ಆ್ಯಪ್ನಗರ

ಮೀನುಗಾರರ ನಾನಾ ಬೇಡಿಕೆ ಈಡೇರಿಸಲು ಕೇಂದ್ರಕ್ಕೆ ಮನವಿ

ಕೇಂದ್ರದ ಮುಂಬರುವ ಬಜೆಟ್‌ನಲ್ಲಿ ಕರಾವಳಿ ಮತ್ತು ಒಳನಾಡು ಮೀನುಗಾರರ ನಾಧಿನಾ ಬೇಡಿಕೆಗಳನ್ನು ಈಡೇರಿಸುವಂತೆ ನಾಡೋಜ ಡಾ. ಜಿ. ಶಂಕರ್‌ ಮಾರ್ಗದರ್ಶನದಲ್ಲಿ ಕೇಂದ್ರ ಸಚಿವರು, ಸಂಸದರಿಗೆ ಮನವಿ ಸಲ್ಲಿಸಲಾಯಿತು.

Vijaya Karnataka 6 Jun 2019, 5:00 am
ಉಡುಪಿ: ಕೇಂದ್ರದ ಮುಂಬರುವ ಬಜೆಟ್‌ನಲ್ಲಿ ಕರಾವಳಿ ಮತ್ತು ಒಳನಾಡು ಮೀನುಗಾರರ ನಾಧಿನಾ ಬೇಡಿಕೆಗಳನ್ನು ಈಡೇರಿಸುವಂತೆ ನಾಡೋಜ ಡಾ. ಜಿ. ಶಂಕರ್‌ ಮಾರ್ಗದರ್ಶನದಲ್ಲಿ ಕೇಂದ್ರ ಸಚಿವರು, ಸಂಸದರಿಗೆ ಮನವಿ ಸಲ್ಲಿಸಲಾಯಿತು.
Vijaya Karnataka Web news/udupi/manavi
ಮೀನುಗಾರರ ನಾನಾ ಬೇಡಿಕೆ ಈಡೇರಿಸಲು ಕೇಂದ್ರಕ್ಕೆ ಮನವಿ


ರಾಜ್ಯ ಸರಕಾರ ಮೀನುಗಾರರು ಬಳಸುವ ಡೀಸೆಲ್‌ ಪ್ರತಿ ಲೀಟರಿಗೆ 9.40 ರೂ. ತೆರಿಗೆ ವಿನಾಯಿತಿ ನೀಡುತ್ತಿದ್ದು ಕೇಂದ್ರ ಸರಕಾರವೂ ಮೀನುಗಾರಿಕೆಗೆ ಬಳಸುವ ಡೀಸೆಲ್‌ ಪ್ರತಿ ಲೀಟರಿಗೆ 9.40 ರೂ. ತೆರಿಗೆ ವಿನಾಯಿತಿ ನೀಡುವಂತೆ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್‌, ಮೊಗವೀರ ಯುವ ಸಂಘಟನೆ ಜಿಲ್ಲಾಧ್ಯಕ್ಷ ವಿನಯ್‌ ಕರ್ಕೇರ ಒತ್ತಾಯಿಸಿದ್ದಾರೆ.

ಕೇಂದ್ರ ಸಚಿವ ಡಿ. ವಿ. ಸದಾನಂದ ಗೌಡ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌, ಮೀನುಗಾರಿಕೆ ಸಚಿವ ಗಿರಿರಾಜ್‌ ಸಿಂಗ್‌, ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಗೆ ಸಲ್ಲಿಸಿದ ಮನವಿಯಲ್ಲಿ ಕೇಂದ್ರ ಸಂಪುಟ ಸಭೆ ನಿರ್ಣಯದಂತೆ 60ವರ್ಷ ಮೇಲ್ಪಟ್ಟ ರೈತರಿಗೆ ಮತ್ತು ವರ್ತಕರಿಗೆ ಘೋಷಿಸಿದ ಮಾಸಿಕ 3,000 ರೂ. ಪಿಂಚಣಿಯನ್ನು ಕರಾವಳಿ ಮತ್ತು ಒಳನಾಡ ಪುರುಷ ಮತ್ತು ಮಹಿಳಾ ಮೀನುಗಾರರಿಗೂ ವಿಸ್ತರಿಸಬೇಕು.

ಕರಾವಳಿಯ ಎಲ್ಲ ಮೀನುಗಾರಿಕೆ ಬಂದರುಗಳನ್ನು ಅಭಿವೃದ್ಧಿಪಡಿಸಬೇಕು. ಮೀನುಗಾರರ ಹಿತದೃಷ್ಟಿಯಿಂದ ಕರಾವಳಿ ನಿಯಂತ್ರಣ ವಲಯ ಕಾನೂನನ್ನು ಸರಳೀಕರಿಸಬೇಕು. ಮೀನುಗಾರರ ಸ್ವಂತ ಸೂರಿಗಾಗಿ ಕೇಂದ್ರ ವಸತಿ ಯೋಜನೆ ವಿಸ್ತರಿಸಬೇಕು. ಮೊಗವೀರ ಮತ್ತು ಮೀನುಗಾರರ 39 ಪರ್ಯಾಯ ಪಂಗಡಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಒತ್ತಾಯಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ