.10ಕ್ಕೆ ಮಣಿಪಾಲ ಪೆರಂಪಳ್ಳಿ ರಸ್ತೆಯ ಕಟ್ಟಡವೊಂದರಲ್ಲಿ ರಿಕ್ರಿಯೇಷನ್‌ ಕ್ಲಬ್‌(ಇಸ್ಪೀಟ್‌) ನಡೆಸುತ್ತಿದ್ದ ಗುರುಪ್ರಸಾದ್‌ ಭಟ್‌ ಮಾಡಿದ ಅವಾಚ್ಯ ಶಬ್ದದ ನಿಂದನೆಯೇ ಅವರ ಸಾವಿಗೆ ಪ್ರಮುಖ ಕಾರಣವಾಗಿದೆ. ಗುರುಪ್ರಸಾದ್‌ ಭಟ್‌ ಕೊಲೆ ಆರೋಪಿಗಳೊಂದಿಗೆ ಆರ್ಥಿಕ ವ್ಯವಹಾರ ಇಟ್ಟುಕೊಂಡಿದ್ದು, ರಂಜಿತ್‌ ಪಿಂಟೋ ಶನಿವಾರ ರಾತ್ರಿ ಗುರುಪ್ರಸಾದ್‌ ಭಟ್‌ಗೆ ಫೋನಾಯಿಸಿ ವಿಚಾರಿಸಿದ್ದಾನೆ.

ಈ ಸಂದರ್ಭ ವಾಗ್ವಾದ ನಡೆದಿದ್ದು, ಗುರುಪ್ರಸಾದ್‌ ರಂಜಿತ್‌ ಪಿಂಟೊನ ತಾಯಿಯನ್ನು ಅವಾಚ್ಯವಾಗಿ ನಿಂದಿಸಿದ್ದಾನೆ. ಇದರಿಂದ ಕೋಪಗೊಂಡ ರಂಜಿತ್‌ ತನ್ನ ಸಹೋದರ ಸುಜಿತ್‌ ಪಿಂಟೊ ಹಾಗೂ ಉಳಿದಿಬ್ಬರು ಸ್ನೇಹಿತರ ಜತೆ ಸೇರಿ ಹತ್ಯೆಗೆ ಸ್ಕೆಚ್‌ ರೂಪಿಸಿದ್ದರು.

ಗುರುಪ್ರಸಾದ್‌ ಭಟ್‌ ಮೇಲಿನ ಕೋಪದಲ್ಲಿ ಇಡೀ ರಾತ್ರಿ ಮದ್ಯ ಸೇವಿಸಿದ್ದ ಅವರು ಭಾನುವಾರ ಕ್ಲಬ್‌ನಲ್ಲಿ ಯಾರೂ ಇಲ್ಲದ ಸಮಯ ನೋಡಿ ಹಲ್ಲೆ ಮಾಡಲು ಆಗಮಿಸಿದ್ದರು. ಕುಡಿದ ಅಮಲಿನಲ್ಲಿದ್ದ ಆ ದುಷ್ಕರ್ಮಿಗಳ ತಂಡ ಗುರುಪ್ರಸಾದ್‌ ಭಟ್‌ ಕುತ್ತಿಗೆ ಹಿಂಭಾಗಕ್ಕೆ ಚೂರಿಯಿಂದ ಇರಿದು ಪರಾರಿಯಾಗಿದ್ದರು.

ಬೆದರಿಸಲೆಂದು ಬಂದಿದ್ದರು!
: ಬಂಧಿತ ಆರೋಪಿಗಳು ಗುರುಪ್ರಸಾದ್‌ ಭಟ್‌ ಕೊಲೆ ಮಾಡುವ ಯಾವುದೇ ಉದ್ದೇಶದಿಂದ ಬಂದಿಲ್ಲ. ಭಟ್‌ಗೆ ಬೆದರಿಕೆ ಹಾಕುವ ಸಲುವಾಗಿ ಬಂದಿದ್ದೆವು ಎಂದು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ.

ಸಹೋದರರಾದ ಸುಜಿತ್‌ ಪಿಂಟೋ, ರಂಜಿತ್‌ ಪಿಂಟೊ ವಿರುದ್ಧ ಮಲ್ಪೆ, ಉಡುಪಿ, ಮಣಿಪಾಲ, ಹಿರಿಯಡ್ಕ ಸಹಿತ ನಾನಾ ಠಾಣೆಗಳಲ್ಲಿ ಹಲವು ಪ್ರಕರಣಗಳಿವೆ. ಇವರಿಬ್ಬರನ್ನು ಗೂಂಡಾ ಆ್ಯಕ್ಟ್ನಡಿ ಪ್ರಕರಣ ದಾಖಲಿಸುವಂತೆ ಜಿಲ್ಲಾ ಪೊಲೀಸರು ಶಿಫಾರಸು ಕೂಡ ಮಾಡಿದ್ದರು. ಕಳೆದ ಡಿಸೆಂಬರ್‌ನಲ್ಲಿ ಹಿರಿಯಡ್ಕದಲ್ಲಿ ನಡೆದ ಪ್ರವೀಣ್‌ ಕುಲಾಲ್‌ ಕೊಲೆ ಪ್ರಕರಣದಲ್ಲಿ ಸುಜಿತ್‌ ಪಿಂಟೊ ಭಾಗಿಯಾದ ಆರೋಪ ಹೊಂದಿದ್ದಾನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ