ಆ್ಯಪ್ನಗರ

ಇಂದಿನಿಂದ ಕುವೆಂಪು ನಾಟಕೋತ್ಸವ

ರಂಗಕಹಳೆ ಬೆಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಭಂಡಾರ್‌ಕಾರ್ಸ್‌ ಕಾಲೇಜಿನ ಸಹಯೋಗದೊಂದಿಗೆ ಡಿ.25ರಿಂದ 29ರ ತನಕ ಐದು ದಿನಗಳ ಕುವೆಂಪು ನಾಟಕೋತ್ಸವ ಭಂಡಾರ್‌ಕಾರ್ಸ್‌ ಕಾಲೇಜಿನ ಬಯಲು ರಂಗಮಂದಿರದಲ್ಲಿ ನಡೆಯಲಿದೆ ಎಂದು ನಾಟಕೋತ್ಸವ ಸಂಚಾಲಕ ಓಹಿಲೇಶ ಲಕ್ಷ ್ಮಣ ತಿಳಿಸಿದರು.

Vijaya Karnataka 25 Dec 2018, 5:00 am
ಕುಂದಾಪುರ: ರಂಗಕಹಳೆ ಬೆಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಭಂಡಾರ್‌ಕಾರ್ಸ್‌ ಕಾಲೇಜಿನ ಸಹಯೋಗದೊಂದಿಗೆ ಡಿ.25ರಿಂದ 29ರ ತನಕ ಐದು ದಿನಗಳ ಕುವೆಂಪು ನಾಟಕೋತ್ಸವ ಭಂಡಾರ್‌ಕಾರ್ಸ್‌ ಕಾಲೇಜಿನ ಬಯಲು ರಂಗಮಂದಿರದಲ್ಲಿ ನಡೆಯಲಿದೆ ಎಂದು ನಾಟಕೋತ್ಸವ ಸಂಚಾಲಕ ಓಹಿಲೇಶ ಲಕ್ಷ ್ಮಣ ತಿಳಿಸಿದರು.
Vijaya Karnataka Web kuvempu natakotsava
ಇಂದಿನಿಂದ ಕುವೆಂಪು ನಾಟಕೋತ್ಸವ


ಭಂಡಾರ್‌ಕಾರ್ಸ್‌ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಂಗಕಹಳೆ ಕಳೆದ 18 ವರ್ಷಗಳಿಂದ ಕುವೆಂಪು ನಾಟಕೋತ್ಸವ ನಡೆಸಿಕೊಂಡು ಬರುತ್ತಿದ್ದು, ಕುಂದಾಪುರದಲ್ಲಿ ಇದೇ ಪ್ರಥಮ ಬಾರಿಗೆ ಉತ್ಸವ ಆಯೋಜಿಸಿದ್ದೇವೆ ಎಂದರು.

ರಂಗಕಹಳೆ ಕಳೆದ 43 ವರ್ಷಗಳಿಂದ ರಂಗ ಚಟುವಟಿಕೆ ನಡೆಸಿಕೊಂಡು ಬರುತ್ತಿದೆ. 1993ರಲ್ಲಿ ಕುವೆಂಪು ಅವರೇ ತನ್ನ ನಾಟಕ ಪ್ರದರ್ಶಿಸುವಂತೆ ಮನವಿ ಮಾಡಿಕೊಂಡ ಮೇರೆಗೆ ಕುವೆಂಪು ನಾಟಕಗಳ ಉತ್ಸವ ಪ್ರತಿ ಜಿಲ್ಲೆಯಲ್ಲಿಯೂ ನಡೆಸಿಕೊಂಡು ಬರುತ್ತಿದ್ದೇವೆ. ಕುವೆಂಪು ನಾಟಕಗಳು ಸತ್ವಪೂರ್ಣ ಎನಿಸಿಕೊಂಡಿರುವುದಲ್ಲದೆ ಮನೋವಿಕಾಸಕ್ಕೆ ಸಹಕಾರಿಯಾಗಿದೆ ಎಂದರು.

ಪ್ರತಿದಿನ ಸಂಜೆ 6ರಿಂದ ರಾತ್ರಿ 8.45ರ ತನಕ ನಾಟಕ ಪ್ರದರ್ಶನವಿದ್ದು, ಉಚಿತ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಕುವೆಂಪು ನಾಟಕೋತ್ಸವ ಯಶಸ್ಸಿನಲ್ಲಿ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಹಕಾರವೂ ಇದೆ. ಕುಂದಾಪುರದಲ್ಲಿ ಪ್ರಥಮ ಬಾರಿಗೆ ನಾಟಕೋತ್ಸವ ಆಯೋಜಿಸಲು ತೀರ್ಮಾನಿಸಿದಾಗ ಸ್ವತಃ ಬಹುದೊಡ್ಡ ಸಾಂಸ್ಕೃತಿಕ ಕೇಂದ್ರ ಎನಿಸಿಕೊಂಡಿರುವ ಭಂಡಾರ್‌ಕಾರ್ಸ್‌ ಕಾಲೇಜು ಪೂರ್ಣ ಸಹಕಾರ ನೀಡಿರುವುದು ಮರೆಯಲಾಗದ ಅನುಭವ. ಸಾರ್ವಜನಿಕರು, ರಂಗಾಸಕ್ತರು, ಮಕ್ಕಳು ಅವಶ್ಯ ಪ್ರದರ್ಶಿತ ನಾಟಕ ವೀಕ್ಷಿಸಬೇಕು. ಜೀವನ ಪರಿವರ್ತನೆಗೆ ಸಾಕ್ಷಿಯಾಗಬಲ್ಲ ಕುವೆಂಪು ಆಯ್ದ ಪ್ರಸಿದ್ಧ ನಾಟಕ ಪ್ರದರ್ಶನ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.

ಮಣಿಪಾಲ ಅಕಾಡೆಮಿ ಆಡಳಿತಾಧಿಕಾರಿ ಡಾಎಚ್‌.ಶಾಂತಾರಾಮ್‌ ಮಾತನಾಡಿ, ಕರಾವಳಿ ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಅದರಲ್ಲೂ ಕುಂದಾಪುರದಲ್ಲಿ ಕುವೆಂಪು ನಾಟಕೋತ್ಸವ ನಡೆಯುತ್ತಿದೆ. ಇದು ನಮ್ಮ ಸೌಭಾಗ್ಯ. 60 ವರ್ಷಗಳ ಹಿಂದೆ ಕುವೆಂಪು ಅವರ 'ಯಮನ ಸೋಲು' ನಾಟಕ ನೋಡಿದ್ದೆ. ಇಂದಿಗೂ ನನ್ನ ಸ್ಮೃತಿಃಪಟಲದಲ್ಲಿ ಅಚ್ಚಳಿಯದೆ ನಾಟಕ ಉಳಿದಿದೆ. ಇದೆ ನಾಟಕ ಈ ಬಾರಿಯ ನಾಟಕೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ. ಶಿಕ್ಷ ಣದ ಅರ್ಥ ಕೇವಲ ಪಠ್ಯ ಓದುವಿಕೆ ಅಲ್ಲ. ಸಾಂಸ್ಕೃತಿಕವಾಗಿ ರೂಪುಗೊಳ್ಳುವುದೇ ಶಿಕ್ಷ ಣ. ಈ ನಿಟ್ಟಿನಲ್ಲಿ ಕಾಲೇಜು ನಾಟಕೋತ್ಸವಕ್ಕೆ ತುಂಬು ಪ್ರೋತ್ಸಾಹ ನೀಡಿದೆ ಎಂದರು.

ಡಿ.25ರಂದು ಸಂಜೆ 6ಗಂಟೆಗೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ ನಾಟಕೋತ್ಸವ ಉದ್ಘಾಟಿಸುವರು. ನಾಡೋಜ ಪ್ರೊ.ಹಂ.ಪ. ನಾಗರಾಜಯ್ಯ, ಕುವೆಂಪು ಪ್ರತಿಷ್ಠಾನ ಕಾರ್ಯದರ್ಶಿ ಕಡಿದಾಳ್‌ ಪ್ರಕಾಶ್‌, ಹಿರಿಯ ರಂಗಕರ್ಮಿ ಗೋಪಾಲಕೃಷ್ಣ ನಾಯರಿ ಮೊದಲಾದವರು ಭಾಗವಹಿಸುವರು. 29ರಂದು ಸಂಜೆ ಸಮಾರೋಪ ನಡೆಯಲಿದ್ದು, ಅದಕ್ಕೂ ಮೊದಲು ವಿಚಾರ ಸಂಕಿರಣ ಜರುಗಲಿದೆ. ಈ ಎಲ್ಲ ಚಟುವಟಿಕೆಗಳಲ್ಲಿ ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು. ಪ್ರಿನ್ಸಿಪಾಲ್‌ ಡಾ.ಎನ್‌.ಪಿ.ನಾರಾಯಣ ಶೆಟ್ಟಿ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಸುಮಲತಾ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ