ಆ್ಯಪ್ನಗರ

ಕುರ್ಕಾಲು ಹೊಳೆಯಲ್ಲಿ ದೈವದ ಕಂಚಿನ ಮುಖ ಪತ್ತೆ

ಮಣಿಪುರ ಪಾಪನಾಶಿನಿ ನದಿಯಲ್ಲಿ ಶುಕ್ರವಾರ ಬೆಳಗ್ಗೆ ಪಂಜುರ್ಲಿ ದೈವದ ಕಂಚಿನ ಮುಖವಾಡ ಸಹಿತ ದೈವಾರಾಧನೆಯಲ್ಲಿ ಬಳಸುವ ನಾನಾ ಸೊತ್ತುಗಳು ಪತ್ತೆಯಾಗಿವೆ.

Vijaya Karnataka 15 Dec 2018, 5:00 am
ಕಟಪಾಡಿ: ಮಣಿಪುರ ಪಾಪನಾಶಿನಿ ನದಿಯಲ್ಲಿ ಶುಕ್ರವಾರ ಬೆಳಗ್ಗೆ ಪಂಜುರ್ಲಿ ದೈವದ ಕಂಚಿನ ಮುಖವಾಡ ಸಹಿತ ದೈವಾರಾಧನೆಯಲ್ಲಿ ಬಳಸುವ ನಾನಾ ಸೊತ್ತುಗಳು ಪತ್ತೆಯಾಗಿವೆ.
Vijaya Karnataka Web 5


ಪಂಜುರ್ಲಿ ದೈವದ ಕಂಚಿನ ಮುಖವಾಡ, ಕಬ್ಬಿಣದ ಖಡ್ಸಲೆ, ಕಂಚಿನ ದೀಪ, ಆನೆ ಮೂರ್ತಿ, ಕಲಶ, 2 ನೀರಿನ ಕೂಚಿ ಮತ್ತಿತರ ಸೊತ್ತುಗಳು ಪತ್ತೆಯಾಗಿರುವ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಕಟಪಾಡಿ ಉಪ ಠಾಣೆಯ ಠಾಣಾಧಿಕಾರಿ ಎಎಸ್‌ಐ ಹರೀಶ್‌ ಅವರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಸೊತ್ತುಗಳನ್ನು ವಶಕ್ಕೆ ತೆಗೆದುಕೊಂಡು ಕಾಪು ಠಾಣೆಗೆ ರವಾನಿಸಿದ್ದಾರೆ. ದೈವದ ಹಳೆಯ ಸೊತ್ತುಗಳನ್ನು ನೀರಿನಲ್ಲಿ ವಿಸರ್ಜಿಸಿರಬಹುದು ಅಥವಾ ಇವೆಲ್ಲವುಗಳನ್ನು ಕಳವು ಮಾಡಿ ಬೆಲೆ ಬಾಳುವುದಿಲ್ಲ ಎಂದು ನದಿಗೆ ಎಸೆದು ಹೋಗಿರುವ ಸಾಧ್ಯತೆ ಇರುವ ಬಗ್ಗೆಯೂ ಅಂದಾಜಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ