ಆ್ಯಪ್ನಗರ

ಮಂಗಳೂರಿನಲ್ಲಿ ಮೀನುಗಾರಿಕಾ ವಿವಿ ಸ್ಥಾಪನೆಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಒಲವು

ಮೀನುಗಾರಿಕಾ ಕಾಲೇಜಿನಲ್ಲಿ ಸೋಮವಾರ ನಡೆದ ಪ್ರಗತಿ ಮತ್ತು ಯೋಜನೆಗಳ ಅನುಷ್ಠಾನ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮೀನುಗಾರಿಕಾ ವಿವಿ ಸ್ಥಾಪಿಸುವ ಪ್ರಸ್ತಾವನೆಯನ್ನು ವಾರದೊಳಗೆ ತನಗೆ ಸಲ್ಲಿಸುವಂತೆ ಕಾಲೇಜು ಮುಖ್ಯಸ್ಥರಿಗೆ ಸೂಚನೆ ನೀಡಿದರು.

Vijaya Karnataka Web 28 Oct 2020, 9:13 am
ಮಂಗಳೂರು: ನಗರದ ಎಕ್ಕೂರಿನಲ್ಲಿರುವ ಮೀನುಗಾರಿಕೆ ಕಾಲೇಜಿನಲ್ಲಿ ಕರ್ನಾಟಕ ಮೀನುಗಾರಿಕಾ ವಿಜ್ಞಾನಗಳ ವಿಶ್ವ ವಿದ್ಯಾಲಯ ಸ್ಥಾಪಿಸುವ ಪ್ರಸ್ತಾವನೆಗೆ ಮಿನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಒಲವು ತೋರಿಸಿದ್ದಾರೆ.
Vijaya Karnataka Web kota srinivas poojary


ಮೀನುಗಾರಿಕಾ ಕಾಲೇಜಿನಲ್ಲಿ ಸೋಮವಾರ ನಡೆದ ಪ್ರಗತಿ ಮತ್ತು ಯೋಜನೆಗಳ ಅನುಷ್ಠಾನ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಚಿವರು, ಮೀನುಗಾರಿಕಾ ವಿವಿ ಸ್ಥಾಪಿಸುವ ಪ್ರಸ್ತಾವನೆಯನ್ನು ವಾರದೊಳಗೆ ತನಗೆ ಸಲ್ಲಿಸುವಂತೆ ಕಾಲೇಜು ಮುಖ್ಯಸ್ಥರಿಗೆ ಸೂಚನೆ ನೀಡಿದರು. ಕಾಲೇಜಿನ ಡೀನ್‌ ಡಾ.ಸೆಂಥಿಲ್‌ವೇಲು ಮತ್ತು ಕಾಲೇಜಿನ ಕೌಶಲ್ಯ ಅಭಿವೃದ್ಧಿ ಹಾಗೂ ಸುರಕ್ಷತಾ ತರಬೇತಿ ಕೇಂದ್ರದ ಸಂಯೋಜಕ ಡಾ.ರಾಮಚಂದ್ರ ನಾಯಕ್‌ ಮೀನುಗಾರಿಕಾ ಕಾಲೇಜನ್ನು ವಿಶ್ವವಿದ್ಯಾಲಯವನ್ನಾಗಿ ಪರಿವರ್ತಿಸಬೇಕು ಎಂಬ ಪ್ರಸಾಪ ಮಂಡಿಸಿದರು.

ಪ್ರಸಿದ್ಧ ಪಣೋಲಿಬೈಲು ಕಲ್ಲುಟ್ಟಿ ದೈವಸ್ಥಾನದ ಅನುವಂಶಿಕ ಅರ್ಚಕ ರಮೇಶ್ ಮೂಲ್ಯ ನಿಧನ..!

ಮಿನುಗಾರಿಕಾ ವಿಶ್ವ ವಿದ್ಯಾನಿಲಯ ಸ್ಥಾಪಿಸುವುದರಿಂದ ಆಗುವ ಪ್ರಯೋಜನ, ಮೀನಿನ ಉತ್ಪಾದನೆಯಲ್ಲಿಹೆಚ್ಚಳ, ಉದ್ಯೋಗ ಸೃಷ್ಟಿ, ಸ್ವಯಂ ಉದ್ಯೋಗದ ಅವಕಾಶಗಳು, ರಾಜ್ಯ ಮತ್ತು ದೇಶಕ್ಕೆ ಆಗುವ ಅನುಕೂಲತೆಗಳು ಇತ್ಯಾದಿಯಾಗಿ ಸಮಗ್ರ ವಿವರಗಳನ್ನು ಒಳಗೊಂಡ ವಿಶೇಷ ಟಿಪ್ಪಣಿ ಸಿದ್ಧಪಡಿಸಿ ತನಗೆ ಕಳುಹಿಸಿ ಕೊಡುವಂತೆ ಕಾಲೇಜಿನ ಡೀನ್‌ಗೆ ಸಚಿವರು ಸೂಚಿಸಿದರು. ವಿಶೇಷ ಟಿಪ್ಪಣಿಯನ್ನು ಮೀನುಗಾರಿಕಾ ಇಲಾಖೆ ಕಾರ್ಯದರ್ಶಿ ಮುಂದಿಟ್ಟು ಚರ್ಚಿಸಿ, ಬಳಿಕ ಅದನ್ನು ಸಚಿವ ಸಂಪುಟದಲ್ಲಿಮಂಡಿಸಿ ಅನುಮೋದನೆ ಪಡೆಯಲು ಪ್ರಯತ್ನಿಸಲಾಗುವುದು. ಸರಕಾರವು ಅನುಮತಿ ಕೊಡಬಹುದು ಎಂಬ ವಿಶ್ವಾಸವಿದೆ ಎಂದರು.

ರಾಜ್ಯೋತ್ಸವ ಪ್ರಶಸ್ತಿ ತಿರಸ್ಕರಿಸಿದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ…!

ಮೀನುಗಾರಿಕಾ ಕಾಲೇಜಿಗೆ 50 ವರ್ಷ ದಾಟಿದ್ದು, 51ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. 1960ರಲ್ಲಿ ಸ್ಥಾಪನೆಯಾದ ಇದು ರಾಜ್ಯದ ಏಕೈಕ ಮೀನುಗಾರಿಕಾ ಕಾಲೇಜು. 75 ಎಕರೆ ಜಾಗ ಹೊಂದಿದ್ದು, ಈ ಪೈಕಿ 25 ಎಕರೆಗೂ ಹೆಚ್ಚು ಜಾಗ ಖಾಲಿ ಇದೆ. 50 ವರ್ಷಗಳ ಹಿಂದೆ ನಿರ್ಮಾಣವಾದ ಹಾಸ್ಟೆಲ್‌ ಮತ್ತಿತರ ಕೆಲವು ಕಟ್ಟಡಗಳು ಶಿಥಿಲಾವಸ್ಥೆಗೆ ತಲುಪಿವೆ. ತಮಿಳುನಾಡು, ಕೇರಳ, ಆಂಧ್ರಪ್ರದೇಶಗಳಲ್ಲಿ ಮೀನುಗಾರಿಕಾ ವಿವಿ ಸ್ಥಾಪನೆಯಾಗಿದ್ದು, ಈ ಎಲ್ಲ ರಾಜ್ಯಗಳಲ್ಲಿ ಮೀನಿನ ಉತ್ಪಾದನೆ ಜಾಸ್ತಿಯಾಗಿದೆ. ಹಾಗಾಗಿ ಕರ್ನಾಟಕದಲ್ಲಿಯೂ ಮೀನುಗಾರಿಕಾ ಕಾಲೇಜು ಸ್ಥಾಪಿಸಬೇಕು ಎಂದು ಡೀನ್‌ ಡಾಸೆಂಥಿಲ್‌ ವೇಲು ಮನವಿ ಮಾಡಿದರು.

ಪಿಲಿಕುಳ ಉದ್ಯಾನವನಕ್ಕೆ ಹೊಸ ಮೆರುಗು ತಂದಿದ್ದ 21 ವರ್ಷದ ಕಿಂಗ್‌ ವಿಕ್ರಮ್ ಇನ್ನಿಲ್ಲ..!

ಡಾ.ರಾಮಚಂದ್ರ ನಾಯಕ್‌ ಮಾತನಾಡಿ, ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ ಅನುಷ್ಠಾನ, ಕೌಶಲ್ಯ ಅಭಿವೃದ್ಧಿ ಮತ್ತು ಸುರಕ್ಷತಾ ತರಬೇತಿ ಕೇಂದ್ರ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಆಧುನಿಕ ಫಿಶ್‌ ಫಾರಂ ಮತ್ತು ಸಂಶೋಧನಾ ಕೇಂದ್ರ ಹಾಗೂ ಪ್ರಸ್ತಾವಿತ ಕರ್ನಾಟಕ ಮೀನುಗಾರಿಕಾ ವಿಜ್ಞಾನಗಳ ವಿವಿ ಸ್ಥಾಪನೆಯ ಮಾಹಿತಿ ನೀಡಿದರು. ಮೀನುಗಾರಿಕಾ ವಿಶ್ವ ವಿದ್ಯಾನಿಲಯ ಸ್ಥಾಪನೆಯಾದರೆ ಅದಕ್ಕೆ ಸಂಯೋಜನೆಗೊಂಡು ಗಂಗೊಳ್ಳಿ, ಶಿವಮೊಗ್ಗ, ವಿಜಯಪುರಗಳಲ್ಲಿಹೊಸ ಮೀನುಗಾರಿಕಾ ಕಾಲೇಜು ಸ್ಥಾಪನೆ, 5 ಹೊಸ ಮೀನುಗಾರಿಕಾ ಪಾಲಿಟೆಕ್ನಿಕ್‌ ಮತ್ತು 5 ಮೀನುಗಾರಿಕಾ ಸಂಶೋಧನಾ ಕೇಂದ್ರಗಳನ್ನು ಆರಂಭಿಸಬಹುದು ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ