ಆ್ಯಪ್ನಗರ

ಮಂಗಳೂರು ವಿವಿ ಅಂತರ್‌ ಕಾಲೇಜು ಕ್ರಿಕೆಟ್‌ ಪಂದ್ಯಾವಳಿ

ಪಡುಕರೆ ಕಾಲೇಜಿನಲ್ಲಿ ನಡೆದ ಮಂಗಳೂರು ವಿವಿ ಮಟ್ಟದ ಅಂತರ್‌ ಕಾಲೇಜು ಕ್ರಿಕೆಟ್‌ ಚಾಂಪಿಯನ್‌ಶಿಪ್‌ನಲ್ಲಿ ಮೂಡುಬಿದಿರೆ ಆಳ್ವಾಸ್‌ ಕಾಲೇಜ್‌ ತಂಡ ಪ್ರಶಸ್ತಿ ಗಳಿಸಿದ್ದು, ಬ್ರಹ್ಮಾವರದ ಎಸ್‌ಎಂಎಸ್‌ ಕಾಲೇಜು ದ್ವಿತೀಯ ಸ್ಥಾನಿಯಾಯಿತು.

Vijaya Karnataka 23 Mar 2019, 5:00 am
ಕೋಟ: ಪಡುಕರೆ ಕಾಲೇಜಿನಲ್ಲಿ ನಡೆದ ಮಂಗಳೂರು ವಿವಿ ಮಟ್ಟದ ಅಂತರ್‌ ಕಾಲೇಜು ಕ್ರಿಕೆಟ್‌ ಚಾಂಪಿಯನ್‌ಶಿಪ್‌ನಲ್ಲಿ ಮೂಡುಬಿದಿರೆ ಆಳ್ವಾಸ್‌ ಕಾಲೇಜ್‌ ತಂಡ ಪ್ರಶಸ್ತಿ ಗಳಿಸಿದ್ದು, ಬ್ರಹ್ಮಾವರದ ಎಸ್‌ಎಂಎಸ್‌ ಕಾಲೇಜು ದ್ವಿತೀಯ ಸ್ಥಾನಿಯಾಯಿತು.
Vijaya Karnataka Web UDP-23cb2


ಎಸ್‌ಎಂಎಸ್‌ ಕಾಲೇಜಿನ ಆದರ್ಶ್‌ ಬೆಸ್ಟ್‌ ಬ್ಯಾಟ್ಸ್‌ಮನ್‌ ಜತೆಗೆ ಸರಣಿ ಶ್ರೇಷ್ಠ ಪ್ರಶಸ್ತಿ ಗಳಿಸಿದರೆ, ಆಳ್ವಾಸ್‌ ಕಾಲೇಜಿನ ಶ್ರೀಶ ಶ್ರೇಷ್ಠ ಬೌಲರ್‌ ಪ್ರಶಸ್ತಿ ಪಡೆದರು.

ಮಣೂರು ಪಡುಕರೆ ಗೀತಾನಂದ ಫೌಂಡೇಶನ್‌ ಟ್ರಸ್ಟಿ, ಪ್ರಥಮ ಬಹುಮಾನದ ಪ್ರಾಯೋಜಕ ಪ್ರಶಾಂತ್‌ ಎ. ಕುಂದರ್‌ ಬಹುಮಾನ ವಿತರಿಸಿ ಮಾತನಾಡಿ, ಕ್ರೀಡೆ ನಮ್ಮ ದೈಹಿಕ, ಮಾನಸಿಕ ಆರೋಗ್ಯ ಕಾಪಾಡಲು, ಭವಿಷ್ಯದಲ್ಲಿ ಉತ್ತಮ ಸ್ಥಾನಮಾನ, ಉದ್ಯೋಗ ಗಳಿಸಿದ ನಂತರವೂ ಕ್ರೀಡೆಯನ್ನು ಹವ್ಯಾಸವಾಗಿ ಮುಂದುವರಿಸಬೇಕು ಎಂದರು.

ಪ್ರಿನ್ಸಿಪಾಲ್‌ ನಿತ್ಯಾನಂದ ವಿ.ಗಾಂವ್‌ಕರ್‌ ಅಧ್ಯಕ್ಷ ತೆ ವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ರಮೇಶ್‌ ಎಚ್‌.ಕುಂದರ್‌, ಸ್ಥಳೀಯರಾದ ಪ್ರಭಾಕರ ಎಚ್‌.ಕುಂದರ್‌, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ನಾಗರಾಜ ವೈದ್ಯ ಎಂ., ಪಂದ್ಯಾವಳಿ ಯಶಸ್ವಿಯಾಗಿ ಆಯೋಜಿಸಿದ ದೈಹಿಕ ಶಿಕ್ಷ ಣ ನಿರ್ದೇಶಕ ಡಾ. ಮನೋಜ್‌ ಕುಮಾರ್‌ ಎಂ., ಉಪಸ್ಥಿತರಿದ್ದರು.

ಉದ್ಘಾಟನೆ: ಪಂದ್ಯಾವಳಿಯನ್ನು ಗೀತಾನಂದ ಫೌಂಡೇಶನ್‌ ಪ್ರವರ್ತಕ ಆನಂದ ಸಿ. ಕುಂದರ್‌ ಉದ್ಘಾಟಿಸಿದರು. ಕುಂದಾಪುರ ಮಾತಾ ಆಸ್ಪತ್ರೆಯ ಮನೋತಜ್ಞ ಡಾ.ಪ್ರಕಾಶ ತೋಳಾರ್‌ ಶುಭ ಹಾರೈಸಿದರು. ಓಂ ಶ್ರೀ ಕನ್ಸ್‌ಸ್ಟ್ರಕ್ಷ ನ್ಸ್‌ ಮಾಲೀಕ ಸುಬ್ರಾಯ ಆಚಾರ್ಯ, ಮಣೂರು ಹೈಸ್ಕೂಲ್‌ ಮುಖ್ಯೋಪಾಧ್ಯಾಯ ಸತೀಶ್‌ ಐತಾಳ್‌, ವಿದ್ಯಾರ್ಥಿ ಸಂಘಟಕರಾದ ಅಭಿಷೇಕ್‌, ಹೇಮಂತ ಕುಮಾರ್‌ ಉಪಸ್ಥಿತರಿದ್ದರು. ಕಚೇರಿ ಸಹಾಯಕ ರಾಘವೇಂದ್ರ ಕುಂದರ್‌ ಸಹಕರಿಸಿದರು. ಹರ್ಷಲ್‌ ರಾವ್‌ ಸ್ವಾಗತಿಸಿದರು. ನಾಗರಾಜ್‌ ವಂದಿಸಿದರು. ಮಂಜುನಾಥ ಆಚಾರಿ ನಿರೂಪಿಸಿದರು. ಪ್ರಶಾಂತ್‌ ನೀಲಾವರ ಬಹುಮಾನ ವಿತರಣೆ ಪಟ್ಟಿ ವಾಚಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ