ಆ್ಯಪ್ನಗರ

ನಾಳೆಯಿಂದ ಲೈಫ್‌ ಬುಟ್‌ ಕ್ಯಾಂಪ್‌

ಶ್ರೀವಿದ್ಯಾರ್ಥಿ ಅಕಾಡೆಮಿ ಆಫ್‌ ಇಂಟೆಲಿಜೆಂಟ್‌ ಲರ್ನಿಂಗ್‌ ಆನ್‌ ಲೈಫ್‌ ವತಿಯಿಂದ ಮೊದಲ ಬಾರಿಗೆ ಹಮ್ಮಿಕೊಂಡಿರುವ ಲೈಫ್‌ ಬುಟ್‌ ಕ್ಯಾಂಪ್‌-2019 ಮೇ 19ರಿಂದ 28ರವರೆಗೆ ಅಂಬಾಗಿಲು ಜಂಕ್ಷನ್‌ ಸಮೀಪದ ಸುಜನಾ ಕಾಂಪ್ಲೆಕ್ಸ್‌ನಲ್ಲಿ ನಡೆಯಲಿದೆ ಎಂದು ಜ್ಞಾನಯಜ್ಞ ಲೈಫ್‌ ರಿಸರ್ಚ್‌ ಫೌಂಡೇಶನ್‌ನ ಟ್ರಸ್ಟಿ ಹರೀಶ್‌ ವಿ. ತಿಳಿಸಿದ್ದಾರೆ.

Vijaya Karnataka 18 May 2019, 5:00 am
ಉಡುಪಿ: ಶ್ರೀವಿದ್ಯಾರ್ಥಿ ಅಕಾಡೆಮಿ ಆಫ್‌ ಇಂಟೆಲಿಜೆಂಟ್‌ ಲರ್ನಿಂಗ್‌ ಆನ್‌ ಲೈಫ್‌ ವತಿಯಿಂದ ಮೊದಲ ಬಾರಿಗೆ ಹಮ್ಮಿಕೊಂಡಿರುವ ಲೈಫ್‌ ಬುಟ್‌ ಕ್ಯಾಂಪ್‌-2019 ಮೇ 19ರಿಂದ 28ರವರೆಗೆ ಅಂಬಾಗಿಲು ಜಂಕ್ಷನ್‌ ಸಮೀಪದ ಸುಜನಾ ಕಾಂಪ್ಲೆಕ್ಸ್‌ನಲ್ಲಿ ನಡೆಯಲಿದೆ ಎಂದು ಜ್ಞಾನಯಜ್ಞ ಲೈಫ್‌ ರಿಸರ್ಚ್‌ ಫೌಂಡೇಶನ್‌ನ ಟ್ರಸ್ಟಿ ಹರೀಶ್‌ ವಿ. ತಿಳಿಸಿದ್ದಾರೆ.
Vijaya Karnataka Web life butt camp by tomorrow
ನಾಳೆಯಿಂದ ಲೈಫ್‌ ಬುಟ್‌ ಕ್ಯಾಂಪ್‌


ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಮೇ 19ರಂದು ಸಂಜೆ 4.30ಕ್ಕೆ ಶಿಬಿರವನ್ನು ವಕೀಲ ಆತ್ರಾಡಿ ಪೃಥ್ವಿರಾಜ್‌ ಹೆಗ್ಡೆ ಉದ್ಘಾಟಿಸಲಿದ್ದಾರೆ. ಸಿದ್ಧಿವಿನಾಯಕ ಆಟೋ ಆ್ಯಂಡ್‌ ಟ್ರಾವೆಲ್ಸ್‌ ಏಜೆನ್ಸಿಯ ಅಧ್ಯಕ್ಷ ವಿಠಲ ಜತ್ತನ್ನ, ಕ್ರೀಡಾ ಸಾಧಕ ರಾಜು ಕೆ.ಪಿ. ಭಾಗವಹಿಸಲಿದ್ದಾರೆ ಎಂದರು.

ಯುವಪೀಳಿಗೆಯ ಮುಂದಿನ ಭವಿಷ್ಯ ಹಾಗೂ ಜೀವನವನ್ನು ಪರಿಗಣಿಸಿ ಈ ಶಿಬಿರ ಹಮ್ಮಿಕೊಳ್ಳಲಾಗಿದೆ. ಹದಿಹರೆಯದ ವಯಸ್ಸಿನಲ್ಲಿ ಆರೋಗ್ಯ, ತಂದೆ, ತಾಯಿ ಹಾಗೂ ಶಿಕ್ಷಕರೊಂದಿಗಿನ ಸಂಬಂಧಗಳ ಕುರಿತು ಪರಿಚಯ ಹಾಗೂ ತಜ್ಞರಿಂದ ಉಪನ್ಯಾಸಗಳನ್ನು ನೀಡಲಾಗುವುದು. ಜತೆಗೆ ಆತ್ಮರಕ್ಷಣೆ, ವ್ಯಕ್ತಿತ್ವ ವಿಕಸನ, ರೇಖಿ, ಯೋಗ, ಧ್ಯಾನ, ಚಿತ್ರಕಲೆ, ನೃತ್ಯ ಹಾಗೂ ವೇದಿಕ ಗಣಿತ ಇತ್ಯಾದಿಗಳನ್ನು ಕಲಿಸಲಾಗುವುದೆಂದು ಮಾಹಿತಿ ನೀಡಿದರು.

ತಲಾ ಒಬ್ಬರಿಗೆ 2 ಸಾವಿರ ಶುಲ್ಕ ನಿಗದಿ ಮಾಡಿದ್ದು, 9ರಿಂದ 16 ವರ್ಷದೊಳಗಿನ ಮಕ್ಕಳಿಗೆ ಶಿಬಿರದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ. ಆಟೋ ಚಾಲಕರು, ಮಾಲೀಕರು, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಶುಲ್ಕದಲ್ಲಿ ವಿಶೇಷ ರಿಯಾಯಿತಿ ಇದೆ. ನೋಂದಾಯಿತ ಸ್ವಯಂಸೇವಕರ ಮಕ್ಕಳಿಗೆ ಶಿಬಿರದಲ್ಲಿ ಶುಲ್ಕ ಇರುವುದಿಲ್ಲ. ಶಿಬಿರ ಉದ್ಘಾಟನಾ ಕಾರ್ಯಕ್ರಮ ಬಳಿಕ ಸಾರ್ವಕಾಲಿಕ ಪವಿತ್ರ ಅಗ್ನಿಹೋತ್ರ ಹವನ ಆಯೋಜಿಸಿದ್ದು, ಆಸಕ್ತರು ಮೇ 19ರಂದು ಸಂಜೆ 4 ಗಂಟೆಯೊಳಗೆ ನೋಂದಣಿ ಮಾಡಿಕೊಳ್ಳುವಂತೆ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರೇಖಿ ಗ್ರಾಂಡ್‌ ಮಾಸ್ಟರ್‌ ಉಡುಪಿಯ ಸತೀಶ್‌ ಶೇಟ್‌, ಯೋಗ ಆಸಕ್ತ ಶಿವಕುಮಾರ್‌, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ