ಆ್ಯಪ್ನಗರ

ಮತಾಂತರ ಕಿರುಕುಳ: ಮಹಿಳಾ ಸಾಂತ್ವನ ಕೇಂದ್ರಕ್ಕೆ ದೂರು

ಕ್ರೈಸ್ತ ಪಂಗಡ ಎಂದು ಹೇಳಿಕೊಳ್ಳುವ ಸಂಸ್ಥೆಯೊಂದರ ಮತಾಂತರದಿಂದ ಸಂಸಾರದಲ್ಲಿ ಬಿರುಕು ಮೂಡಿ ಬೀದಿಗೆ ಬಿದ್ದಿದ್ದು, ನ್ಯಾಯ ಕೊಡಿಸುವಂತೆ ಕೋಣಿ ಎಚ್‌ಎಂಟಿ ರಸ್ತೆ ನಿವಾಸಿ ಮಾರ್ಕ್‌ ಡಿಕೋಸ್ಟಾ ಎಂಬವರು ಇಲ್ಲಿನ ಮಹಿಳಾ ಸಾಂತ್ವನ ಕೇಂದ್ರಕ್ಕೆ ದೂರು ನೀಡಿದ್ದಾರೆ.

Vijaya Karnataka 25 Oct 2018, 3:11 pm
ಕುಂದಾಪುರ: ಕ್ರೈಸ್ತ ಪಂಗಡ ಎಂದು ಹೇಳಿಕೊಳ್ಳುವ ಸಂಸ್ಥೆಯೊಂದರ ಮತಾಂತರದಿಂದ ಸಂಸಾರದಲ್ಲಿ ಬಿರುಕು ಮೂಡಿ ಬೀದಿಗೆ ಬಿದ್ದಿದ್ದು, ನ್ಯಾಯ ಕೊಡಿಸುವಂತೆ ಕೋಣಿ ಎಚ್‌ಎಂಟಿ ರಸ್ತೆ ನಿವಾಸಿ ಮಾರ್ಕ್‌ ಡಿಕೋಸ್ಟಾ ಎಂಬವರು ಇಲ್ಲಿನ ಮಹಿಳಾ ಸಾಂತ್ವನ ಕೇಂದ್ರಕ್ಕೆ ದೂರು ನೀಡಿದ್ದಾರೆ.
Vijaya Karnataka Web news/udupi/matanthara
ಮತಾಂತರ ಕಿರುಕುಳ: ಮಹಿಳಾ ಸಾಂತ್ವನ ಕೇಂದ್ರಕ್ಕೆ ದೂರು


ರೋಮನ್‌ ಕೆಥೊಲಿಕ್‌ ಜನಾಂಗಕ್ಕೆ ಸೇರಿರುವ ನನ್ನನ್ನು ಆ ಸಂಸ್ಥೆಗೆ ಬರುವಂತೆ ಒತ್ತಡ ಹೇರಲಾಗುತ್ತಿದೆ. ಒಪ್ಪದೆ ಇದ್ದಾಗ ಪತ್ನಿ ಮತ್ತು ಮಕ್ಕಳನ್ನು ಛೂ ಬಿಟ್ಟು ಸುಳ್ಳು ಕೇಸು ದಾಖಲಿಸಿ ನಾನಾ ರೀತಿಯ ಚಿತ್ರಹಿಂಸೆ ನೀಡಿದ್ದಾರೆ. ಅರವಿಂದ ಮೋಟಾರ್ಸ್‌ನಲ್ಲಿ ಉದ್ಯೋಗಿಯಾಗಿರುವ ನಾನು ಇತ್ತೀಚೆಗಷ್ಟೇ ನಿವೃತ್ತಿಯಾಗಿದ್ದು ದಿಕ್ಕಿಲ್ಲದ್ದಂತಾಗಿದೆ. ಬೀದಿಗೆ ಬಿದ್ದಿರುವ ನನಗೆ ನ್ಯಾಯ ಒದಗಿಸಬೇಕು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ನ್ಯಾಯಕ್ಕಾಗಿ ಹೋರಾಟ: ಮಾರ್ಕ್‌ ಡಿಕೋಸ್ಟಾ ನೀಡಿರುವ ದೂರು ಸ್ವೀಕರಿಸಿದ್ದೇವೆ. ಕ್ರೈಸ್ತ ಪಂಗಡವಾಗಿ ಗುರುತಿಸಿಕೊಂಡಿರುವ ಸಂಸ್ಥೆಯ ಪ್ರಚೋದನೆಯಿಂದ ಅವರು ಪ್ರಸ್ತುತ ಬೀದಿಗೆ ಬಿದ್ದಿರುವುದಾಗಿ ಹೇಳಿಕೊಂಡಿದ್ದಾರೆ. ಮತಾಂತರಕ್ಕೆ ಅವರು ಒಪ್ಪದೇ ಇರುವುದು ಇದಕ್ಕೆ ಕಾರಣ ಎಂದು ಅವರು ಉಲ್ಲೇಖಿಸಿದ್ದು, ಅದರಂತೆ ರಾಜ್ಯ ಮಾನವ ಹಕ್ಕುಗಳ ಆಯೋಗ, ಜಿಲ್ಲಾ ಪೊಲೀಸ್‌ ಇಲಾಖೆ, ಗೃಹ ಇಲಾಖೆ, ಸಹಾಯಕ ಕಮಿಷನರ್‌ಗೆ ದೂರು ನೀಡಲು ತೀರ್ಮಾನಿಸಿದ್ದೇವೆ ಎಂದು ಹೇಳುತ್ತಾರೆ ಮಹಿಳಾ ಸಾಂತ್ವನ ಕೇಂದ್ರ ಅಧ್ಯಕ್ಷೆ ರಾಧಾದಾಸ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ