ಆ್ಯಪ್ನಗರ

ಕೋಟ: ತಿಂಗಳಲ್ಲಿ ಒಂದು ಅನುಮಾನಾಸ್ಪದ, ಮತ್ತೆರಡು ಕೊಲೆ

ಕೋಟ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದೆ ಎನ್ನುವ ಆರೋಪ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಕೇಳಿಬರುತ್ತಿವೆ. ಕೋಟ ಠಾಣೆ ವ್ಯಾಪ್ತಿಯಲ್ಲಿ ತಿಂಗಳ ಅವಧಿಯಲ್ಲಿ ಒಂದು ಅನುಮಾನಾಸ್ಪದ ಸಾವು, ಮತ್ತೆರಡು ಕೊಲೆ ನಡೆದಿದೆ.

Vijaya Karnataka 30 Jan 2019, 5:00 am
ಕೋಟ: ಕೋಟ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದೆ ಎನ್ನುವ ಆರೋಪ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಕೇಳಿಬರುತ್ತಿವೆ. ಕೋಟ ಠಾಣೆ ವ್ಯಾಪ್ತಿಯಲ್ಲಿ ತಿಂಗಳ ಅವಧಿಯಲ್ಲಿ ಒಂದು ಅನುಮಾನಾಸ್ಪದ ಸಾವು, ಮತ್ತೆರಡು ಕೊಲೆ ನಡೆದಿದೆ.
Vijaya Karnataka Web kota murder
ಕೋಟ: ತಿಂಗಳಲ್ಲಿ ಒಂದು ಅನುಮಾನಾಸ್ಪದ, ಮತ್ತೆರಡು ಕೊಲೆ


ಸಾಸ್ತಾನ ಬಸ್‌ ನಿಲ್ದಾಣದ ಸಮೀಪದ ನಿರ್ಮಾಣ ಹಂತದಲ್ಲಿರುವ ಕಟ್ಟಡವೊಂದರ ಮಹಡಿಯಲ್ಲಿ ಯುವಕನೊಬ್ಬನ ಶವ ಬೆಂಚಿನ ಮೇಲೆ ಮಲಗಿದ ಸ್ಥಿತಿಯಲ್ಲಿ ಡಿ.26ರ ತಡರಾತ್ರಿ ನಡೆದಿದ್ದು, ಡಿ.27ರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿತ್ತು. ಜ.26ರ ರಾತ್ರಿ ಶೌಚಾಲಯದ ಪಿಟ್‌ ನಿರ್ಮಾಣದ ವಿಚಾರದಲ್ಲಿ ಕೋಟ ಮಣೂರಿನ ಚಿಕ್ಕನಕೆರೆ ಸಮೀಪ ಇಬ್ಬರು ಅಮಾಯಕರು ಬಲಿಯಾಗಿದ್ದಾರೆ.

ಡಿ.26ರಂದು ಸಾಸ್ತಾನ ಬಸ್‌ ನಿಲ್ದಾಣದ ಸಮೀಪದ ನಿರ್ಮಾಣ ಹಂತದಲ್ಲಿರುವ ಕಟ್ಟಡವೊಂದರ ಮಹಡಿಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಯುವಕ ಮಾಬುಕಳ ಸಮೀಪದ ಧೂಳಂಗಡಿ ಶಾಲೆಯ ಹಿಂಭಾಗದ ರಸ್ತೆಯ ಬೊಬ್ಬರ್ಯನಕೆರೆ ಸಮೀಪದ ನಿವಾಸಿ ದಿ. ಕೃಷ್ಣ ಮರಕಾಲರ ಪುತ್ರ ಹರೀಶ್‌ ಕುಂದರ್‌ ಎಂದು ಗುರುತಿಸಲಾಗಿದೆ. ಆದರೆ ಇಲ್ಲಿಯವರೆಗೆ ಈ ಪ್ರಕರಣ ಏನಾಯಿತು ಎಂದು ಕಂಡು ಹಿಡಿಯಲು ಪೊಲೀಸ್‌ ಇಲಾಖೆಗೆ ಸಾಧ್ಯವಾಗಿಲ್ಲ ಎನ್ನುತ್ತಾರೆ ಸಾರ್ವಜನಿಕರು.

ಜ.26ರಂದು ತಡರಾತ್ರಿ ಬ್ರಹ್ಮಾವರ ತಾಲೂಕಿನ ಕೋಟ ಸಮೀಪದ ಮಣೂರು ಚಿಕ್ಕನಕೆರೆ ಬಳಿ ತಲವಾರು ದಾಳಿಯಲ್ಲಿ ಕಾರ್ತಟ್ಟು ಸಮೀಪದ ಚಿತ್ರಪಾಡಿ ನಿವಾಸಿ ಯತೀಶ್‌ ಕಾಂಚನ್‌ (26), ಕೋಟ ಬಾರಿಕೆರೆ ನಿವಾಸಿ ಭರತ್‌ ಶ್ರೀಯಾನ್‌ (25) ಹತ್ಯೆಯಾಗಿದ್ದಾರೆ. ಘಟನೆಯಿಂದ ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ.

ಹಲವು ವರ್ಷಗಳ ಹಿಂದೆ ಸಾಲಿಗ್ರಾಮ ಸಮೀಪದ ಪಾರಂಪಳ್ಳಿಯಲ್ಲಿ ನಡೆದ ದಂಪತಿ ಕೊಲೆ ಪ್ರಕರಣ ಸಹಿತ ಕೋಟ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣಗಳನ್ನು ವ್ಯವಸ್ಥಿತವಾಗಿ ತನಿಖೆ ನಡೆಸಬೇಕೇಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕಳೆದ ತಿಂಗಳು ಸಾಸ್ತಾನದಲ್ಲಿ ನಡೆದ ಯುವಕನ ಅನುಮಾನಾಸ್ಪದ ಸಾವು, ಜತೆಗೆ ಕೋಟ ಸಮೀಪದ ಮಣೂರು ಚಿಕ್ಕನಕೆರೆ ಬಳಿ ಶನಿವಾರ ತಡರಾತ್ರಿ ತಲವಾರು ದಾಳಿಯಲ್ಲಿ ಕಾರ್ತಟ್ಟು ಸಮೀಪದ ಚಿತ್ರಪಾಡಿ ನಿವಾಸಿ ಯತೀಶ್‌ ಕಾಂಚನ್‌, ಕೋಟ ಬಾರಿಕೆರೆ ನಿವಾಸಿ ಭರತ್‌ ಶ್ರೀಯಾನ್‌ ಬರ್ಬರ ಹತ್ಯೆ ಪ್ರಕರಣವನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ತನಿಖೆ ಚುರುಕುಗೊಳಿಸಲಾಗಿದೆ. -ಲಕ್ಷ ್ಮಣ ನಿಂಬರ್ಗಿ, ಎಸ್ಪಿ, ಉಡುಪಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ