ಆ್ಯಪ್ನಗರ

ಕೋಟ ಡಬ್ಬಲ್‌ ಮಡರ್‌: ವಿದ್ಯಾರ್ಥಿ ಸಹಿತ ಮತ್ತೆ ಐವರ ಬಂಧನ

ಕೋಟ ಡಬ್ಬಲ್‌ ಮರ್ಡರ್‌ ಪ್ರಕರಣಕ್ಕೆ ಸಂಬಂಧಿಸಿ ವಿದ್ಯಾರ್ಥಿ ಸಹಿತ ಇನ್ನೂ ಐದು ಮಂದಿಯನ್ನು ಪೊಲೀಸರು ಸೋಮವಾರ ರಾತ್ರಿ ಬಂಧಿಸಿದ್ದಾರೆ.

Vijaya Karnataka Web 13 Feb 2019, 5:00 am
ಉಡುಪಿ: ಕೋಟ ಡಬ್ಬಲ್‌ ಮರ್ಡರ್‌ ಪ್ರಕರಣಕ್ಕೆ ಸಂಬಂಧಿಸಿ ವಿದ್ಯಾರ್ಥಿ ಸಹಿತ ಇನ್ನೂ ಐದು ಮಂದಿಯನ್ನು ಪೊಲೀಸರು ಸೋಮವಾರ ರಾತ್ರಿ ಬಂಧಿಸಿದ್ದಾರೆ.
Vijaya Karnataka Web kota dabble madder five others arrested again with student
ಕೋಟ ಡಬ್ಬಲ್‌ ಮಡರ್‌: ವಿದ್ಯಾರ್ಥಿ ಸಹಿತ ಮತ್ತೆ ಐವರ ಬಂಧನ


ಕೊಲೆಯಲ್ಲಿ ಭಾಗಿಯಾದ ಅಭಿಷೇಕ್‌(23), ಆರೋಪಿಗಳಿಗೆ ನೆರವಾದ ಸಂತೋಷ್‌ ಕುಂದರ್‌(26), ನಾಗರಾಜ್‌(44), ಪ್ರಣವ್‌ ರಾವ್‌(20), ಹಾಗೂ ಶಂಕರ ಮೊಗವೀರ(41) ಬಂಧಿತರು.

ನ್ಯಾಯಾಲಯವು ಆರೋಪಿಗಳಿಗೆ ಫೆ. 15ರ ತನಕ ನ್ಯಾಯಾಂಗ ಬಂಧನ ವಿಧಿಸಿದೆ. ಜಿ. ಪಂ. ಬಿಜೆಪಿ ಸದಸ್ಯ ರಾಘವೇಂದ್ರ ಕಾಂಚನ್‌, ಇಬ್ಬರು ಡಿಎಆರ್‌ ಪೊಲೀಸರ ಸಹಿತ ಬಂಧಿತರ ಸಂಖ್ಯೆ ಒಟ್ಟು 13ಕ್ಕೇರಿದೆ.

ಕೋಟದ ಮಣೂರಿನ ಚಿಕ್ಕನ್‌ಕೆರೆಯಲ್ಲಿ ಜ. 26ರಂದು ಭರತ್‌ ಕುಮಾರ್‌ ಮತ್ತು ಯತೀಶ್‌ ಕೊಲೆಯು ಶೌಚಾಲಯ ಪಿಟ್‌ ಜಾಗ ವಿವಾದಕ್ಕೆ ಸಂಬಂಧಿಸಿ ನಡೆದಿದ್ದು ಹಣಕಾಸು, ಬಡ್ಡಿ ವ್ಯವಹಾರವೂ ಇದರ ಹಿಂದಿದೆ.

ಆರೋಪಿಗಳ ವಿವರ: ಅಭಿಷೇಕ್‌ ಉಡುಪಿ ಸಮೀಪದ ಪುತ್ತೂರು ಗ್ರಾಮದ ನಿವಾಸಿಯಾಗಿದ್ದು ಕೊಲೆ ಪ್ರಕರಣದಲ್ಲಿ ನೇರ ಭಾಗಿಯಾದ ಆರೋಪ ಹೊತ್ತಿದ್ದಾನೆ. ಪೈಂಟಿಂಗ್‌, ಬಡ್ಡಿ ವ್ಯವಹಾರದಲ್ಲಿ ತೊಡಗಿದ್ದಾನೆ.

ಆರೋಪಿಗಳಿಗೆ ನೆರವಾದ ಸಂತೋಷ್‌ ಕುಂದರ್‌ ಬಾರಕೂರು ಹನೆಹಳ್ಳಿಯ ಉದ್ದಾಲ್‌ ಗುಡ್ಡೆಯವನಾಗಿದ್ದು ಚಾಲಕ ವೃತ್ತಿಯಲ್ಲಿ ತೊಡಗಿದ್ದು ಆರೋಪಿಗಳಿಗೆ ತಪ್ಪಿಸಿಕೊಳ್ಳಲು ನೆರವಾಗಿದ್ದಾನೆ. ನಾಗರಾಜ ಯಾನೆ ರೊಟ್ಟಿ ನಾಗರಾಜ್‌ ವಾರಂಬಳ್ಳಿ ಗ್ರಾಮದ ದೂಪದಕಟ್ಟೆ ನಿವಾಸಿ. ಪೇತ್ರಿಯಲ್ಲಿ ರೊಟ್ಟಿ ಫ್ಯಾಕ್ಟರಿ ನಡೆಸುತ್ತಿದ್ದು ಆರೋಪಿಗಳಿಗೆ ಆಶ್ರಯ ನೀಡಿದ ಆರೋಪ ಹೊತ್ತಿದ್ದಾನೆ. ಪ್ರಣವ್‌ ರಾವ್‌ ಶಿವಮೊಗ್ಗದ ಭದ್ರಾವತಿ ಮೂಲದವನಾಗಿದ್ದು ಪೆಜಮಂಗೂರಿನ ಬೆನಗಲ್‌ನಿಂದ ಕಾಲೇಜಿಗೆ ತೆರಳಿ ಅಂತಿಮ ಬಿ.ಕಾಂ. ಓದುತ್ತಿದ್ದಾನೆ. ಆರೋಪಿಗಳಿಗೆ ಹಣ, ಮೊಬೈಲ್‌ ನೀಡಿದ ಆರೋಪ ಈತನ ಮೇಲಿದೆ. ಶಂಕರ ಮೊಗವೀರ ಅಂಜಾರು ಗ್ರಾಮದ ನಿವಾಸಿಯಾಗಿದ್ದು ಕುಂದಾಪುರದ ಶಂಕರನಾರಾಯಣ ಗ್ರಾಮದಲ್ಲಿ ಆಟೋರಿಕ್ಷಾ ಓಡಿಸುತ್ತಿದ್ದ ಈತ ಆರೋಪಿಗಳಿಗೆ ಆಶ್ರಯ ನೀಡಿದ ಆರೋಪ ಎದುರಿಸುತ್ತಿದ್ದಾನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ