ಆ್ಯಪ್ನಗರ

ಸ್ಥಳೀಯ ಸಂಸ್ಥೆಗಳ ಚುನಾವಣೆ: ಉಡುಪಿ ಶಾಸಕರ ಮಗುವಿನ ಕೈಗೂ ಶಾಯಿ!

ಉಡುಪಿ ನಗರಸಭೆಯ ಕರಂಬಳ್ಳಿ ವಾರ್ಡ್‌ನ ಮತಗಟ್ಟೆಗೆ ಉಡುಪಿ ಶಾಸಕ ಕೆ. ರಘುಪತಿ ಭಟ್‌, ತಾಯಿ ಶಿಲ್ಪಾ ಆರ್‌. ಭಟ್‌, ಅಜ್ಜಿ ಸರಸ್ವತಿ ಜತೆ ಬಂದಿದ್ದ ಪುತ್ರ ರಿಹಾಂಶ್‌(ಮೂರೂವರೆ ವರ್ಷ) ಬೆರಳಿಗೂ ಶುಕ್ರವಾರ ಶಾಯಿ ಹಾಕಲಾಯಿತು.

Vijaya Karnataka 1 Sep 2018, 12:32 pm
ಉಡುಪಿ: ಉಡುಪಿ ನಗರಸಭೆಯ ಕರಂಬಳ್ಳಿ ವಾರ್ಡ್‌ನ ಮತಗಟ್ಟೆಗೆ ಉಡುಪಿ ಶಾಸಕ ಕೆ. ರಘುಪತಿ ಭಟ್‌, ತಾಯಿ ಶಿಲ್ಪಾ ಆರ್‌. ಭಟ್‌, ಅಜ್ಜಿ ಸರಸ್ವತಿ ಜತೆ ಬಂದಿದ್ದ ಪುತ್ರ ರಿಹಾಂಶ್‌(ಮೂರೂವರೆ ವರ್ಷ) ಬೆರಳಿಗೂ ಶುಕ್ರವಾರ ಶಾಯಿ ಹಾಕಲಾಯಿತು.
Vijaya Karnataka Web local body election ink applied on mla sons finger
ಸ್ಥಳೀಯ ಸಂಸ್ಥೆಗಳ ಚುನಾವಣೆ: ಉಡುಪಿ ಶಾಸಕರ ಮಗುವಿನ ಕೈಗೂ ಶಾಯಿ!


ಮತಗಟ್ಟೆಗೆ ಬಂದಿದ್ದ ಈತ ತಾನೂ ಅಪ್ಪ ಅಮ್ಮ, ಅಜ್ಜಿಯಂತೆ ಓಟು ಮಾಡುವುದಾಗಿ ಹಠ ಹಿಡಿದು, ಮತದಾನ ಕೇಂದ್ರದಿಂದ ಹೊರ ಹೋಗುತ್ತಿದ್ದಂತೆ ಜೋರಾಗಿ ಅತ್ತು ರಂಪಾಟ ಮಾಡಿದ.

ಸ್ಥಳದಲ್ಲಿದ್ದ ಶಾಸಕರ ಕಾರು ಚಾಲಕ ವಿರಾಮದಲ್ಲಿದ್ದ ಅಧಿಕಾರಿಗಳ ಬಳಿಗೆ ಕರೆದುಕೊಂಡು ಹೋಗಿ ಅವರ ಪೆನ್ನಿನಿಂದ ಎಡಗೈ ತೋರು ಬೆರಳಿಗೆ ಶಾಯಿ ಮುದ್ರೆ ಹಾಕಿಸಿದ ಮೇಲೆ ಅಳು ನಿಲ್ಲಿಸಿ, ನಗೆ ಬೀರಿದ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ