ಆ್ಯಪ್ನಗರ

ಕತಾರ್‌ನಿಂದ ಬಂದಿದ್ದ ವ್ಯಕ್ತಿಗೆ ಪಾಸಿಟಿವ್‌, ಪಾಂಗಾಳಗುಡ್ಡೆ ಸೀಲ್‌ಡೌನ್!‌

ಕತಾರ್‌ನಿಂದ ಬಂದು ಬಹಳ ದಿನಗಳು ಕಳೆದ ಬಳಿಕ ವ್ಯಕ್ತಿಯೊಬ್ಬನಿಗೆ ಕೊರೊನಾ ಪಾಸಿಟಿವ್‌ ಆಗಿದೆ. ಈ ಹಿನ್ನೆಲೆ ಪಾಂಗಾಳ ಗುಡ್ಡೆಯನ್ನ ಸೀಲ್‌ಡೌನ್‌ ಮಾಡಲಾಗಿದೆ.

Vijaya Karnataka Web 1 Jun 2020, 12:02 pm
ಉಡುಪಿ: ಕತಾರ್‌ನಿಂದ ಬಂದಿದ್ದ ಕಾಪು ತಾಲೂಕಿನ ಇನ್ನಂಜೆ ಗ್ರಾಮದ ಪಾಂಗಾಳಗುಡ್ಡೆ ಶ್ರೀಯಾನ್‌ ಮೂಲ ಸ್ಥಾನದ ಬಳಿಯ ಯುವಕನಲ್ಲಿ ಕೋವಿಡ್‌ 19 ಪಾಸಿಟಿವ್‌ ಪತ್ತೆಯಾಗಿದೆ. ಬೆಂಗಳೂರಿನಲ್ಲಿಒಂದು ವಾರ ಸರಕಾರಿ ಕಾರಂಟೈನ್‌ ಪೂರೈಸಿ ಬಂದಿದ್ದ ಯುವಕ ಕಳೆದ ಒಂದು ವಾರದಿಂದ ಮನೆಯಲ್ಲಿದ್ದ. ಆದರೆ ಇಂದು ಬಂದಿರುವ ಕೋವಿಡ್‌ ಟೆಸ್ಟ್‌ ಫಲಿತಾಂಶ ಪಾಸಿಟಿವ್‌ ಬಂದಿದ್ದ ಹಿನ್ನಲೆ ಯುವಕನನ್ನು ಚಿಕಿತ್ಸೆಗಾಗಿ ಉಡುಪಿಯ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.
Vijaya Karnataka Web corona-agencies


ಜಿಲ್ಲಾಡಳಿತದ ಸೂಚನೆಯ ಮೇರಗೆ ಕಾಪು ತಹಶೀಲ್ದಾರ್‌ ಮಹಮ್ಮದ್‌ ಐಸಾಕ್‌ ನೇತೃತ್ವದಲ್ಲಿ ಪೊಲೀಸರು ಯುವಕನ ಮನೆಯ ಪರಿಸರವನ್ನು ಸೀಲ್‌ಡೌನ್‌ ಮಾಡಿದ್ದಾರೆ. ಸುಮಾರು ಆರು ಮನೆಗಳಿರುವ ಏರಿಯಾವನ್ನು ಸೀಲ್‌ ಮಾಡಲಾಗಿದ್ದು ಇಲ್ಲಿ 30ಕ್ಕೂ ಹೆಚ್ಚು ಮಂದಿ ವಾಸವಿದ್ದಾರೆ. ಪರಿಸರದ ಸರ್ವೆ ನಡೆಸಿದ ಬಳಿಕ ಕಂಟೋನ್ಮೆಂಟ್‌ ಮತ್ತು ಬಫರ್‌ ಜೋನ್‌ ಅಧಿಕೃತವಾಗಿ ಘೋಷಣೆಯಾಗಲಿದೆ.

ಉಡುಪಿ ಜಿಲ್ಲೆಯಲ್ಲಿ ಅತ್ಯಧಿಕ ಕೊರೊನಾ ಲಕ್ಷಣಗಳು ತಡವಾಗಿ ಗೋಚರಿಸುತ್ತಿರುವ ಪ್ರಕರಣಗಳು ವರದಿಯಾಗುತ್ತಿದೆ. ಕ್ವಾರಂಟೈನ್‌ನಲ್ಲಿರುವಾಗ ಯಾವುದೇ ಲಕ್ಷಣಗಳು ಇರುವುದಿಲ್ಲ. ಆದ್ರೆ ಕ್ವಾರಂಟೈನ್‌ ಬಿಟ್ಟು ಮನೆಗೆ ತೆರಳಿದಾಗ ಈ ರೀತಿಯ ಲಕ್ಷಣಗಳು ಕಂಡುಬರುತ್ತಿದೆ. ಇದು ಜಿಲ್ಲಾಡಳಿತ ಮತ್ತು ಜನರನ್ನ ಆತಂಕಕ್ಕೀಡು ಮಾಡಿದೆ.

ಕಣ್ಣಿಗೆ ಕಾಣದ ಶತ್ರುವಿನ ಸಂಹಾರ ಶತಸಿದ್ಧ: ಪ್ರಧಾನಿ ಮೋದಿ ಭರವಸೆಯ ನುಡಿಗಳು!


ಜಿಲ್ಲಾಡಳಿತ ಈ ಬಗ್ಗೆ ಎಚ್ಚರ ವಹಿಸಿದ್ದು ಸರ್ಕಾರಿ ಕ್ವಾರಂಟೈನ್‌ ಬಳಿಕ ಜನರು ಅವರವರ ಮನೆಯಲ್ಲಿ ಕ್ವಾರಂಟೈನ್‌ನಲ್ಲಿರುವಂತೆ ಸೂಚನೆ ನೀಡಿದೆ. ಈ ರೀತಿಯ ಬೆಳವಣಿಗೆ ಸಹಜವಾಗಿ ಭಯ ಹುಟ್ಟಿಸುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ