ಆ್ಯಪ್ನಗರ

ಚಿರತೆ ಚರ್ಮ ಮಾರಾಟ ಯತ್ನ: 10 ಮಂದಿ ಬಂಧನ

ಶುಕ್ರವಾರ ಬೆಂಗಳೂರು ಪೊಲೀಸ್‌ ಫಾರೆಸ್ಟ್‌ ಸೆಲ್‌ ಅಧಿಕಾರಿಗಳು ಕುಂದಾಪುರ ಅರಣ್ಯ ಇಲಾಖಾಧಿಕಾರಿಗಳ ಸಹಕಾರದೊಂದಿಗೆ ಚಿರತೆ ಚರ್ಮ ಅಕ್ರಮ ಮಾರಾಟ ಯತ್ನ ಪ್ರಕರಣ ಬೇಧಿಸಿದ್ದು 10 ಮಂದಿಯನ್ನು ಬಂಧಿಸಿದ್ದಾರೆ. ಇಲ್ಲಿನ ಶಾಸ್ತ್ರೀವೃತ್ತದಲ್ಲಿ ಮಾರಾಟ ಮತ್ತು ಖರೀದಿ ಯತ್ನ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು ಚಿರತೆ ಚರ್ಮ, 2 ವಾಹನ ಸಹಿತ 50ಲಕ್ಷ ರೂ.ಮೇಲ್ಪಟ್ಟು ಸೊತ್ತು ವಶಪಡಿಸಿಕೊಂಡಿದ್ದಾರೆ.

Vijaya Karnataka 19 Jan 2019, 5:00 am
ಕುಂದಾಪುರ: ಶುಕ್ರವಾರ ಬೆಂಗಳೂರು ಪೊಲೀಸ್‌ ಫಾರೆಸ್ಟ್‌ ಸೆಲ್‌ ಅಧಿಕಾರಿಗಳು ಕುಂದಾಪುರ ಅರಣ್ಯ ಇಲಾಖಾಧಿಕಾರಿಗಳ ಸಹಕಾರದೊಂದಿಗೆ ಚಿರತೆ ಚರ್ಮ ಅಕ್ರಮ ಮಾರಾಟ ಯತ್ನ ಪ್ರಕರಣ ಬೇಧಿಸಿದ್ದು 10 ಮಂದಿಯನ್ನು ಬಂಧಿಸಿದ್ದಾರೆ. ಇಲ್ಲಿನ ಶಾಸ್ತ್ರೀವೃತ್ತದಲ್ಲಿ ಮಾರಾಟ ಮತ್ತು ಖರೀದಿ ಯತ್ನ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು ಚಿರತೆ ಚರ್ಮ, 2 ವಾಹನ ಸಹಿತ 50ಲಕ್ಷ ರೂ.ಮೇಲ್ಪಟ್ಟು ಸೊತ್ತು ವಶಪಡಿಸಿಕೊಂಡಿದ್ದಾರೆ.
Vijaya Karnataka Web 2


ಕುಂದಾಪುರದ ಹೃದಯಭಾಗ ಶಾಸ್ತ್ರೀವೃತ್ತದಲ್ಲಿ ಮಾರುತಿ 800 ಕಾರು ಮತ್ತು ಹೊಂಡಾ ಅಮೇಜ್‌ ಕಾರಿನಲ್ಲಿ ಆಗಮಿಸಿರುವ ಎರಡು ತಂಡ ಚಿರ ತೆ ಚರ್ಮ ಮಾರಾಟ ಮತ್ತು ಖರೀದಿ ಯತ್ನ ನಡೆಸುತ್ತಿದೆ ಎಂಬ ಮಾಹಿತಿ ಮೇರೆಗೆ ಬೆಂಗಳೂರು ಪೊಲೀಸ್‌ ಫಾರೆಸ್ಟ್‌ ಸೆಲ್‌ನ ಇನ್ಸ್‌ಪೆಕ್ಟರ್‌ ರವಿಕುಮಾರ್‌ ಮತ್ತು ತಂಡ, ಕುಂದಾಪುರ ಆರ್‌ಎಫ್‌ಓ ಪ್ರಭಾಕರ ಕುಲಾಲ್‌ ಮತ್ತು ತಂಡ ದಾಳಿ ನಡೆಸಿದ್ದು ಖರೀದಿ ಯತ್ನ ನಡೆಸುತ್ತಿರುವಾಗ ರೆಡ್‌ಹ್ಯಾಂಡ್‌ ಆಗಿ ಆರೋಪಿಗಳನ್ನು ಬಂಧಿಸಿದೆ. ಬಂಧಿತರು ಬೈಂದೂರು, ಹೊನ್ನಾವರ, ಭಟ್ಕಳಕ್ಕೆ ಸೇರಿದವರು. ಕಾರ್ಯಾಚರಣೆಯಲ್ಲಿ 1 ಚಿ ರತೆ ಚರ್ಮ, 11 ಮೊಬೈಲ್‌ ವಶಪಡಿಸಿಕೊಳ್ಳಲಾಗಿದೆ. ಚಿರತೆ ಚರ್ಮದ ಬೆಲೆ ರೂ.40ಲಕ್ಷ ಎಂದು ಪ್ರಾಥಮಿಕ ವಿಚಾರಣೆ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದಾರೆ.

ಬಂಧಿತರು ಯಾರು: ಚಿರತೆ ಚರ್ಮ ಮಾರಾಟದ ಪ್ರಧಾನ ಆರೋಪಿ ಕಾರವಾರ ತಾಲೂಕಿನ ಮುಂಡುಗೋಡು ನಿವಾಸಿ ಸೂರಜ್‌, ಭಟ್ಕಳ ಕಡುವಿನಕಟ್ಟೆ ನಿವಾಸಿ ರಾಘು, ಬೈಂದೂರಿನ ನಾಗರಾಜ್‌, ಭಟ್ಕಳ ಹಡವಳ್ಳಿ ನಿವಾಸಿ ನಾಗರಾಜ್‌, ಭಟ್ಕಳ ಬೆಂಗ್ರೆಯ ಪ್ರವೀಣ್‌ ದೇವಾಡಿಗ, ಭಟ್ಕಳ ವೆಂಕಟಪುರ ನಿವಾಸಿ ಮೋಹನ್‌ ಜಿ.ನಾಯ್ಕ್‌, ಬೈಂದೂರು ತಗ್ಗರ್ಸೆಯ ವೀರೇಂದ್ರ ಶೆಟ್ಟಿ, ಹೊನ್ನಾವರದ ಜಾನ್ಸನ್‌, ಭಟ್ಕಳ ಸೋಣರಕೇರಿಯ ಸುಬ್ರಹ್ಮಣ್ಯ ರಾಯ್ಕರ್‌ ಮತ್ತು ಸಂಜೀವ ಪೂಜಾರಿ ಎಂಬವರನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಕುಂದಾಪುರ ಡಿಎಫ್‌ಓ ಪ್ರಭಾಕರನ್‌, ಎಸಿಎಫ್‌ ಲೋಹಿತ್‌ ತನಿಖೆ ನಡೆಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ