ಆ್ಯಪ್ನಗರ

ಮಣಿಪಾಲ ವಿದ್ಯಾರ್ಥಿ ವಿನ್ಯಾಸಗೊಳಿಸಿದ ರೈಲು ಶೌಚಾಲಯಕ್ಕೆ 2ನೇ ಸ್ಥಾನ

ಮಣಿಪಾಲ ವಿಶ್ವವಿದ್ಯಾಲಯದ ವಿದ್ಯಾರ್ಥಿ ವಿನೋದ್‌ ರೈಲು ಶೌಚಾಲಯ ವಿನ್ಯಾಸ ರೂಪಿಸಿದ್ದು, ಅದಕ್ಕೆ ಎರಡನೇ ಬಹುಮಾನ ಪಡೆದಿದ್ದಾರೆ.

ಏಜೆನ್ಸೀಸ್ 17 Jun 2016, 12:32 pm
ಮಣಿಪಾಲ: ರೈಲಿನಲ್ಲಿ ಪ್ರಯಾಣಿಸುವಾಗ ಕಾಡುತ್ತಿದ್ದ ಶೌಚಾಲಯದ ಗಲೀಜಿಗೆ ಇನ್ನು ಹೆದರಬೇಕಿಲ್ಲ. ಮಣಿಪಾಲ ವಿಶ್ವವಿದ್ಯಾಲಯದ ವಿದ್ಯಾರ್ಥಿ ವಿನೋದ್‌ ಆ್ಯಂಟನಿ ಥಾಮಸ್ ಅವರು ಇದಕ್ಕೆ ಸೂಕ್ತ ಪರಿಹಾರ ಮಾರ್ಗವೊಂದನ್ನು ಕಲ್ಪಿಸಿಕೊಟ್ಟಿದ್ದಾರೆ.
Vijaya Karnataka Web manipal student wins prize for designing waterless odourless loo for railways
ಮಣಿಪಾಲ ವಿದ್ಯಾರ್ಥಿ ವಿನ್ಯಾಸಗೊಳಿಸಿದ ರೈಲು ಶೌಚಾಲಯಕ್ಕೆ 2ನೇ ಸ್ಥಾನ


ವಿಶ್ವವಿದ್ಯಾಲಯದ ಆರ್ಕಿಟೆಕ್ಚರ್ ವಿಭಾಗದ 10ನೇ ಸೆಮಿಸ್ಟರ್ ವಿದ್ಯಾರ್ಥಿ ವಿನೋದ್‌ ಅವರು ರೈಲುಗಳಲ್ಲಿ ಅಳವಡಿಸಲು ನೀರು ಮತ್ತು ವಾಸನೆ ರಹಿತ ಶೌಚಾಲಯ ವಿನ್ಯಾಸ ರೂಪಿಸಿದ್ದು, ಅದಕ್ಕೆ ಎರಡನೇ ಬಹುಮಾನ ಪಡೆದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ 'ಸ್ವಚ್ಛ ಭಾರತ ಅಭಿಯಾನ'ದಡಿ ರೈಲ್ವೆಯು ಸಾರ್ವಜನಿಕರಿಗಾಗಿ ನೀರು ಮತ್ತು ವಾಸನೆ ರಹಿತ ಶೌಚಾಲಯ ವಿನ್ಯಾಸ ಸ್ಪರ್ಧೆ ಆಯೋಜಿಸಿತ್ತು.

ಲಖನೌದಲ್ಲಿ ರಿಸರ್ಚ್ ಡಿಸೈನ್ಸ್ ಅಂಡ್ ಸ್ಟಾಂಡರ್ಡ್‌ಸ್ ಆರ್ಗನೈಸೇಷನ್ ಆಯೋಜಿಸಿದ್ದ ಸ್ಪರ್ಧೆಯ ಹತ್ತು ಸ್ಪರ್ಧಿಗಳಲ್ಲಿ ವಿನೋದ್ ಒಬ್ಬರಾಗಿದ್ದರು. ಇವರ ಪ್ರದರ್ಶಿಸಿದ ವಿನ್ಯಾಸಕ್ಕೆ 2ನೇ ಸ್ಥಾನದೊಂದಿಗೆ 75 ಸಾವಿರ ರೂ. ಲಭಿಸಿದೆ.

ವಿನೋದ್‌ ಜತೆ ರಾಹುಲ್ ಗಾರ್ಗ್‌ ಮತ್ತು ಸೌರಭ್ ಹನ್ಸ್ ತಂಡ ಕೂಡ ಎರಡನೇ ಸ್ಥಾನವನ್ನು ಹಂಚಿಕೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ