ಕುಂದಾಪುರ: ಸಂಭ್ರಮದ ಹೋಳಿ ಮೆರವಣಿಗೆ
ಕೊಂಕಣಿ ಖಾರ್ವಿ ಸಮುದಾಯ ಬಾಂಧವರ ಹೋಳಿ ಮೆರವಣಿಗೆ ಶುಕ್ರವಾರ ಸಂಜೆ ನಡೆಯಿತು.
Vijaya Karnataka 23 Mar 2019, 5:00 am
ಕುಂದಾಪುರ: ಇಲ್ಲಿನ ಕೊಂಕಣಿ ಖಾರ್ವಿ ಸಮುದಾಯ ಬಾಂಧವರ ಹೋಳಿ ಮೆರವಣಿಗೆ ಶುಕ್ರವಾರ ಸಂಜೆ ನಡೆಯಿತು.
ಯುವಜನರು, ಹಿರಿಯರು, ಮಕ್ಕಳು ಮೆರವಣಿಗೆಯಲ್ಲಿ ಪಾಲ್ಗೊಂಡು ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮಿಸಿದರು. ಹೋಳಿಹಬ್ಬದ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಎಫ್ಎಸ್ಎಲ್ ಇಂಡಿಯಾ ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯ ವಿದೇಶಿ ಸ್ವಯಂಸೇವಕಿಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಆಕರ್ಷಕ ವಾದ್ಯಗಳೊಂದಿಗೆ ಸಾಗಿದ ಮೆರವಣಿಗೆಯಿಂದಾಗಿ ಕುಂದಾಪುರ ನಗರ ನಾನಾ ಬಣ್ಣಗಳಲ್ಲಿ ಮಿಂದೆದ್ದಿತು.
ಯುವಜನರು, ಹಿರಿಯರು, ಮಕ್ಕಳು ಮೆರವಣಿಗೆಯಲ್ಲಿ ಪಾಲ್ಗೊಂಡು ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮಿಸಿದರು. ಹೋಳಿಹಬ್ಬದ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಎಫ್ಎಸ್ಎಲ್ ಇಂಡಿಯಾ ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯ ವಿದೇಶಿ ಸ್ವಯಂಸೇವಕಿಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಆಕರ್ಷಕ ವಾದ್ಯಗಳೊಂದಿಗೆ ಸಾಗಿದ ಮೆರವಣಿಗೆಯಿಂದಾಗಿ ಕುಂದಾಪುರ ನಗರ ನಾನಾ ಬಣ್ಣಗಳಲ್ಲಿ ಮಿಂದೆದ್ದಿತು.