ಆ್ಯಪ್ನಗರ

ಕುತ್ಪಾಡಿ ಎಸ್‌ಡಿಎಂ: ರಾಷ್ಟ್ರೀಯ ಸಮ್ಮೇಳನ ಉದ್ಘಾಟನೆ

ಕುತ್ಪಾಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಸ್ಮಾರಕ ಭವನದಲ್ಲಿರುವ ಭಾವಪ್ರಕಾಶ ಸಭಾಂಗಣದಲ್ಲಿ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಜಯಂತಿಯಂದು ಅವರ ಸಂಸ್ಮರಣಾರ್ಥವಾಗಿ ಆಯುರ್ವೇದದ ವಿಶೇಷ ಚಿಕಿತ್ಸಾ ಸೂತ್ರಗಳಾದ ರಸಾಯನ ಹಾಗೂ ವಾಜೀಕರಣಗಳ ಕುರಿತ ವಿಚಾರಮಂಥನಕ್ಕಾಗಿ ಯೂಜಿಕೊನ್‌ 2019 ರಾಷ್ಟ್ರೀಯ ಸಮ್ಮೇಳನ ಭಾನುವಾರ ನಡೆಯಿತು.

Vijaya Karnataka 25 Feb 2019, 5:00 am
ಉಡುಪಿ: ಕುತ್ಪಾಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಸ್ಮಾರಕ ಭವನದಲ್ಲಿರುವ ಭಾವಪ್ರಕಾಶ ಸಭಾಂಗಣದಲ್ಲಿ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಜಯಂತಿಯಂದು ಅವರ ಸಂಸ್ಮರಣಾರ್ಥವಾಗಿ ಆಯುರ್ವೇದದ ವಿಶೇಷ ಚಿಕಿತ್ಸಾ ಸೂತ್ರಗಳಾದ ರಸಾಯನ ಹಾಗೂ ವಾಜೀಕರಣಗಳ ಕುರಿತ ವಿಚಾರಮಂಥನಕ್ಕಾಗಿ ಯೂಜಿಕೊನ್‌ 2019 ರಾಷ್ಟ್ರೀಯ ಸಮ್ಮೇಳನ ಭಾನುವಾರ ನಡೆಯಿತು.
Vijaya Karnataka Web UDP-24aa SDM


ಬೆಳಗಾಂ ಬಿ.ಎಂ. ಕಂಕನವಾಡಿ ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಬಿ.ಎಸ್‌. ಪ್ರಸಾದ್‌ ಔಷಧ ಮತ್ತು ಪುಸ್ತಕಗಳ ಮಳಿಗೆಗಳ ಪ್ರದರ್ಶನ ಉದ್ಘಾಟಿಸಿದರು. ಬಳಿಕ ಸಂಶೋಧನಾ ಪ್ರಬಂಧಗಳ ಸಾರವನ್ನು ದಾಖಲೀಕರಿಸಿದ ಯೂಜಿನಿಕೊನ್‌ ಸಂಗ್ರಹ ಪುಸ್ತಕವನ್ನು ಅನಾವರಣಗೊಳಿಸಿದರು.

ಕಾಲೇಜಿನ ಪ್ರಿನ್ಸಿಪಾಲ್‌ ಡಾ.ಜಿ. ಶ್ರೀನಿವಾಸ್‌ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ರಸಶಾಸ್ತ್ರ ಹಾಗೂ ಭೈಷಜ್ಯಕಲ್ಪನ ವಿಭಾಗದ ಮುಖ್ಯಸ್ಥ ಪ್ರೊ. ರವೀಂದ್ರ ಅಂಗಡಿ ಮತ್ತು ಶಲ್ಯತಂತ್ರ ವಿಭಾಗ ಮುಖ್ಯಸ್ಥ ಪ್ರೊ. ರಜನೀಶ್‌ ಗಿರಿ 2 ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿದರು.

ಕುತ್ಪಾಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆ ಅಧೀಕ್ಷ ಕ ಮತ್ತು ಪ್ರಸೂತಿತಂತ್ರ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥೆ ಡಾ. ಮಮತಾ ಕೆ.ವಿ., ಸ್ನಾತಕೋತ್ತರ ಮತ್ತು ಪಿ.ಎಚ್‌.ಡಿ ಅಧ್ಯಯನ ಕೇಂದ್ರದ ಡೀನ್‌ ಡಾ. ನಿರಂಜನ್‌ ರಾವ್‌, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಸುಚೇತ ಕುಮಾರಿ, ಸಹಾಯಕ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ವೀರಕುಮಾರ ಕೆ. ಉಪಸ್ಥಿತರಿದ್ದರು.

ಸಮ್ಮೇಳನದ ಮುಖ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಸ್ನಾತಕೋತ್ತರ ಮತ್ತು ಪಿ.ಎಚ್‌.ಡಿ ಅಧ್ಯಯನ ಕೇಂದ್ರದ ಸಹಾಯಕ ಮುಖ್ಯಸ್ಥ ಡಾ. ನಾಗರಾಜ್‌ ಎಸ್‌. ಸ್ವಾಗತಿಸಿದರು. ಡಾ. ವಿಜಯೇಂದ್ರ ಭಟ್‌ ವಂದಿಸಿದರು. ಡಾ.ರಾಕೇಶ್‌ ಆರ್‌.ಎನ್‌. ಕಾರ್ಯಕ್ರಮ ನಿರೂಪಿಸಿದರು. ಸ್ನಾತಕೋತ್ತರ ವಿದ್ಯಾರ್ಥಿಗಳಾದ ಡಾ.ದೀಪಿಕಾ, ಡಾ.ಸಮೀರ ಪ್ರಾರ್ಥಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ