ಆ್ಯಪ್ನಗರ

ನಮೋಗಾಗಿ ಪ್ರಭು ಸೇವೆ : ಮೋದಿ ಅಭಿಮಾನಿಯಿಂದ 1 ರೂ. ರಿಕ್ಷಾ ಪ್ರಯಾಣ ದರ !

2014ರಿಂದಲೂ ಅವರು ಇದೇ ರೀತಿಯ ಸೇವೆಯ ಮೂಲಕ ಇವರು ಗಮನಸೆಳೆಯುತ್ತಿದ್ದಾರೆ. ಮೋದಿ ಸರಕಾರದ ಐದು ವರ್ಷದ ಕಾಲಾವಧಿಯಲ್ಲಿ ಪ್ರತಿ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸಹ ಅವರು ಇದೇ ರೀತಿಯ ಸೇವೆಯನ್ನು ನೀಡಿದ್ದರು.

Vijaya Karnataka Web 26 May 2019, 10:11 am
ಕುಂದಾಪುರ: ಕೇಂದ್ರದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರಕಾರ ಆಡಳಿತ ಚುಕ್ಕಾಣಿ ಹಿಡಿದಿರುವ ಹಿನ್ನೆಲೆಯಲ್ಲಿ ಮೋದಿಯವರ ಅಪ್ಪಟ ಅಭಿಮಾನಿ, ಇಲ್ಲಿನ ಆಟೋಚಾಲಕ ಸತೀಶ್‌ ಪ್ರಭು 5 ಕಿ.ಮೀ. ಪಯಣಕ್ಕೆ 1 ರೂಪಾಯಿ ದರ ನಿಗದಿಪಡಿಸಿ ಸೇವೆ ನೀಡುವುದರ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.
Vijaya Karnataka Web modi-auto


ಶುಕ್ರವಾರದಿಂದ 6 ದಿನಗಳ ಕಾಲ ಈ ಸೇವೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

2014ರಿಂದಲೂ ಅವರು ಇದೇ ರೀತಿಯ ಸೇವೆಯ ಮೂಲಕ ಇವರು ಗಮನಸೆಳೆಯುತ್ತಿದ್ದಾರೆ. ಮೋದಿ ಸರಕಾರದ ಐದು ವರ್ಷದ ಕಾಲಾವಧಿಯಲ್ಲಿ ಪ್ರತಿ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸಹ ಅವರು ಇದೇ ರೀತಿಯ ಸೇವೆಯನ್ನು ನೀಡಿದ್ದರು.

ಹಂಗಳೂರು ವಿನಾಯಕ ರಿಕ್ಷಾ ಸ್ಟ್ಯಾಂಡ್‌ನ ಆಟೋ ಚಾಲಕರಾಗಿರುವ ಸತೀಶ್‌, ತಮ್ಮ ಈ ವಿಶಿಷ್ಟ ಸೇವೆಯ ಬಗ್ಗೆ ಆಟೋ ಹಿಂದುಗಡೆ ಬ್ಯಾನರ್‌ ಕೂಡ ಅಳವಡಿಸಿದ್ದಾರೆ.

ಪ್ರಭು ಅವರ ಈ ಸೇವೆ ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರವಾಗಿದೆ.

ಸಾಕಷ್ಟು ಉತ್ತಮ ಕೆಲಸ


ಕಳೆದ 5 ವರ್ಷಗಳಲ್ಲಿ ಸಾಕಷ್ಟು ಉತ್ತಮ ಕೆಲಸಗಳು ಪ್ರಧಾನಿ ಮೋದಿ ಅವರಿಂದಾಗಿದೆ. ಅಭಿಮಾನದಿಂದ ಈ ಸೇವೆ ನೀಡುತ್ತಿದ್ದೇನೆ . ಮೋದಿ ಸರಕಾರ ಮತ್ತೆ ಅಸ್ತಿತ್ವಕ್ಕೆ ಮರಳುತ್ತಿರುವ ಸಂಭ್ರಮವನ್ನು ಊ ರೀತಿಯಲ್ಲಿ ಹಂಚಿಕೊಳ್ಳುತ್ತಿದ್ದೇನೆ. 5 ದಿನಗಳ ಪರ್ಯಂತ 5 ಕಿ.ಮೀ.ವರೆಗಿನ ಪ್ರಯಾಣಕ್ಕೆ 1 ರೂ. ಪಡೆಯಲಿದ್ದು ಅದರಿಂದ ಸಂಗ್ರಹಿತ ಮೊತ್ತವನ್ನು ಜನಸೇವೆಗೆ ಬಳಕೆ ಮಾಡಲು ತೀರ್ಮಾನಿಸಿದ್ದೇನೆ ಎಂದು ಆಟೋ ಚಾಲಕ ಸತೀಶ್‌ ಪ್ರಭು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ