ಆ್ಯಪ್ನಗರ

ಕೊಲ್ಲೂರು ದೇಗುಲ ಲಕ್ಷ್ಮೀಮಂಟಪಕ್ಕೆ ಮಹಿಳೆ ಪ್ರವೇಶ ಚರ್ಚೆಗೆ ಗ್ರಾಸ

ಉಮಾ ದೇಗುಲದ ಗರ್ಭಗುಡಿಯ ಒಳ ಪ್ರಾಕಾರದ ಲಕ್ಷ್ಮೀ ಮಂಟಪ ಪ್ರವೇಶಿಸಿದ ದೃಶ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿರುವಂತೆ ಪರ ವಿರೋಧ ನಿಲುವು ವ್ಯಕ್ತವಾಗಿದೆ. ಪ್ರಕರಣದ ಹಿನ್ನೆಲೆಯಲ್ಲಿ ಕುಂದಾಪುರ ಸಹಾಯಕ ಕಮಿಷನರ್‌ ಟಿ.ಭೂಬಾಲನ್‌ ದೇವಳಕ್ಕೆ ಭೇಟಿ ನೀಡಿ ವಿವರ ಪಡೆದುಕೊಂಡಿದ್ದಾರೆ.

Vijaya Karnataka 18 Oct 2018, 10:42 am
ಕುಂದಾಪುರ: ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ಗರ್ಭಗುಡಿಯ ಒಳಪ್ರಾಕಾರದ ಲಕ್ಷ್ಮೀಮಂಟಪವನ್ನು ದೇವಳದ ಮಾಜಿ ಅಧಿಕಾರಿಯೊಬ್ಬರು ಪ್ರವೇಶಿಸಿದ್ದು ಗೊಂದಲ ಸೃಷ್ಟಿಸಿದೆ.
Vijaya Karnataka Web kollur mookambika temple


ಮಂಗಳವಾರ ಸಂಜೆ 7ರಿಂದ 7.30ರ ನಡುವಿನ ಅವಧಿಯಲ್ಲಿ ಈ ಹಿಂದೆ ದೇವಳದಲ್ಲಿ ಕಾರ್ಯನಿರ್ವಹಣಾಧಿಕಾರಿ ಆಗಿದ್ದ ಉಮಾ ದೇಗುಲದ ಗರ್ಭಗುಡಿಯ ಒಳ ಪ್ರಾಕಾರದ ಲಕ್ಷ್ಮೀ ಮಂಟಪ ಪ್ರವೇಶಿಸಿದ ದೃಶ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿರುವಂತೆ ಪರ ವಿರೋಧ ನಿಲುವು ವ್ಯಕ್ತವಾಗಿದೆ. ಪ್ರಕರಣದ ಹಿನ್ನೆಲೆಯಲ್ಲಿ ಕುಂದಾಪುರ ಸಹಾಯಕ ಕಮಿಷನರ್‌ ಟಿ.ಭೂಬಾಲನ್‌ ದೇವಳಕ್ಕೆ ಭೇಟಿ ನೀಡಿ ವಿವರ ಪಡೆದುಕೊಂಡಿದ್ದಾರೆ.

ಗರ್ಭಗುಡಿಯ ಒಳ ಪ್ರಾಕಾರದ ಲಕ್ಷ್ಮೇಮಂಟಪಕ್ಕೆ ಮಹಿಳೆಯರು ಪ್ರವೇಶಿಸುವಂತಿಲ್ಲ. ಆದರೆ ನವರಾತ್ರಿ ಸಂದರ್ಭ ಅರ್ಚಕರ ಕುಟುಂಬದ ಮಹಿಳೆಯರು ಪ್ರವೇಶಿಸಬಹುದಾಗಿದೆ. ಅರ್ಚಕ ಕುಟುಂಬಕ್ಕೆ ಸೇರದ ಉಮಾ ಅವರು ಬಾಗಿನ ಅರ್ಪಿಸಲು ಲಕ್ಷ್ಮೇಮಂಟಪ ಪ್ರವೇಶಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ದೇವಳದ ಸಿಸಿ ಟಿವಿ ಕ್ಯಾಮರಾದಲ್ಲಿ ಮೂಡಿಬಂದ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅಪೊ್ಲೕಡ್‌ ಮಾಡಿರುವುದರ ಹಿಂದಿನ ಉದ್ದೇಶದ ಬಗ್ಗೆ ತನಿಖೆ ನಡೆಯುತ್ತಿದೆ.

ಸೋಶಿಯಲ್‌ ಮೀಡಿಯಾದಿಂದಲೇ ಈ ವಿಷಯ ಗಮನಕ್ಕೆ ಬಂದಿದೆ. ಪ್ರಕರಣದ ಪೂರ್ಣ ಮಾಹಿತಿ ಇಲ್ಲ. ವಿಚಾರಣೆ ನಡೆಯುತ್ತಿದೆ.
- ಕೃಷ್ಣಮೂರ್ತಿ ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ.

ಈ ಹಿಂದೆ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿರುವ ಉಮಾ ಅವರು ಮಂಗಳವಾರ ಸಂಜೆ ಸುವಾಸಿನಿ ಪೂಜೆ ವೇಳೆ ದೇವಳದ ಗರ್ಭಗುಡಿಯ ಒಳ ಪ್ರಾಕಾರದ ಲಕ್ಷ್ಮೀಮಂಟಪ ಪ್ರವೇಶಿಸಿದ್ದು ಸರಿಯಲ್ಲ. ಈ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ.
- ಹರೀಶ್‌ಕುಮಾರ ಶೆಟ್ಟಿ ಅಧ್ಯಕ್ಷ ರು ದೇವಳದ ವ್ಯವಸ್ಥಾಪನಾ ಸಮಿತಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ