ಆ್ಯಪ್ನಗರ

ಉಡುಪಿ: ಗುಡ್ಡ ಜರಿತ, ಅಪಾಯದಲ್ಲಿ ಬಹುಮಹಡಿ ಕಟ್ಟಡ

ಸಂಜೆ ನಾಲ್ಕು ಗಂಟೆ ಸುಮಾರಿಗೆ ಬಹುಮಹಡಿ ಕಟ್ಟಡದ ಕೆಳಗಿನ ಗುಡ್ಡ ಮೋರಿ ಸಹಿತ ಜರಿದು ಬಿದ್ದಿದೆ. ತಕ್ಷಣವೇ ಕಾರ್ಯಾಪ್ರವೃತ್ತರಾದ ಸ್ಥಳೀಯಾಡಳಿತ ಹಾಗೂ‌ ಪೊಲೀಸರು ಕಟ್ಟಡದ ಮುಂಭಾಗದ ರಾಷ್ಟ್ರೀಯ ಹೆದ್ದಾರಿ 169 ಎ ಯ ವಾಹನ ಸಂಚಾರವನ್ನು ನಿರ್ಬಂಧಿಸಿ ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

Vijaya Karnataka Web 21 Sep 2020, 5:47 pm
ಉಡುಪಿ: ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಅಬ್ಬರಿಸುತ್ತಿರುವ ಭಾರೀ ಮಳೆಯ ಪರಿಣಾಮ ಮಣಿಪಾಲದ ಕುಂಡೇಲುಕಾಡಿನ ಗುಡ್ಡ ಜರಿದಿದ್ದು, ಅಲ್ಲೇ ಸಮೀಪದಲ್ಲಿರುವ ಬಹುಮಹಡಿ ಕಟ್ಟಡವೊಂದು ಅಪಾಯದ ಸ್ಥಿತಿಯಲ್ಲಿದೆ.
Vijaya Karnataka Web ಬಹುಮಹಡಿ ಕಟ್ಟಡ
ಬಹುಮಹಡಿ ಕಟ್ಟಡ


ಸಂಜೆ ನಾಲ್ಕು ಗಂಟೆ ಸುಮಾರಿಗೆ ಬಹುಮಹಡಿ ಕಟ್ಟಡದ ಕೆಳಗಿನ ಗುಡ್ಡ ಮೋರಿ ಸಹಿತ ಜರಿದು ಬಿದ್ದಿದೆ. ತಕ್ಷಣವೇ ಕಾರ್ಯಾಪ್ರವೃತ್ತರಾದ ಸ್ಥಳೀಯಾಡಳಿತ ಹಾಗೂ‌ ಪೊಲೀಸರು ಕಟ್ಟಡದ ಮುಂಭಾಗದ ರಾಷ್ಟ್ರೀಯ ಹೆದ್ದಾರಿ 169 ಎ ಯ ವಾಹನ ಸಂಚಾರವನ್ನು ನಿರ್ಬಂಧಿಸಿ ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ವಸತಿ ಸಮುಚ್ಛಯದ ನಿವಾಸಿಗಳ ಸ್ಥಳಾಂತರಗೊಳಿಸುವಂತೆ ನಗರಸಭೆಯ ಪೌರಾಯುಕ್ತ ಆನಂದ ಚಿ. ಕಲ್ಲೋಳಿಕರ್ ಸೂಚಿಸಿದ್ದಾರೆ. ಸದ್ಯ ಕಟ್ಟಡ ಮಾಲೀಕರಿಗೆ ಮೌಖಿಕವಾಗಿ ತಿಳಿಸಿದ ಅಧಿಕಾರಿಗಳು ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸುವಂತೆ ಹೇಳಿದ್ದಾರೆ.

2005, 2006 ರಲ್ಲಿ ಈ ಕಟ್ಟಡವನ್ನು ನಿರ್ಮಿಸಲಾಗಿದೆ. ಈ ವಸತಿ ‌ಸಮುಚ್ಛಯದಲ್ಲಿ 34 ಮನೆಗಳಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ